ಬ್ಯಾರೇಜ್‌ ಸದ್ಬಳಕೆಗೆ ಬೇಕಿದೆ ಅನುಮತಿ


Team Udayavani, Feb 27, 2020, 1:33 PM IST

bk-tdy-3

ಬಾಗಲಕೋಟೆ: ಜಿಲ್ಲೆಯ ಸುಂದರ ಹಾಗೂ ಮಾದರಿ ಬ್ಯಾರೇಜ್‌ ಎಂದು ಕರೆಯಲಾಗುವ ಬೀಳಗಿ ತಾಲೂಕಿನ ಹೆರಕಲ್‌ ಬಳಿ ನಿರ್ಮಿಸಿದ ಬೃಹತ್‌ ಬ್ಯಾರೇಜ್‌ನ ಸದ್ಬಳಕೆಗೆ ಸರ್ಕಾರ ಅನುಮೋದನೆ ನೀಡುತ್ತಾ ಎಂಬ ಪ್ರಶ್ನೆ ಮೂರು ತಾಲೂಕಿನ ರೈತ ವಲಯದಲ್ಲಿ ಕೇಳಿ ಬರುತ್ತಿದೆ.

ಹೌದು, ಬೀಳಗಿ ತಾಲೂಕಿನ ಹೆರಕಲ್‌ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ 75.57 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಿಸಿದ್ದು, ಜಿಲ್ಲೆಯ ಅಷ್ಟೂ ಬ್ಯಾರೇಜ್‌ಗಳಲ್ಲಿ ಇದೊಂದು ಮಾದರಿ ಬ್ಯಾರೇಜ್‌ ಆಗಿದೆ. ಕೃಷ್ಣಾ ಭಾಗ್ಯ ಜಲ ನಿಗಮದಿಂದ ಘಟಪ್ರಭಾ ನದಿಯ 503 ಮೀಟರ್‌ ನದಿ ತಳಮಟ್ಟದಿಂದ 528 ಮೀಟರ್‌ ಎತ್ತರದ ವರೆಗೆ ಈ ಬ್ಯಾರೇಜ್‌ ನಿರ್ಮಿಸಲಾಗಿದೆ. ಆದರೆ, 515 ಮೀಟರ್‌ ವರೆಗೆ ಮಾತ್ರ ನೀರು ನಿಲ್ಲಿಸಲು, ಕೆಬಿಜೆಎನ್‌ ಎಲ್‌ ಅನುಮತಿ ನೀಡಿದ್ದು, ಇದರಿಂದ ಸದ್ಯ ಬ್ಯಾರೇಜ್‌ನಲ್ಲಿ 1.80 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆ.

ಬ್ಯಾರೇಜ್‌ವಿಶೇಷತೆ: 503 ಮೀಟರ್‌ ನದಿಯ ಆಳವಾದ ತಳಮಟ್ಟ, 515 ಮೀಟರ್‌ ನೀರು ಸಂಗ್ರಹಿಸುವ ಮಟ್ಟ, 1.80 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ, 170 ಮೀಟರ್‌ ಉದ್ದ, 260 ಮೀಟರ್‌ ಸೇತುವೆ ಉದ್ದ, 7.50 ಮೀಟರ್‌ ಸೇತುವೆ ರಸ್ತೆಯ ಅಗಲ, 8.0/9.60 ಮೀಟರ್‌ ಅಳತೆ ಬ್ಯಾರೇಜ್‌ನ ಪ್ರತಿ ಗೇಟ್‌ ಹೊಂದಿದ್ದು, 506 ಮೀಟರ್‌ನಿಂದ 528 ಮೀಟರ್‌ ವರೆಗೆ ನೀರು ನಿಲ್ಲಿಸಲು ಅವಕಾಶವಿದೆ. ಒಟ್ಟು 18 ಗೇಟ್‌ ಹೊಂದಿರುವ ಈ ಬ್ಯಾರೇಜ್‌ ಅನ್ನು, ಜಿ.ಶಂಕರ ಕನ್‌ ಸ್ಟ್ರಕ್ಷನ್‌ ಕಂಪನಿಯಿಂದ ನಿರ್ಮಿಸಲಾಗಿದೆ.

ಸದ್ಬಳಕೆಗೆ ಆಗಬೇಕಿದೆ: ಬರ ನೀಗಿಸಲು ಭರಪುರ ಅವಕಾಶ ಈ ಬ್ಯಾರೇಜ್‌ನಿಂದ ಇದ್ದು, ಪೂರ್ಣ ಪ್ರಮಾಣದಲ್ಲಿ ಈ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಿದರೆ, ಹೆರಕಲ್‌ದಿಂದ ಹಿಮ್ಮುಖವಾಗಿ ಕಲಾದಗಿವರೆಗೂ ಹಿನ್ನೀರು ಆವರಿಸಿಕೊಳ್ಳಲಿದೆ. ಇದರಿಂದ ಬಾಗಲಕೋಟೆ ಸಹಿತ ವಿವಿಧ ಪುನರ್‌ ವಸತಿ ಕೇಂದ್ರಗಳಿಗೆ ನೀರಿನ ಮೂಲವಾದ ಆನದಿನ್ನಿ ಬ್ಯಾರೇಜ್‌, ಕಲಾದಗಿ ಬ್ಯಾರೇಜ್‌ಗಳಿಗೂ ಇದರಿಂದ ನೀರು ಒದಗಲಿದೆ. ಮುಖ್ಯವಾಗಿ ಈ ಬ್ಯಾರೇಜ್‌ ನಂಬಿಕೊಂಡೇ ರೂಪಿಸಿರುವ ಹೆರಕಲ್‌ ದಕ್ಷಿಣ ಮತ್ತು ಉತ್ತರ ಏತ ನೀರಾವರಿ ಯೋಜನೆ, ಕಳಸಕೊಪ್ಪ ಸಹಿತ 7 ಕೆರೆಗಳಿಗೆ ನೀರು ತುಂಬಿಸಲು ನೀರಿನ ಕೊರೆತ ಆಗುವುದಿಲ್ಲ.

528 ಮೀಟರ್‌ ಎತ್ತರದವರೆಗೆ 18 ಗೇಟ್‌ ಗಳಿದ್ದರೂ ಕೇವಲ 515 ಮೀಟರ್‌ವರೆಗೆ ನೀರು ನಿಲ್ಲಿಸುತ್ತಿರುವುದರಿಂದ ಕೇವಲ 1.80 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿದೆ. ಬ್ಯಾರೇಜ್‌ನ ಮೂಲ ನಿರ್ಮಾಣದಂತೆ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸಿದರೆ, ಇನ್ನೂ 3ರಿಂದ 4 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ ಎಂಬುದು ಒಂದು ಅಂದಾಜಿದೆ.

ನೀರು ನಿಲ್ಲಿಸಲು ಸಮಸ್ಯೆ ಇಲ್ಲ: ಹೆರಕಲ್‌ ಬ್ಯಾರೇಜ್‌ನಲ್ಲಿ 519.60 ಮೀಟರ್‌ ವರೆಗೂ ಸದ್ಯ ನೀರು ನಿಲ್ಲಿಸಲು ಯಾವುದೇ ಸಮಸ್ಯೆ ಇಲ್ಲ. ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲೇ (ಘಟಪ್ರಭಾನದಿ) ಈ ಬ್ಯಾರೇಜ್‌ ಬರುತ್ತಿದ್ದು, ಈಗಾಗಲೇ 519.60 ಮೀಟರ್‌ ಎತ್ತರದಲ್ಲಿ ನೀರು ನಿಲ್ಲಿಸಿದಾಗ ಹಿನ್ನೀರ ಪ್ರದೇಶದಲ್ಲಿ ಬರುವ ಎಲ್ಲ ಗ್ರಾಮ, ಭೂಮಿಗೆ ಪರಿಹಾರ ನೀಡಿ, ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೀಗಾಗಿ 519.60 ಮೀಟರ್‌ವರೆಗೆ ನೀರು ನಿಲ್ಲಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಾಧಿಕಾರಿ ಸಮಿತಿಯಿಂದ ಅನುಮೋದನೆ ಅಗತ್ಯವಿದೆ.

ಪ್ರಸಕ್ತ ಬಜೆಟ್‌ ಅಥವಾ ಸಚಿವ ಸಂಪುಟದಲ್ಲಿ ಇದಕ್ಕಾಗಿ ಅನುಮೋದನೆ ನೀಡಲು, ಕೆಬಿಜೆಎನ್‌ ಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಕ್ಕೆ ಸರ್ಕಾರ ಅನುಮತಿ ನೀಡುವ ಮೂಲಕ ನೀರು-ಬ್ಯಾರೇಜ್‌ ಸದ್ಬಳಕೆಗೆ ಅಸ್ತು ಎನ್ನಲಿ ಎಂಬುದು ಬೀಳಗಿ, ಬಾದಾಮಿ, ಬಾಗಲಕೋಟೆ ರೈತರ ಒತ್ತಾಸೆಯಾಗಿದೆ.

 

-ಎಸ್‌.ಕೆ. ಬಿರಾದಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.