ಲಯನ್ಸ್ ಕ್ಲಬ್ ವಲಯ ಕ್ರಿಕೆಟ್ : ಮಹಾಲಿಂಗಪುರ ಚಾಂಪಿಯನ್
Team Udayavani, Jan 16, 2022, 9:01 PM IST
ಮಹಾಲಿಂಗಪುರ: ಜಮಖಂಡಿಯ ತಾಲೂಕು ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಆಶ್ರಯದಲ್ಲಿ ನಡೆದ ಪ್ರಾಂತ್ಯ 11ರ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಾಲಿಂಗಪುರದ ಸಿದ್ದು ನಕಾತಿ ನಾಯಕತ್ವದ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ರಾಮದುರ್ಗ, ಬಾಗಲಕೋಟೆ, ಜಮಖಂಡಿ, ಮೂಡಲಗಿ, ನರಗುಂದ, ವಿಜಯಪುರ ಮುಂತಾದ ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಜಮಖಂಡಿ ಮತ್ತು ಮಹಾಲಿಂಗಪುರ ತಂಡಗಳು ಅಂತಿಮ ಹಂತಕ್ಕೆ ತಲುಪಿ ಮಹಾಲಿಂಗಪುರ ಚಾಂಪಿಯನ್ ಆಗಿ ಹೊರಹೊಮ್ಮಿತು. ಡಾ| ವೆಂಕಟೇಶ ಬುರುಡ ಪಂದ್ಯಶ್ರೇಷ್ಠ, ಷಣ್ಮುಖ ಶಿಂಧೆ ಸರಣಿ ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದರು.
ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ ನಗದು 15 ಸಾವಿರ ಮತ್ತು ಟ್ರೋμ ಪ್ರದಾನ ಮಾಡಲಾಯಿತು. ಮುತ್ತಿನ ಕಂಠಿಮಠ ಸ್ವಾಮೀಜಿ ಮತ್ತು ಶಾಸಕ ಆನಂದ ನ್ಯಾಮಗೌಡ ಪಂದ್ಯಾವಳಿ ಉದ್ಘಾಟಿಸಿದರು.
ಮಾಜಿ ಎಂಎಲ್ಸಿ ಜಿ.ಎಸ್. ನ್ಯಾಮಗೌಡ, ಯೋಗಪ್ಪ ಸವದಿ, ಸಂಗಮೇಶ ನಿರಾಣಿ, ಕಾಂತಿಲಾಲ, ಬಸವರಾಜ ಕೊಣ್ಣೂರ, ಕಾಡು ಮಾಳಿ, ನ್ಯಾಯವಾದಿ ಎಸ್. ಎಂ. ಜತ್ತಿ, ಸಂಘಟನಾ ಸಮಿತಿ ಅಧ್ಯಕ್ಷ ಎಂಜೆಎಫ್ ಡಾ| ರಂಗನಾಥ ಸೋನವಾಲ್ಕರ್ ವಹಿಸಿದ್ದರು, ವಲಯ ಅಧ್ಯಕ್ಷ ಎಂಜೆಎಫ್ ಎಚ್. ಆರ್. ಮಹಾರಡ್ಡಿ, ಜಮಖಂಡಿ ಸಂಸ್ಥೆಯ ಅಧ್ಯಕ್ಷ ಬಸಲಿಂಗಯ್ಯ ಬೃಂಗಿಮಠ, ಕಾರ್ಯದರ್ಶಿ ಡಾ| ಮಂಜುನಾಥ ಮಲಗಾಣ, ಖಜಾಂಚಿ ಪ್ರಭು ಜನವಾಡ, ಡಾ| ವಿಶ್ವನಾಥ ಗುಂಡಾ, ಮಹಾಲಿಂಗಪುರ ವಲಯ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ವಿಶ್ವನಾಥ ಗುಂಡಾ ಇದ್ದರು.