ಕೊಲೆ ಆರೋಪಿಗಳ ಬಂಧನ
Team Udayavani, Jun 14, 2021, 4:59 PM IST
ಕೆರೂರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸೇರಿ ವ್ಯಕ್ತಿಯೊಬ್ಬನನ್ನು ದೊಣ್ಣೆಗಳಿಂದ ಹೊಡೆದು ಕೊಲೆಗೈಯ್ದ ಪ್ರಕರಣ ಸಮೀಪದ ನರೇನೂರ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಲಕ್ಷ್ಮಣ ಹನಮಂತ ವಡ್ಡರ (45) ಕೊಲೆಯಾದ ವ್ಯಕ್ತಿ. ಈತನಿಗೆ ಅದೇ ನರೇನೂರ ಗ್ರಾಮದ ರೇಣುಕಾ ಮಾನಪ್ಪ ಬೆಳಗಂಟಿ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈಚೆಗೆ ರಾಜಿ ಪಂಚಾಯ್ತಿಯಲ್ಲಿ ಅನೈತಿಕ ಸಂಬಂಧ ಇತ್ಯರ್ಥಪಡಿಸಿದ್ದರೂ ಲಕ್ಷ್ಮಣ ಪೀಡಿಸುವುದನ್ನು ಬಿಟ್ಟಿದ್ದಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಕುಪಿತರಾದ ಆಕೆಯ ಸಂಬಂಧಿ ಕರಾದ ಸಂಜೂ ಯಮನಪ್ಪ ಚಿಕ್ಕೂರ, ಯಮನಪ್ಪ ರುದ್ರಪ್ಪ ಚಿಕ್ಕೂರ, ರೇಣುಕಾ ಬೆಳಗಂಟಿ ಹಾಗೂ ಮಂಜಪ್ಪ ಯಮನಪ್ಪ ಚಿಕ್ಕೂರ, ವಿಠ್ಠಲ ಯಮನಪ್ಪ ಚಿಕ್ಕೂರ ಇವರೆಲ್ಲ ಸೇರಿ ತಮ್ಮ ಜಮೀನಿನ ಬಳಿ ಕುರಿ ಮೇಯಿಸಲು ಬಂದ ಲಕ್ಷ್ಮಣ ವಡ್ಡರನಿಗೆ ದೊಣ್ಣೆ (ಬಡಿಗೆ)ಯಿಂದ ಹೊಡೆದಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಮೃತನ ಪತ್ನಿ ರೇಣುಕಾ ಲಕ್ಷ್ಮಣ ವಡ್ಡರ ಕೆರೂರ ಠಾಣೆಗೆ ನೀಡಿದ್ದಾರೆ.
ಈ ಕುರಿತು ತನಿಖೆ ಕೈಗೊಂಡ ಪೊಲೀಸ್ ಅ ಧಿಕಾರಿಗಳು ಆರೋಪಿಗಳಾದ ಸಂಜೂ ಚಿಕ್ಕೂರ, ಯಮನಪ್ಪ ಚಿಕ್ಕೂರ, ರೇಣುಕಾ ಬೆಳಗಂಟಿ ಅವರನ್ನು ಬಂಧಿ ಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಲೋಕೇಶ ಜಗಲಾಸರ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ರಮೇಶ ಹಾನಾಪೂರ, ಪಿಎಸ್ಐ ಆರ್.ವೈ. ಜಲಗೇರಿ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?