ಶವಸಂಸ್ಕಾರಕ್ಕೆ ಹೆಗಲಾಗುವ ಕುಟುಂಬವೇ ಅನಾಥವಾಯ್ತು!

| ಕ್ರೂರಿ ಕೋವಿಡ್‍ಗೆ ಕಣ್ಣೀರಾದ ಸಮಾಜ ಸೇವಕರು | ಅಂತಿಮ ಸಂಸ್ಕಾರ ನಡೆಸುವ ತಂಡದ ಯುವಕನ ತಾಯಿ ಕೋವಿಡ್‌ಗೆ ಬಲಿ

Team Udayavani, Apr 24, 2021, 5:50 PM IST

ghnhgnht

ವರದಿ :ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಇದೊಂದು ಕರುಳು ಹಿಂಡುವ ಪ್ರಸಂಗ. ಇದಕ್ಕೆ ಸಾಕ್ಷಿಯಾದವರೆಲ್ಲ ಕ್ರೂರಿ ಕೊರೊನಾಗೆ ಕಣ್ಣೀರಿನ ಆಕ್ರೋಶ ಹೊರ ಹಾಕಿದರು. ಅಸಹಾಯಕರು, ಅನಾಥರು, ಶ್ರೀಮಂತರು, ಬಡವರು ಯಾರ ಮನೆಯಲ್ಲಿ ಯಾರೇ ಮೃತಪಟ್ಟರೂ ತಕ್ಷಣ ಅಲ್ಲಿ ಹಾಜರಿದ್ದು, ಅಂತಿಮ ಸಂಸ್ಕಾರದ ಜತೆಗೆ ಮೃತದೇಹ ಸಾಗಿಸಲು ಹೆಗಲು ಕೊಡುವ ತಂಡದ ಯುವಕನೊಬ್ಬನ ತಾಯಿ ಮೃತಪಟ್ಟಾಗ ಅಲ್ಲಿ ಅದೇ ತಂಡಕ್ಕೆ ಶವಸಂಸ್ಕಾರ ನಡೆಸಲು ಅವಕಾಶ ಸಿಗಲಿಲ್ಲ.

ಹೆತ್ತು-ಹೊತ್ತು ಸಾಕಿದ ತಾಯಿ ಮೃತಪಟ್ಟಾಗ ಅವಳ ಅಂತ್ಯಕ್ರಿಯೆ ನಡೆಸಲೂ ಆ ಯುವಕ ಹಾಗೂ ಸೇವೆಯ ತಂಡ ಚಡಪಡಿಸುವ ಪ್ರಸಂಗ ಎದುರಿಸಬೇಕಾಯಿತು. ಈ ವೇಳೆ ಆ, ಯುವಕನ ಸಂಕಟ ಹೇಳತೀರದ್ದಾಗಿತ್ತು.

ಏನಿದು ಪ್ರಸಂಗ?: ವಿದ್ಯಾಗಿರಿಯ 57 ವರ್ಷದ ಮಹಿಳೆಯೊಬ್ಬರು ಕಳೆದ ಐದು ದಿನಗಳ ಹಿಂದೆ ಕೊರೊನಾ 2ನೇ ಅಲೆಯ ಸೋಂಕಿಗೆ ಒಳಗಾಗಿದ್ದರು. ಮೊದಲು ಕೆಮ್ಮು, ನೆಗಡಿ, ಜ್ವರ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ ಕ್ರೂರಿ ಕೊರೊನಾ ಆ ತಾಯಿಯ ದೇಹ ಆವರಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಆ ಮಹಿಳೆ, ಗುರುವಾರ ರಾತ್ರಿ 11:45ರ ಸುಮಾರಿಗೆ ಅಸುನೀಗಿದರು. ತಾಯಿಯ ಶವವನ್ನು ಕುಟುಂಬದ ವಶಕ್ಕೆ ಪಡೆದು ತಮ್ಮ ಸಂಪ್ರದಾಯದಂತೆ ವಿಧಿ-ವಿಧಾನದೊಂದಿಗೆ ಅಂತಿಮ ಸಂಸ್ಕಾರ ನಡೆಸಬೇಕೆನ್ನುವ ಕಾರ್ಯಕ್ಕೆ ಕೋವಿಡ್‌ ನಿಯಮಗಳು ಅಡ್ಡಿಯಾದವು. ನಗರದಲ್ಲಿ ನೂರಾರು ಜನ ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕೆ ಶವ ಸಾಗಿಸಲು ಹೆಗಲು ಕೊಡುವ ಸೇವೆ ಮಾಡುವ ಯುವಕನೇ ತನ್ನ ತಾಯಿಯ ಅಂತ್ಯಸಂಸ್ಕಾರ ನಡೆಸದಂತಹ ಪರಿಸ್ಥಿತಿ ಕೊರೊನಾ ನಿರ್ಮಾಣ ಮಾಡಿತ್ತು. ಹೀಗಾಗಿ ಕೋವಿಡ್‌ ನಿಯಮಾವಳಿ ಪ್ರಕಾರ, ಕುಟುಂಬದ ಮೂವರು, ಆ ಯುವಕನ ಸಮಾನ ಮನಸ್ಕ ಸ್ನೇಹಿತರ ಬಳಗ ಮಾತ್ರ ಹಾಜರಾಯಿತು.

ಆಸ್ಪತ್ರೆಯ ಕೊರೊನಾ ವಿಭಾಗದ ಅಂತ್ಯಸಂಸ್ಕಾರ ನಡೆಸುವ ವ್ಯಕ್ತಿ, ಕಟ್ಟಿಗೆ ತಂದು ಕೊಡುವ ವ್ಯಕ್ತಿ ಮಾತ್ರ ಬಂದಿದ್ದರು. ಕೇವಲ ಏಳೆಂಟು ಜನ ಕೂಡಿ, ರಾತ್ರಿ 2ರ ಹೊತ್ತಿಗೆ ಆ ತಾಯಿಯ ಅಂತ್ಯಸಂಸ್ಕಾರ ನಡೆಸಲಾಯಿತು. ಅದು ಕೋವಿಡ್‌ ನಿಯಮಾವಳಿ ಪ್ರಕಾರ. ಹೆಗಲು ಕೊಡುವ ತಂಡ: ನಗರದಲ್ಲಿ ಸುಮಾರು 9 ವರ್ಷಗಳಿಂದ ಸಮಾನ ಮನಸ್ಕ ಯುವಕರ ತಂಡವೊಂದು ತಮ್ಮ ಸಮಾಜವೂ ಸೇರಿದಂತೆ ಯಾರೇ ಅಸಹಾಯಕರು, ಬಡವರ ಮನೆಯಲ್ಲಿ ಮೃತಪಟ್ಟರೆ ಅಲ್ಲಿ ಹಾಜರಾಗಿ, ಎಲ್ಲ ರೀತಿಯ ವಿಧಿ-ವಿಧಾನ, ಪರಂಪರೆಯ ಕಾರ್ಯ ನಡೆಸಿ ಅಂತ್ಯಸಂಸ್ಕಾರ ನಡೆಸುವ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಆ ತಂಡದಲ್ಲಿ ಈ ಯುವಕನೂ ಕ್ರಿಯಾಶೀಲನಾಗಿ ಕೆಲಸ ಮಾಡಿ, ಮೃತಪಟ್ಟವರಿಗೆ ಅಂತಿಮ ನಮನ ಹೇಳಿ, ಆ ಮೂಲಕ ಸೇವಾ ಕಾರ್ಯ ಮಾಡುವ ಹೃದಯವಂತ. ಆದರೆ, ತನ್ನ ತಾಯಿಯೇ ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೂ ಕೊರೊನಾ ನಿಯಮಗಳು ಅಡ್ಡಿಯಾದವು. ಹೀಗಾಗಿ ಆತ ಎದುರಿಸಿದ ಪ್ರಸಂಗದಿಂದ ತೀವ್ರ ದುಃಖೀತನಾಗಿದ್ದ.

ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.