ಪುರಸಭೆ ಮೂವರು ಸದಸ್ಯೆಯರ ಸದಸ್ಯತ್ವ ರದ್ದು
Team Udayavani, May 22, 2021, 9:21 PM IST
ಮಹಾಲಿಂಗಪುರ: ಪಕ್ಷ ನೀಡಿದ ವಿಪ್ ಉಲ್ಲಂಘಿಸಿದ್ದ ಮಹಾಲಿಂಗಪುರ ಪುರಸಭೆ ಮೂವರು ಬಿಜೆಪಿ ಸದಸ್ಯೆಯರ ಸದಸ್ಯತ್ವವನ್ನು ಪಕ್ಷಾಂತರ ನಿಷೇಧ ನಿಯಮದಡಿ ರದ್ದುಗೊಳಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಶುಕ್ರವಾರ ಸ್ಥಳೀಯ ಜಿಎಲ್ಬಿಸಿ ಅತಿಥಿಗೃಹದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ನ. 9ರಂದು ನಡೆದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಚುನಾಯಿತರಾಗಿದ್ದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗೋದಾವರಿ ಬಾಟ ಪಕ್ಷದ ವಿಪ್ ಉಲ್ಲಂಘನೆ ಮಾಡಿ ವಿರೋಧಪಕ್ಷಕ್ಕೆ ಬೆಂಬಲ ನೀಡಿದ್ದರು. ಸದಸ್ಯತ್ವ ರದ್ದತಿಗೆ ಜಿಲ್ಲಾ ಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಸುಮಾರು 3-4 ತಿಂಗಳು ವಾದ ಪ್ರತಿವಾದ ನಡೆದು ಅಂತಿಮವಾಗಿ ವಿಪ್ ಉಲ್ಲಂಘನೆ ಸಾಬೀತಾದ ಕಾರಣ ಜಿಲ್ಲಾ ಧಿಕಾರಿಗಳು ಈ ಮೂವರು ಸದಸ್ಯೆಯರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಕ್ಷ ದ್ರೋಹ ಮಾಡುವವರಿಗೆ ಇದೊಂದು ನೀತಿ ಪಾಠವಾಗಿದೆ. ಅಧಿಕಾರ ಶಾಶ್ವತವಲ್ಲ. ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವುದು ಮುಖ್ಯವಾಗಿದೆ. ಜಿಲ್ಲಾ ಧಿಕಾರಿಗಳ ಆದೇಶ ಸ್ವಾಗತಿಸುತ್ತೇವೆ ಎಂದರು. ಬಿಜೆಪಿ ಮುಖಂಡರಾದ ಕುಳ್ಳೋಳ್ಳಿ, ಶಿವಾನಂದ ಅಂಗಡಿ, ಮನೋಹರ ಶಿರೋಳ, ಜಿ.ಎಸ್.ಗೊಂಬಿ, ಶೇಖರ ಅಂಗಡಿ, ಪ್ರಕಾಶ ಅರಳಿಕಟ್ಟಿ, ಶಿವಬಸು ಗೌಂಡಿ, ಶಿವಲಿಂಗ ಘಂಟಿ, ಭೀಮಸಿ ಗೌಂಡಿ, ಶಂಖರಗೌಡ ಪಾಟೀಲ, ಆನಂದ ಖೋತ, ಬಸವರಾಜ ಚಮಕೇರಿ, ಮಹಾಲಿಂಗಪ್ಪ ಮುದ್ದಾಪುರ, ಶಿವಾನಂದ ಹುಣಶ್ಯಾಳ, ವಿಕ್ರಮ ಕುಳ್ಳೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್