ಲ್ಯಾಪ್ಟಾಪ್-ಸೋಲಾರ್ ದೀಪ ವಿತರಿಸಿದ ಸಿದ್ದರಾಮಯ್ಯ
Team Udayavani, Jun 5, 2020, 11:09 AM IST
ಗುಳೇದಗುಡ್ಡ: ಪಟ್ಟಣದ ಹಾದಿಬಸವೇಶ್ವರ ದೇವಸ್ಥಾನ ಹತ್ತಿರ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುರಸಭೆ 2018-19ನೇ ಸಾಲಿನ ಎಸ್ ಎಫ್ಸಿ ಶೇ.5ರ ಅನುದಾನದಲ್ಲಿ ವಿಕಲಚೇತನರಿಗೆ ಮೋಟರ್ ಸೈಕಲ್, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಹಾಗೂ 2019-20ನೇ ಸಾಲಿನ ಎಸ್ಎಫ್ಸಿ ಶೇ.24.10 ಅನುದಾನದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಬಡ ಕುಟುಂಬಗಳಿಗೆ ಸೋಲಾರ್ ದೀಪ ವಿತರಿಸಿದರು.
ನಂತರ ಮಾತನಾಡಿದ ಅವರು, ಎಸ್.ಸಿ., ಎಸ್.ಟಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನ ಬಡ ಜನರಿಗೆ ಸರ್ಕಾರ ಸಾಕಷ್ಟು ಉಪಯುಕ್ತ ಯೋಜನೆ ರೂಪಿಸಿದೆ. ಈ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ರವೀಂದ್ರನಾಥ ಅಂಗಡಿ, ಸದಸ್ಯರಾದ ವಂದನಾ ಭಟ್ಟಡ, ಶಿಲ್ಪಾ ಹಳ್ಳಿ, ವಿನೋದ ಮದ್ದಾನಿ, ನಾಗರತ್ನಾ ಲಕ್ಕುಂಡಿ, ಉಮೇಶ ಹುನಗುಂದ, ರಫೀಕ ಕಲಬುರ್ಗಿ, ವಿಠಲ ಕಾವಡೆ, ಸಂತೋಷ ನಾಯನೇಗಲಿ, ಸಂಜಯ ಬರಗುಂಡಿ, ಹೊಳಬಸು ಶೆಟ್ಟರ, ನಾಗಪ್ಪ ಗೌಡರ, ಪ್ರಶಾಂತ ಜವಳಿ, ಮಹಾಂತೇಶ ಲಕ್ಕುಂಡಿ, ಗೋಪಾಲ ಭಟ್ಟಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು