ಸೋಂಕಿತರಲ್ಲಿ ಆನಂದ ತರುವ ಸಂಕಲ್ಪ
ಶಾಸಕರಿಂದ ನಿತ್ಯ ಊಟ-ಎರಡು ಆಂಬ್ಯುಲೆನ್ಸ್ | ಶಿಕ್ಷಕರ ಬಳದಿಂದ 250 ರೋಗಿಗಳಿಗೆ ಉಪಾಹಾರ
Team Udayavani, May 24, 2021, 5:22 PM IST
ಮಲ್ಲೇಶ ರಾ. ಆಳಗಿ
ಜಮಖಂಡಿ: ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೊಳಗಾದ ಜಮಖಂಡಿ ಕ್ಷೇತ್ರ ವ್ಯಾಪ್ತಿಯ ಜನರಿಗೆ ಇಲ್ಲಿನ ಶಾಸಕ ಆನಂದ ನ್ಯಾಮಗೌಡ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಲವು ರೀತಿಯ ನೆರವು ನೀಡುತ್ತಿದ್ದು, ಜನರಿಂದ ಶ್ಲಾಘನೆಗೆ ಒಳಗಾಗಿದೆ.
ಶಾಸಕ ಆನಂದ ಸಿದ್ದು ನ್ಯಾಮಗೌಡ, ಸ್ವಂತ ಖರ್ಚಿನಲ್ಲಿ ನಗರದ ವಿಠÛಲಸಾಹೇಬ ಮಂದಿರ ಆವರಣದಲ್ಲಿ ಪ್ರತಿನಿತ್ಯ ಖಾಸಗಿ ಆಸ್ಪತ್ರೆಯ ಸುಮಾರು 200ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ಉಪಹಾರ ಮತ್ತು ಎರಡು ಹೊತ್ತು ಊಟದ ವ್ಯವಸ್ಥೆ ಮಾಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಒಂದು ವಾರದಿಂದ ಆರಂಭಗೊಂಡ ಈ ಅನ್ನದಾಸೋಹ ಕಾಯಕದಲ್ಲಿ ಯಾವುದೇ ಪ್ರತಿಫಲ ಬಯಸದೇ ಅಂದಾಜು 60ಕ್ಕೂ ಜನರು, ಶಾಸಕರ ಆಶಯದಂತೆ ಕೆಲಸ ಮಾಡುತ್ತಿದ್ದಾರೆ. ಅಡಿಗೆ ತಯಾರಿಕೆಯಿಂದ ಹಿಡಿದು ರೋಗಿಗಳಿಗೆ ಆಹಾರ ಕಿಟ್ ತಲುಪಿಸುವರೆಗೆ ಎಲ್ಲ ರೀತಿ ಸುರಕ್ಷತಾ ಕ್ರಮ ಅಳವಡಿಸಿದ್ದಾರೆ.
ಲಾಕ್ಡೌನ್ ಮುಕ್ತಾಯಗೊಳಿಸುವರೆಗೆ ಪ್ರತಿನಿತ್ಯ 200 ಜನರಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಉಪಾಹಾರದಲ್ಲಿ ಇಡ್ಲಿ, ದೋಸೆ, ಪಡ್ಡು, ಉಪ್ಪಿಟ್ಟು, ಅವಲಕ್ಕಿ ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತಿನ ಊಟದಲ್ಲಿ ಎರಡು ತರಹದ ಪಲ್ಲೆ, ಚಪಾತಿ, ಅನ್ನ, ಸಾರು, ಜತೆಗೆ ಒಂದು ಕಾಳು, ಇನ್ನೊಂದು ದಿನ ಹಣ್ಣು ನೀಡಲಾಗುತ್ತಿದೆ.
ಸರಕಾರಿ ಆಸ್ಪತ್ರೆಗಳಲ್ಲಿ, ಕೊರೊನಾ ಕೇರ್ ಸೆಂಟರ್ದಲ್ಲಿ ಉಪಾಹಾರ-ಊಟದ ಕಿಟ್ ಗಳನ್ನು ನೀಡುತ್ತಿಲ್ಲ. ಏಕೆಂದರೆ ಸರಕಾರ ಕೊರೊನಾ ಸೋಂಕಿತರಿಗೆ ಪೌಷ್ಟಿಕ ಆಹಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಆಹಾರ ಕಿಟ್ ನೀಡುತ್ತಿಲ್ಲ. ಸರಕಾರಿ ಆಸ್ಪತ್ರೆ ಮತ್ತು ಕೊರೊನಾ ಕೇರ್ ಸೆಂಟರ್ ಹೊರತು ಪಡಿಸಿ ಉಳಿದ ಎಲ್ಲ ಕೊರೊನಾ ಆಸ್ಪತ್ರೆಗಳಲ್ಲಿರುವ ಅಂದಾಜು 250 ರೋಗಿಗಳಿಗೆ ಉಪಾಹಾರ, ಊಟದ ಕಿಟ್ ನೀಡಲಾಗುತ್ತಿದೆ.
ನಗರದ ಓಮಿಸಾ ಕೊರೊನಾ ಆಸ್ಪತ್ರೆ, ಕೆಎಲ್ಇ ಕೊರೊನಾ ಆಸ್ಪತ್ರೆ, ಧನ್ವಂತರಿ ಮಲ್ಟಿಸ್ಪೇಷಾಲಿಟಿ ಕೊರೊನಾ ಆಸ್ಪತ್ರೆ, ಎಸ್.ಎಸ್.ಪಾಟೀಲ ಕೊರೊನಾ ಆಸ್ಪತ್ರೆಯಲ್ಲಿರುವ ಸೋಂಕು ರೋಗಿಳಿಗೆ ಉಪಾಹಾರ, ಊಟದ ಪೊಟ್ಟಣ ಪೂರೈಸಲಾಗುತ್ತಿದೆ. ಉಚಿತ ಆಂಬ್ಯುಲೆನ್ಸ್: ಶಾಸಕ ಆನಂದ ನ್ಯಾಮಗೌಡ, ಗ್ರಾಮೀಣ ಜನತೆಗೆ ದೂರದ ಆಸ್ಪತ್ರೆಗಳಿಗೆ ತೆರಳಲು ಆಗುವ ತೊಂದರೆ ಗಮನಿಸಿ ಗ್ರಾಮೀಣ ಭಾಗಕ್ಕೆ ಹೊಸದಾಗಿ ಆಂಬ್ಯುಲೆನ್ಸ್ ಸೇವೆ ಆರಂಭಸಿದ್ದಾರೆ.
ರೋಗಿಗಳು ಮನೆಯಲ್ಲಿ ಕುಳಿತು ಹೆಲ್ಪ್ಲೈನ್ ಕಾಲ್ ಮಾಡಿದರೆ ಮನೆ ಬಾಗಿಲಕ್ಕೆ ಆಂಬ್ಯುಲೆನ್ಸ್ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಸರಕಾರಿ ಪಿ.ಬಿ.ಹೈಸ್ಕೂಲ್ದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಜನರಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ತುರ್ತು ನಿಗಾದಲ್ಲಿರುವ ರೋಗಿಗಳ ಕುಟುಂಬಗಳ ಜತೆಗಿದ್ದು, ಆತ್ಮಸ್ಥೆರ್ಯ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವ ಜನರೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ