ಬಾದಾಮಿಗೆ ಮತ್ತೂಂದು ಕ್ಷೇತ್ರ ಕೊಡುಗೆ!


Team Udayavani, Mar 16, 2021, 3:26 PM IST

ಬಾದಾಮಿಗೆ ಮತ್ತೂಂದು ಕ್ಷೇತ್ರ ಕೊಡುಗೆ!

ಬಾಗಲಕೋಟೆ: ಜಿಲ್ಲೆಯಲ್ಲಿ ಅತಿಹೆಚ್ಚು ಜಿಪಂ ಕ್ಷೇತ್ರ ಹೊಂದಿರುವ ತಾಲೂಕುಗಳಲ್ಲಿ ಬಾದಾಮಿ ಕೂಡ ಒಂದು. ಅವಿಭಜಿತ ಬಾದಾಮಿ ತಾಲೂಕಿನಲ್ಲಿ ಈಮೊದಲು ಏಳು ಕ್ಷೇತ್ರಗಳಿದ್ದವು. ಅದರಲ್ಲಿ ಎರಡು ಕ್ಷೇತ್ರ ಗುಳೇದಗುಡ್ಡ ತಾಲೂಕಿಗೆ ಹಂಚಿಕೆಯಾದರೆ, ಐದು ಕ್ಷೇತ್ರಗಳು ಬಾದಾಮಿ ತಾಲೂಕಿನಲ್ಲಿ ಉಳಿಯಲಿದ್ದವು. ಆದರೆ, ಬಾದಾಮಿ ತಾಲೂಕು ಎರಡು ಕ್ಷೇತ್ರ ಕಳೆದುಕೊಂಡರೂ ಈ ಬಾರಿ ಆರು ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ತಾಲೂಕಿನಲ್ಲಿ ಕರಡಿಗುಡ್ಡ ಎಸ್‌. ಎನ್‌. ಹೊಸ ಜಿಪಂ ಕ್ಷೇತ್ರದ ಸ್ಥಾನ ಪಡೆದುಕೊಂಡಿದೆ.

ಹೌದು, ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಪಟ್ಟದಕಲ್ಲ, ಚಾಲುಕ್ಯ ಅರಸರ ರಾಜಧಾನಿ ಬಾದಾಮಿ, 12 ತಿಂಗಳೂ ಬತ್ತದ ಮಹಾಕೂಟ ಹೊಂಡ ಹೀಗೆಹಲವು ಐತಿಹಾಸಿಕ ಪ್ರವಾಸಿ ತಾಣ ಹೊಂದಿರುವ ಬಾದಾಮಿ ತಾಲೂಕಿನ ಆರು ಜಿ.ಪಂ. ಕ್ಷೇತ್ರಗಳು, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಪ್ರತಿನಿಧಿಸುವ ಬೀಳಗಿ ವಿಧಾನಸಭೆ ಕ್ಷೇತ್ರದಡಿ ಹಂಚಿಕೆಯಾಗಲಿವೆ. ಮೊದಲಿದ್ದ 2 ಕ್ಷೇತ್ರದ ಹೆಸರು ಉಳಿಕೆ: ಈ ತಾಲೂಕಿನಲ್ಲಿ ಕಳೆದ ಬಾರಿ ಅನವಾಲ, ಹಂಸನೂರ, ಜಾಲಿಹಾಳ, ನಂದಿಕೇಶ್ವರ, ಮುಷ್ಠಿಗೇರಿ, ನೀಲಗುಂದ, ಕಟಗೇರಿ ಸೇರಿ ಒಟ್ಟು ಆರು ಜಿಪಂ ಕ್ಷೇತ್ರಗಳಿದ್ದವು. ಅದರಲ್ಲಿ ಹಂಸನೂರ ಮತ್ತು ಕಟಗೇರಿ, ಗುಳೇದಗುಡ್ಡ ತಾಲೂಕಿನಡಿ ಬರುತ್ತಿದ್ದವು. ಇದೀಗ ಗುಳೇದಗುಡ್ಡ ತಾಲೂಕಿನಲ್ಲೂ

ಹೊಸ ಕ್ಷೇತ್ರಗಳನ್ನು ರಚನೆ ಮಾಡುತ್ತಿದ್ದು, ಉಳಿದ ಐದು ಕ್ಷೇತ್ರಗಳನ್ನು ಪುನರ್‌ವಿಂಗಡಿಸಿ, ಆರು ಕ್ಷೇತ್ರಗಳನ್ನು ಹೊಸದಾಗಿ ರಚಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.

16 ತಾಪಂ ಕ್ಷೇತ್ರಗಳು: ಕಳೆದ ಬಾರಿ ಗುಳೇದಗುಡ್ಡ ಹಾಗೂ ಬಾದಾಮಿ ಸೇರಿ ಬಾದಾಮಿ ತಾಲೂಕು ಪಂಚಾಯಿತಿ ಇತ್ತು. ಆಗ ಒಟ್ಟು 7 ಜಿಪಂ ಕ್ಷೇತ್ರಗಳು, 25 ತಾಪಂ ಕ್ಷೇತ್ರಗಳಿದ್ದವು. ಈ ಬಾರಿ ಗುಳೇದಗುಡ್ಡ ಪ್ರತ್ಯೇಕಗೊಂಡಿದ್ದು, ಬಾದಾಮಿ ತಾಲೂಕಿನಲ್ಲಿಯೇ ಈ ಬಾರಿ 6 ಜಿ.ಪಂ. ಕ್ಷೇತ್ರ ಹಾಗೂ 16 ತಾ.ಪಂ.ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.ಬಾದಾಮಿ ತಾಪಂ ವ್ಯಾಪ್ತಿಯಡಿಸೂಳಿಕೇರಿ, ಹಲಕುರ್ಕಿ, ಜಲಗೇರಿ,ನರೇನೂರ, ಉಗಲವಾಟ,ನೀರಲಕೇರಿ, ಕರಡಿಗುಡ್ಡ ಎಸ್‌.ಎನ್‌. ಖಾನಾಪುರ ಎಸ್‌. ಕೆ, ನರಸಾಪುರ, ಹೆಬ್ಬಳ್ಳಿ, ಮುತ್ತಲಗೇರಿ, ಬೇಲೂರ, ಜಾಲಿಹಾಳ, ಪಟ್ಟದಕಲ್ಲ, ನಂದಿಕೇಶ್ವರ, ಆಡಗಲ್ಲ ತಾಪಂ ಕ್ಷೇತ್ರಗಳಾಗಿ ಸ್ಥಾನ ಪಡೆಯಲಿವೆ.

ಪ್ರತಿಷ್ಠೆಯಾಗಲಿದೆ ಮೀಸಲಾತಿ: ಬಾದಾಮಿ ತಾಲೂಕಿನ ಆರು ಕ್ಷೇತ್ರಗಳಿಗೆ ಮೀಸಲಾತಿ ವಿಂಗಡಣೆ ಪ್ರತಿಷ್ಠೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ತಾಲೂಕಿನಿಂದ ಜಿಪಂಗೆ ಆಯ್ಕೆಯಾದವರಿಗೆ ಈವರೆಗೆ ಜಿಪಂ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಮಾತಿದೆ. ಹೀಗಾಗಿ ಈ ಬಾರಿ ಆಡಳಿತ ಪಕ್ಷ ಬಿಜೆಪಿ, ಈ ಕ್ಷೇತ್ರದಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಿಸಬೇಕೆಂಬ ಗುರಿ ಹಾಕಿಕೊಂಡಿದೆ. ಅದಕ್ಕೆ ಕಾರಣ, ಬಿಜೆಪಿ ಜಿಲ್ಲಾ ಅಧ್ಯಕ್ಷರು, ಸಂಸದರು ಇದೇ ತಾಲೂಕಿನವರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ವಿಧಾನಸಭೆ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದು, ಬಿಜೆಪಿ ಪ್ರಾಬಲ್ಯ ತೋರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂಬ ಮಾತುಕೇಳಿ ಬರುತ್ತಿದೆ. ಆದರೆ, ಸಿದ್ದರಾಮಯ್ಯ ಶಾಸಕರಾದಬಳಿಕ, ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ,ಹಿಂದೆಂದೂ ಕಾಣಿಸಿಲ್ಲ ಎಂಬುದು ದಿಟ. ಅವರಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮೆರೆಯಬೇಕು.ಅಷ್ಟೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು, ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

 ಹಲಕುರ್ಕಿ ಜಿ.ಪಂ. ಕ್ಷೇತ್ರ : ಈ ಕ್ಷೇತ್ರದಡಿ ಸೂಳಿಕೇರಿ, ಕಲಗೊಂಬ, ಕೆರಕಲಮಟ್ಟಿ, ಹೂಲಗೇರಿ, ಬಂದಕೇರಿ,ಯರಗೊಪ್ಪ ಇನಾಂ, ಅಗಸನಕೊಪ್ಪಲ,ಮಾಳಗಿ, ಹಲಕುರ್ಕಿ, ಮೇಲಿನ ಹಲಕುರ್ಕಿ, ಚಿಕ್ಕಮುಚ್ಚಳಗುಡ್ಡ, ಹಿರೇಮುಚ್ಚಳಗುಡ್ಡ, ಬೇಡರಬೂದಿಹಾಳ, ಹುಲ್ಲಿಕೇರಿ ಇನಾಂ, ಯಂಕಂಚಿ, ಮಣಿನಾಗರ, ಗುಬ್ಬೇರಕೊಪ್ಪ, ಮತ್ತಿಕಟ್ಟಿ, ಕಡಪಟ್ಟಿ ಎಸ್‌.ಕೆ

ಅಂದಾಜು ಮತದಾರರು: 28,142

ಜಲಗೇರಿ ಜಿ.ಪಂ. ಕ್ಷೇತ್ರ :

ನೀರಬೂದಿಹಾಳ, ಯಂಡಿಗೇರಿ, ಕರಡಿಗುಡ್ಡ ಎಸ್‌.ಎ,ಜಲಗೇರಿ (ಕೃಷ್ಣಾಪುರ),ಗಂಗನಬೂದಿಹಾಳ, ಅನವಾಲ, ಹನಮನೇರಿಇನಾಂ, ಕಲಬಂದಕೇರಿ, ಕೈನಕಟ್ಟಿ, ಕಾಡರಕೊಪ್ಪ,ಹೊಸಕೋಟಿ, ಶೀಪರಮಟ್ಟಿ, ಜಂಗವಾಡ,ಹವಳಖೋಡ, ಬೆಳ್ಳಿಖೀಂಡಿ, ಫಕೀರಬೂದಿಹಾಳ,ಹನಮನೇರಿ (ಸರಕಾರ), ಚಿಂಚಲಕಟ್ಟಿ, ಸಾಗನೂರ, ನರೇನೂರ.

ಅಂದಾಜು ಮತದಾರರು: 27,741

ಕರಡಿಗುಡ್ಡ ಎಸ್‌.ಎನ್‌ ಜಿ.ಪಂ. ಕ್ಷೇತ್ರ :

ಮಮಟಗೇರಿ, ಉಗಲವಾಟ, ಹಳಗೇರಿ, ತಪ್ಪಸಕಟ್ಟಿ,ಕಲ್ಲಾಪುರ ಎಸ್‌.ಕೆ,ನೀರಲಕೇರಿ, ರಡ್ಡೇರತಿಮ್ಮಾಪುರ, ಮುಷ್ಠಿಗೇರಿ,ಕರಡಿಗುಡ್ಡ ಎಸ್‌.ಎನ್‌. ಹನಮಸಾಗರ,ಕಾಕನೂರ, ಚಿಮ್ಮನಕಟ್ಟಿ, ಕರ್ಲಕೊಪ್ಪ, ಹಾಲಿಗೇರಿ, ಆಲೂರ ಎಸ್‌.ಕೆ, ಗೋವನಕೊಪ್ಪ,ಹಾಗನೂರ, ಬೀರನೂರ, ತಳಕವಾಡ.

ಅಂದಾಜು ಮತದಾರರು: 34,060

ನಂದಿಕೇಶ್ವರ ಜಿ.ಪಂ. ಕ್ಷೇತ :

ಸತತ 3ನೇ ಬಾರಿಯೂಈ ಕ್ಷೇತ್ರ ತನ್ನ ಸ್ಥಾನಉಳಿಸಿಕೊಂಡಿದ್ದು, ಈಕ್ಷೇತ್ರದಡಿ ನಂದಿಕೇಶ್ವರ, ನೆಲವಗಿ, ಗೋವಣಕಿ,ಮಂಗಳೂರ, ಶಿರಬಡಗಿ, ನವಿಲಹೊಳೆ,ಹಿರೇನಸಬಿ, ಗೋನಾಳ, ಪಟ್ಟದಕಲ್ಲ, ಬಾಚಿನಗುಡ್ಡ, ಬಿ.ಎನ್‌. ಜಾಲಿಹಾಳ, ಆಡಗಲ್ಲ,ಕಬ್ಬಲಗೇರಿ, ಕೆಂದೂರ, ಕುಟಕನಕೇರಿ.

ಅಂದಾಜು ಮತದಾರರು: 28,827

ಮುತ್ತಲಗೇರಿ ಜಿಪಂ ಕ್ಷೇತ್ರ :

ನೀಲಗುಂದಬಲದಾಗಿ ಹೊಸದಾಗಿ ರಚನೆಯಾಗಲಿರುವ ಮುತ್ತಲಗೇರಿ ಜಿಪಂ ವ್ಯಾಪ್ತಿಯಲ್ಲಿ ನೀಲಗುಂದ,ತಿಮ್ಮಾಪುರ ಎಸ್‌.ಎನ್‌, ಮುತ್ತಲಗೇರಿ, ಆಲದಕಟ್ಟಿ,ಯರಗೊಪ್ಪ ಎಸ್‌.ಬಿ., ಶಿವಪುರ, ಕಿತ್ತಲಿ, ಕಳಸ, ಸುಳ್ಳ, ನರಸಾಪುರ, ವಡವಟ್ಟಿ, ಬಂಕನೇರಿ, ಬೆಳವಲಕೊಪ್ಪ,ಕುಳಗೇರಿ ಕ್ರಾಸ್‌, ಖಾನಾಪುರ ಎಸ್‌.ಕೆ, ಚಿರ್ಲಕೊಪ್ಪ,ಸೋಮನಕೊಪ್ಪ, ಹೆಬ್ಬಳ್ಳಿ, ಲಖಮಾಪುರ, ಮಮರಡ್ಡಿಕೊಪ್ಪ, ಮಲ್ಲಾಪುರ ಎಸ್‌.ಎಲ್‌.

ಅಂದಾಜು ಮತದಾರರು: 36,581

ಜಾಲಿಹಾಳ ಜಿಪಂ ಕ್ಷೇತ್ರ :

ಈ ಕ್ಷೇತ್ರ ಈ ಬಾರಿಯೂ ಮುಂದುವರೆದಿದ್ದು,ಕ್ಷೇತ್ರದಡಿ ಕೆಲಹಳ್ಳಿಗಳ ಬದಲಾವಣೆ ಮಾಡಲಾಗಿದೆ.ಚೋಳಚಗುಡ್ಡ, ನಾಗರಾಳ ಎಸ್‌.ಬಿ, ಖ್ಯಾಡ,ಜಾಲಿಹಾಳ, ಹೊಸೂರ, ಗಿಡ್ಡನಾಯಕನಾಳ,ಗುಡ್ಡದಮಲ್ಲಾಪುರ, ನಸಗುನ್ನಿ, ಅನಂತಗಿರಿ,ಕಾತರಕಿ, ಜಕನೂರ, ಬೂದಿಹಾಳ, ನೀರಲಗಿ,ತಮಿನಾಳ, ಮಣ್ಣೇರಿ, ಚಿಕ್ಕನಸಬಿ, ಬೇಲೂರ, ಢಾಣಕಶಿರೂರ.

ಅಂದಾಜು ಮತದಾರರು: 32,153

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.