ಸರ್ಕಾರಿ ಜಾಗವನ್ನೇ ಮಾರಿದ ಪಿಡಿಒ?


Team Udayavani, Dec 10, 2019, 2:57 PM IST

bk-tdy-1

ಬಾಗಲಕೋಟೆ: ಗ್ರಾಮೀಣ ಪ್ರದೇಶವಾದರೂ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಇಲ್ಲಿನ ಶಿಗಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ, ಭೂಮಿಗೆ ಈಗ ಬಂಗಾರದ ಬೆಲೆ. ಇದನ್ನೇ ದುರುಪಯೋಗಪಡಿಸಿಕೊಂಡ ಗ್ರಾಪಂ. ಪಿಡಿಒ ಹಾಗೂ ಆಡಳಿತ ಮಂಡಳಿಯವರು, ಸರ್ಕಾರಿ ಜಾಗವನ್ನೇ ಮಾರಾಟ ಮಾಡಿದ್ದಾರೆ ಎಂಬ ಪ್ರಬಲ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಲೋಕಾಪುರ, ಸಾವಳಗಿ, ಸಿಮೀಕೇರಿ ಹೀಗೆ ಹಲವು ಗ್ರಾಪಂಗಳಲ್ಲಿ ನಿವೇಶನ ಬೆಲೆ ದುಬಾರಿಯಾಗಿವೆ. ಶೀಗಿಕೇರಿ ಸುತ್ತ, ನವನಗರ ಯೂನಿಟ್‌-3ರೂಪುಗೊಳ್ಳುವುದು ಖಾತ್ರಿಯಾದ ಬಳಿಕ ಹಾಗೂ ವಿವಿಧ ಪುನರ್‌ವಸತಿ ಕೇಂದ್ರಗಳಲ್ಲಿ ಶಿಗಿಕೇರಿ ಕ್ರಾಸ್‌ಗೆ ಸ್ಥಳಾಂತರಿಸಿದ ಬಳಿಕ, ಇಲ್ಲಿನ ಭೂಮಿಗೆ ಭಾರಿ ಬೆಲೆ ಬಂದಿದೆ. ಹಲವರು ಈ ಭಾಗದಲ್ಲಿ ನಿವೇಶನ ಖರೀದಿಗೆ ಮುಂದಾದರೆ, ಇನ್ನೂ ಕೆಲವರು ಪಂಚಾಯತನೊಂದಿಗೆ ಶಾಮೀಲಾಗಿ ಸರ್ಕಾರದ ಆಸ್ತಿಯನ್ನೇ ಕಬಳಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಬೇಡಿಕೆ: ಶಿಗಿಕೇರಿ ಗ್ರಾಮ ಈ ಮೊದಲು ನೀರಲಕೇರಿ ಗ್ರಾಪಂ. ವ್ಯಾಪ್ತಿಯಲ್ಲಿತ್ತು. 2015-16ರಲ್ಲಿ ನಡೆದ ಗ್ರಾಪಂ ಪುನರ್‌ವಿಂಗಡಣೆ ವೇಳೆ ಶಿಗಿಕೇರಿ ಪ್ರತ್ಯೇಕ ಪಂಚಾಯಿತಿಯಾಗಿ ರೂಪುಗೊಂಡಿದೆ. ಅಲ್ಲದೇ ಶಿಗಿಕೇರಿ ಗ್ರಾಮದ ಮೂಲಕ ರಾಯಚೂರುಬಾಚಿ ಹೆದ್ದಾರಿಯ ಕೂಡು ರಸ್ತೆ ಹಾದು ಹೋಗಿದ್ದು, ಇದರ ಪಕ್ಕದಲ್ಲೇ ಪೊಲೀಸರು ಖಾಸಗಿಯಾಗಿ ರೂಪಿಸಿದ ಪದ್ಮನಯನ ಕಾಲೋನಿ, ಕೆಎಚ್‌ಬಿ ಕಾಲೋನಿ ಇವೆ. ಅಲ್ಲದೇ ಸಂಗೋಂದಿ, ಶಿರಗುಪ್ಪಿ ತಾಂಡಾ, ಅಂಡಮುರನಾಳ ಹಾಗೂ ಕದಾಂಪುರ ಪುರನ್‌ವಸತಿ ಕೇಂದ್ರಗಳನ್ನು ಇಲ್ಲಿಯೇ ನಿರ್ಮಿಸಲಾಗಿದೆ.

ನಗರದಿಂದ 3 ಕಿ.ಮೀ ಹಾಗೂ ನವನಗರದಿಂದ 2 ಕಿ.ಮೀ ದೂರದಲ್ಲಿ ಇರುವ ಶಿಗಿಕೇರಿಯಲ್ಲಿ ಬಾಡಿಗೆದಾರರೂ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಲ್ಲಿ ನಿವೇಶನ ಪಡೆದವರು, ಮನೆಗಳನ್ನು ನಿರ್ಮಿಸಿ, ಬಾಡಿಗೆ ಕೊಟ್ಟಿದ್ದಾರೆ. ಹೀಗಾಗಿ ಶಿಗಿಕೇರಿ ಕ್ರಾಸ್‌ನಲ್ಲಿ ವಾಸಿಸಿದರೆ ಗ್ರಾಮೀಣ ಪ್ರಮಾಣ ಪತ್ರಗಳು ದೊರೆಯುತ್ತವೆ ಎಂಬುದೂ ಕೆಲವರ ಆಶಯ. ಹೀಗಾಗಿ ಬಹುತೇಕರು ಇಲ್ಲಿ ಮನೆ, ನಿವೇಶನ, ಬಾಡಿಗೆ ಮನೆ ಮಾಡುತ್ತಾರೆ. ಇದರಿಂದ ಇಲ್ಲಿನ ನಿವೇಶನ, ಮನೆ, ಬಾಡಿಗೆ ಮನೆಗಳಿಗೂ ಹೆಚ್ಚಿನ ಬೇಡಿಕೆ ಇದೆ.

ನಿವೇಶನಗಳಿಗೆ ಲೆಕ್ಕವಿಲ್ಲ: ನಾಲ್ಕು ಪುನರ್‌ವಸತಿ ಕೇಂದ್ರಗಳು ಇಲ್ಲಿದ್ದು, ಅವು 1998ರಿಂದ 2002ರ ಅವಧಿಯಲ್ಲಿ ನಿರ್ಮಾಣಗೊಂಡಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್‌ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆಯಿಂದ ಸಂತ್ರಸ್ತರಿಗೆ ನಿವೇಶನ ಕೊಟ್ಟಿದ್ದು, ಬಹುತೇಕ ಸಂತ್ರಸ್ತರು ತಮ್ಮ ಹಳೆಯ ಊರು, ಇಲ್ಲವೇ ಸಂಬಂಧಿಕರ ಊರುಗಳಿಗೆ ಹೋಗಿದ್ದಾರೆ. ಇಲ್ಲಿ ಸಂತ್ರಸ್ತರಿಗೆ ನೀಡಿದ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಸಂತ್ರಸ್ತರು ನಿವೇಶನ ಮಾರಾಟ ಮಾಡುತ್ತಿದ್ದಂತೆ, ಇಲ್ಲಿ ನಗರದ ಜನ, ಸರ್ಕಾರಿ ನೌಕರರು, ಖಾಸಗಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ಖರೀದಿ ಮಾಡುವ ಸಂಪ್ರದಾಯ ಆರಂಭಗೊಂಡಿತ್ತು. ಇದನ್ನೇ ನೆಪವಾಗಿಟ್ಟುಕೊಂಡು, ಸರ್ಕಾರಿ ಗೋಮಾಳ, ಸರ್ಕಾರಿ ಜಾಗವನ್ನೂ ಮಾರಾಟ ಮಾಡಿದ ಆರೋಪ ಇದೀಗ ಕೇಳಿ ಬರುತ್ತಿದೆ.

ಎಲ್ಲಿಂದಲೋ ಬಂದವರು: ಶಿಗಿಕೇರಿ ಕ್ರಾಸ್‌ನಲ್ಲಿ ಒಂದು ನಿವೇಶನವಿದೆ ಅಂದರೆ ಸಾಕು, ಅದನ್ನು ಖರೀದಿ ಮಾಡುವವರಸಂಖ್ಯೆ ಹೆಚ್ಚುತ್ತದೆ. ಕಾರಣ, ಮುಂದೆ ನವನಗರ ಯೂನಿಟ್‌ -3 ಶಿಗಿಕೇರಿ ಸುತ್ತಲೂ ನಿರ್ಮಾಣಗೊಳ್ಳಲಿದ್ದು, ಆಗ ಇಡೀ ಶಿಗಿಕೇರಿ ಕ್ರಾಸ್‌, ನಗರ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲೊಂದು ನಿವೇಶನ ಖರೀದಿಸಿ, ಮುಂದೆ ಮಾರಾಟ ಇಲ್ಲವೇ ಮನೆ ಕಟ್ಟಿಸಿದರಾಯ್ತು ಎಂದು ಚಿಂತನೆ ಮಾಡುವವರೇ ಹೆಚ್ಚು. ಹೀಗಾಗಿ ಎಲ್ಲಿಂದಲೋ ಬಂದವರು, ಇಲ್ಲಿ ನಿವೇಶನ ಖರೀದಿ ಮಾಡಿದವರ ಪಾಲು ಒಂದಷ್ಟು ಇದ್ದರೆ, ಸ್ಥಳೀಯ ವ್ಯಕ್ತಿಗಳು, ಗ್ರಾಪಂ ಆಡಳಿತ ಮಂಡಳಿಯೊಂದಿಗೆ ಕೂಡಿಕೊಂಡು, ಖಾಲಿ ನಿವೇಶನಗಳನ್ನೂ ಮಾರಿದ್ದಾರೆ. ಸಂತ್ರಸ್ತರಿಗೆ ನೀಡಿದ ಒಂದೇ ನಿವೇಶನ, ಇಬ್ಬರುಮೂವರಿಗೆ ಹಕ್ಕು ಪತ್ರ ನೀಡಿದ ಪ್ರಕರಣಗಳೂ ಇಲ್ಲಿವೆ. ಇದರಲ್ಲಿ ಯುಕೆಪಿ ಕಚೇರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.

ಸರ್ಕಾರಿ ಗೋಮಾಳ ಬಯಲಿಗೆ: ಶಿಗಿಕೇರಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಗೋಮಾಳದಲ್ಲಿ ಸುಮಾರು 14 ಜನರಿಗೆ ಪ್ರತ್ಯೇಕ ಖಾತೆ ತಯಾರಿಸಿ, ಕಂಪ್ಯೂಟರ್‌ ಉತಾರ ನೀಡಲಾಗಿದೆ. ಇದು ಕಳೆದ ಒಂದು ತಿಂಗಳಲ್ಲಿ ಬೆಳಕಿಗೆ ಬಂದಿದ್ದು, ಇಲ್ಲಿನ ಮಹಿಳೆಯರು ಹೋರಾಟದ ಹಾದಿ ಹಿಡಿದ್ದಾರೆ. ಸರ್ಕಾರಿ ಗೋಮಾಳ, ಮರಳಿ ಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಇದಕ್ಕೆ ಪ್ರಬಲ ಧ್ವನಿ ಸಿಗುತ್ತಿಲ್ಲ. ಭ್ರಷ್ಟಾಚಾರ ಮಾಡಿದವರು, ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.