ಮುಧೋಳದಲ್ಲಿ ದೆಹಲಿ ಮಾದರಿಯ ಕೊಲೆ: ತಂದೆಯ ದೇಹವನ್ನು ತುಂಡು ಮಾಡಿ ಕೊಳವೆ ಬಾವಿಗೆಸೆದ ಮಗ
Team Udayavani, Dec 13, 2022, 10:55 AM IST
ಬಾಗಲಕೋಟೆ: ಇತ್ತೀಚೆಗೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ಪ್ರಿಯತಮೆ ಕೊಲೆ ಮಾದರಿಯಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಕೊಲೆಯೊಂದು ನಡೆದಿದೆ. ತಂದೆಯನ್ನು ಕೊಲೆ ಮಾಡಿ ದೇಹ ತುಂಡು ತುಂಡು ಮಾಡಿದ ಪಾಪಿ ಮಗ, ದೇಹದ ಭಾಗವನ್ನು ಕೊಳವೆ ಬಾವಿಗೆಸೆದ ಹೃದಯವಿದ್ರಾವಕ ಘಟನೆ ನಡೆದಿದೆ.
ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ವಾರದ ಹಿಂದೆ ಈ ಘಟನೆ ನಡೆದಿದ್ದು, ತಂದೆಯ ದೇಹವನ್ನು 30 ಕ್ಕೂ ಹೆಚ್ಚ ತುಂಡು ತುಂಡು ಮಾಡಿ ಮಗ ಕೊಳವೆ ಬಾವಿಗೆ ಹಾಕಿದ್ದಾನೆ.
ಪರಶುರಾಮ ಕುಳಲಿ (54 ವ) ಕೊಲೆಯಾದ ವ್ಯಕ್ತಿ. ಮಗ ವಿಠಲ ಕುಳಲಿ (20 ವ) ಕೊಲೆ ಮಾಡಿದ ಮಗ.
ಡಿಸೆಂಬರ್ 6 ರಂದು ರಾತ್ರಿ 12 ಗಂಟೆ ವೇಳೆ ಈ ಭಯಾನಕ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಪರಶುರಾಮನು ಮಗನಿಗೆ ಬೈಯ್ಯುವುದು, ಹಲ್ಲೆ ಮಾಡುವುದು ಮಾಡುತ್ತಿದ್ದನಂತೆ, ಇದರಿಂದ ರೋಸಿ ಹೋದ ಮಗ ವಿಠಲ, ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಮ್ಮದೇ ಹೊಲದಲ್ಲಿನ ಕೊಳವೆ ಬಾವಿಗೆ ದೇಹ ಸಾಗಿಸಿದ್ದಾನೆ. ದೇಹ ಕೊಳವೆ ಬಾವಿಗೆ ಇಳಿಯದೆ ಇದ್ದಾಗ ಕೊಡಲಿಯಿಂದ ತುಂಡು ತಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ.
ಇದನ್ನೂ ಓದಿ:ಇಶಾಂತ್, ರಹಾನೆಗಿಲ್ಲ ಸೆಂಟ್ರಲ್ ಕಾಂಟ್ರಾಕ್ಟ್: ಪಾಂಡ್ಯ, ಸೂರ್ಯ, ಗಿಲ್ ಗೆ ಬಡ್ತಿ ಸಾಧ್ಯತೆ
ಇದೀಗ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಜೆಸಿಬಿಯಿಂದ ಕೊಳವೆಬಾವಿ ಅಗೆದು ಪೊಲೀಸರು ಶವ ಹೊರತೆಗೆದಿದ್ದಾರೆ.
ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಗ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು