ಅಭಿವೃದ್ಧಿಗೆ ವೇದಿಕೆಯಾಗಲಿ ಹೊಸ ಭವನ!


Team Udayavani, Jan 22, 2021, 2:56 PM IST

New bhavan for Development

ಬಾಗಲಕೋಟೆ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹಲವು ಇಲಾಖೆಗಳು ಸಚಿವರು, ಜಿ.ಪಂ ಸಾಮಾನ್ಯ ಸಭೆ ನಡೆಯುವಾಗಲೂ ಹಿರಿಯ ಅಧಿಕಾರಿಗಳಿಗೂ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೇ ಅತ್ಯಂತ ಇಕ್ಕಟ್ಟಾಗಿದ್ದ ಜಿ.ಪಂ ಸಭಾಭವನ, ಇದೀಗ ಹೊಸ ಮೆರುಗಿನೊಂದಿಗೆ ಪ್ರತ್ಯೇಕವಾಗಿ ತಲೆ ಎತ್ತಿದ್ದು, ಈ ಹೊಸ ಭವನ, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಚರ್ಚೆಗೆ ವೇದಿಕೆಯಾಗಲಿ ಎಂಬ ಆಶಯ ಜಿಲ್ಲೆಯ ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.

ಹೌದು, ಈ ಹಿಂದೆ 2003ರಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವ ವೇಳೆಯೇ ಜಿ.ಪಂ, ಕಂದಾಯ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳಿಗಾಗಿ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಿಸಲಾಗಿತ್ತು. 1997ರಲ್ಲಿ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾದ ಬಳಿಕ, ಹಲವು ಕಚೇರಿಗಳೂ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಗೆ ಸ್ಥಳಾಂತರಗೊಂಡಿರಲಿಲ್ಲ. ಈಚಿನ ದಿನಗಳಲ್ಲಿ ಎಲ್ಲ ಇಲಾಖೆಗಳ ಕಚೇರಿಗಳು, ಸಚಿವರು, ಸಂಸದರ ಕಚೇರಿಗಳು, ಕೆಲವು ಪ್ರಾದೇಶಿಕ ವಲಯ ಕಚೇರಿಗಳಿಗೆ ಜಿಲ್ಲಾಡಳಿತ ಭವನದಲ್ಲಿ ಕಚೇರಿ ಒದಗಿಸಲಾಗಿದೆ.

ಆದರೆ, ಜಿಪಂಗಾಗಿ ಸಭಾ ಭವನ ನಿರ್ಮಾಣ ಮಾಡಲಾಗಿತ್ತಾದರೂ ಇದು, ಕೇವಲ 55 ರಿಂದ 60 ಜನ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಹೊಂದಿತ್ತು. ಜಿ.ಪಂ ಸದಸ್ಯರು, ಅದಕ್ಕೆ ಸಂಬಂಧಿತದ 27 ಇಲಾಖೆಗಳ ಅಧಿಕಾರಿಗಳಿಗೆ ಅದು ಸಾಕಾಗುತಿತ್ತು. ಆದರೆ, ಈಚೆಗೆ ಜಿ.ಪಂ ಸಾಮಾನ್ಯ ಸಭೆಗೂ ಹಲವು ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ. ಶಾಸಕರು, ಸಚಿವರು, ಸಂಸದರು ವೇದಿಕೆಯ ಮುಂಭಾಗ (ವೇದಿಕೆಯೂ ಇಕ್ಕಟ್ಟಾಗಿತ್ತು) ಕುಳಿತುಕೊಳ್ಳಬೇಕಾಗುತ್ತಿತ್ತು. ಇನ್ನು ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಬಂದಾಗಂತೂ, ಸಭೆ ನಡೆಸಲು ತೀವ್ರ ಸಮಸ್ಯೆಯಾಗಿತ್ತು. ಹೀಗಾಗಿ ಕಳೆದ 2017-18ನೇ ಸಾಲಿನಲ್ಲಿ ಹೊಸದಾಗಿ ಜಿ.ಪಂ. ಸಭಾ ಭವನ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ಕಳೆದ 2018ರ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ಕೂಡ ನೀಡಲಾಗಿತ್ತು.

4.50 ಕೋಟಿ ವೆಚ್ಚದಲ್ಲಿ ಹೊಸ ಭವನ: ಜಿ.ಪಂ.ನ 465.38 ಲಕ್ಷ (4.65 ಕೋಟಿ) ಮೊತ್ತದ ಹೊಸ ಜಿ.ಪಂ. ಸಭಾಭವನ ನಿರ್ಮಾಣದ ಹೊಣೆಯನ್ನು ಬಾಗಲಕೋಟೆ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಕಟ್ಟಡ ನಿರ್ಮಾಣದಲ್ಲಿ ವಿಶೇಷತೆ ಕಾಯ್ದುಕೊಂಡು ಬಂದಿರುವ ನಿರ್ಮಿತಿ ಕೇಂದ್ರ, ತನಗೆ ನೀಡಿದ ಕಾಲಾವಕಾಶದಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಈ ಹೊಸ ಸಭಾ ಭವನ, ಕೆಳ ಮಹಡಿ, ನೆಲ ಮಹಡಿ, ಮೊದಲ ಮಹಡಿ ಹೊಂದಿದೆ. ಶೌಚಾಲಯ, ಮುಂಭಾಗ ಮತ್ತು ಬಲ ಭಾಗದಲ್ಲಿ ಪೇವರ್ಸ್‌ ಹಾಗೂ ಸುತ್ತಲೂ ಗಾರ್ಡನ್‌ ನಿರ್ಮಿಸಿ, ಸುಂದರಗೊಳಿಸಲಾಗುತ್ತಿದೆ. ಕೆಳ ಮಹಡಿಯಲ್ಲಿ ಊಟದ ಕೊಠಡಿ ಇದ್ದು, 22 ಅಡಿ ಎತ್ತರದ ನೆಲ ಮಹಡಿಯಲ್ಲಿ 200 ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಿನಿ ಸಭಾ ಭವನ, ಅಧ್ಯಕ್ಷರು- ಹಿರಿಯ ಅಧಿಕಾರಿಗಳಿಗಾಗಿ ಪ್ರತ್ಯೇಕ ಕೊಠಡಿ ಇವೆ. 100 ಆಸನ ವ್ಯವಸ್ಥೆಯ ಮೊದಲ ಮಹಡಿಯಲ್ಲಿ ವೀಕ್ಷಕರಿ ಗ್ಯಾಲರಿ ನಿರ್ಮಿಸಲಾಗಿದೆ. ಇನ್ನು ಮುಂದೆ ಜಿ.ಪಂ. ಸಾಮಾನ್ಯ ಸಭೆ, ಸಚಿವರು, ಮುಖ್ಯಮಂತ್ರಿಗಳುಬಂದಾಗ, ಸಾರ್ವಜನಿಕರೂ ಈ ವೀಕ್ಷಕರ ಗ್ಯಾಲಿಯಲ್ಲಿ ಕುಲಿತು, ಜಿಲ್ಲೆಯ ಅಭಿವೃದ್ಧಿ ಕುರಿತ ಚರ್ಚೆಯನ್ನು ಕಣ್ಣಾರೆ ನೋಡಬಹುದು.

ವಿಲಕಚೇತನರಿಗೆ ವ್ಯವಸ್ಥೆ: ವಿದ್ಯುತ್‌ ಸಮಸ್ಯೆಯಾದರೆ ಸ್ವಯಂ ಚಾಲನೆಗೊಳ್ಳುವ ಜನರೇಟರ್‌, ಪ್ರತಿಧ್ವನಿ ರಹಿತ ಗೋಡೆಗಳ ನಿರ್ಮಾಣ, ಉತ್ತಮ ಧ್ವನಿ ವರ್ಧಕಗಳು, ಹೈಟೆಕ್‌ ಗುಣಮಟ್ಟದ ಪ್ರೊಜೆಕ್ಟರ್‌ ಅಳವಡಿಸಲಾಗಿದೆ.

ಲಿಫ್ಟ್ ವ್ಯವಸ್ಥೆ ಕೂಡ ಇದ್ದು, ವಿಕಲಚೇತನರಾಗಿ ರ್‍ಯಾಂಪ್‌ ಕೂಡ ನಿರ್ಮಿಸಲಾಗಿದೆ. ವಿಕಲಚೇತನರು, ಮೆಟ್ಟಿಲುಗಳ ಮೇಲೆ ಕಷ್ಟಪಟ್ಟು ತೆರಳದೇ, ರ್‍ಯಾಂಪ್‌ ಮೂಲಕ ಸಾಗಲು ವ್ಯವಸ್ಥೆ ಮಾಡಲಾಗಿದೆ.

ಕಾಲಮಿತಿಯಲ್ಲಿ ಪೂರ್ಣ: ಜಿಲ್ಲೆಯಲ್ಲಿ ಭೂ ಸೇನಾ ನಿಮಗಕ್ಕೆ ವಹಿಸಿದ ಕಾಮಗಾರಿಗಳು ಕಳಪೆ ಹಾಗೂ ವಿಳಂಬವಾಗುತ್ತವೆ ಎಂಬ ಆರೋಪವಿದ್ದು, ಈಚಿನ ದಿನಗಳಲ್ಲಿ ಈ ನಿಗಮಕ್ಕೆ ಯಾವುದೇ ಕಾಮಗಾರಿ ವಹಿಸುತ್ತಿಲ್ಲ. ಆದರೆ, ನಿರ್ಮಿತಿ ಕೇಂದ್ರ, ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳನ್ನು ಗುಣಮಟ್ಟ ಹಾಗೂ ಅತ್ಯಂತ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಿ, ರಾಜ್ಯದಲ್ಲಿಯೇ ಉತ್ತಮ ನಿರ್ಮಿತಿ ಕೇಂದ್ರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಹೊಸ ಜಿ.ಪಂ. ಸಭಾ ಭವನ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸಿದೆ. ಹೊಸ ಸಭಾ ಭವನ ಕೆಳ ಮಹಡಿ, ನೆಲ ಮಹಡಿ, ಮೊದಲ ಮಹಡಿ 14 ಸಾವಿರ ಚದರ ಅಡಿ ವಿಸ್ತೀರ್ಣ ಇದ್ದು, ಪೇವರ್ಸ್‌ ಸೌಂದರೀಕರಣ, ಶೌಚಾಲಯ 6 ಸಾವಿರ ಚದರ ಅಡಿ ಇವೆ. ಒಟ್ಟು 20 ಸಾವಿರ ಚದರ ಅಡಿಯಲ್ಲಿ ಹೊಸ ಜಿ.ಪಂ. ಸಭಾ ಭವನ ತಲೆ ಎತ್ತಿದ್ದು, ಜ. 22ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಾಗಲಕೋಟೆ ಶಾಸಕ ಡಾ|ವೀರಣ್ಣ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಇದನ್ನು ಜಿಲ್ಲೆಗೆ ಅರ್ಪಿಸಲಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾದ ಗೆಲುವು ಬದುಕಿಗೆ ದೊಡ್ಡ ಪಾಠ: ಮೋದಿ

ಜಿ.ಪಂ. ಹೊಸ ಸಭಾಭವನ ಅತ್ಯಂತ ಗುಣಮಟ್ಟ ಹಾಗೂ ನೀಡಿದ ಕಾಲಮಿತಿಯಲ್ಲಿ ನಿರ್ಮಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದೆ. ಈ ಸಭಾ ಭವನ ನಿರ್ಮಾಣಕ್ಕೆ ಉಪ ಮುಖ್ಯಮಂತ್ರಿಗಳು, ಬಾಗಲಕೋಟೆ ಶಾಸಕರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ವಿಶೇಷ ಮುತುವರ್ಜಿ ವಹಿಸಿ, ಗುಣಮಟ್ಟದ ಜತೆಗೆ ಅತ್ಯುತ್ತಮವಾಗಿ ನಿರ್ಮಿಸಲು ನಿರ್ದೇಶನ ನೀಡಿದ್ದರು. ಸಭಾ ಭವನದಲ್ಲಿ 200 ಗಣ್ಯರು ಕುಳಿತುಕೊಳ್ಳಲು ಆಸನಗಳಿದ್ದು, ವೀಕ್ಷಕರ ಗ್ಯಾಲರಿಯಲ್ಲಿ 100 ಜನ ಕುಳಿತುಕೊಳ್ಳಬಹುದು.
ಶಂಕರಲಿಂಗ ಗೋಗಿ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ.

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.