ಪ್ರಾಥಮಿಕ ಶಿಕ್ಷಣ ವಂಚಿತ “ಮಹಾ’ ಮಕ್ಕಳು


Team Udayavani, Nov 16, 2019, 11:52 AM IST

bk-tdy-1

ಮುಧೋಳ: “ನಾನು ಮೊದಲು ಊರಲ್ಲಿ ಶಾಲೆಗೆ ಹೋಗುತ್ತಿದ್ದೆ. ಆದರೆ ಅಪ್ಪ-ಅಮ್ಮ ಕಬ್ಬು ಕಡಿಯಲು ಈ ಕಡೆಗೆ ಬರಲು ಆರಂಭಿಸಿದ ಮೇಲೆ ನಾನು ಶಾಲೆ ಬಿಟ್ಟೆ. ಅಪ್ಪ-ಅಮ್ಮ ಕಬ್ಬು ಕಡಿಯಲು ಹೋದರೆ ನಾವು ಜೋಪಡಿ ನೋಡ್ಕೊತೀವಿ’ ಎಂದು ಹೇಳುವಾಗ ಆ ಪುಟ್ಟ ಬಾಲಕನ ಮುಖದಲ್ಲಿ ಏನನ್ನೋ ಕಳೆದುಕೊಂಡ ನೋವು ಕಾಣಿಸುತ್ತಿತ್ತು.

ಹೌದು, ನೆರೆಯ ಮಹಾರಾಷ್ಟ್ರದಿಂದ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಹಲವಾರು ಭಾಗದಲ್ಲಿ ಕಬ್ಬು ಕಟಾವು ಮಾಡಲು ಬರುವ ನೂರಾರು ಕುಟುಂಬದಲ್ಲಿನ ಮಕ್ಕಳ ಮನದಲ್ಲಿದ್ದ ನೋವನ್ನು ಉದಯವಾಣಿ ಎದುರು ಅಶೋಕ ಎಂಬ ಬಾಲಕ ಬಿಚ್ಚಿಟ್ಟನು. ಸಿಕ್ಕುಗಟ್ಟಿದ ಕೂದಲು, ಹಳೆಯ ಬಟ್ಟೆ ತೊಟ್ಟಿದ್ದ ಅಶೋಕನನ್ನು ನೋಡಿದರೆ ಎಂತವರಿಗೂ ಅವರ ಬಡತನದ ಪರಿಸ್ಥಿತಿ ಅರ್ಥವಾಗುವಂತಿತ್ತು. ತನ್ನ ಅರೆ ಬರೇ ಕನ್ನಡ ಮಿಶ್ರಿತ ಮರಾಠಿ ಭಾಷೆಯಿಂದ ತನ್ನ ಮನದ ದುಮ್ಮಾನವನ್ನು ಅಶೋಕ ತೆರೆದಿಟ್ಟನು.

ರಾಜ್ಯದಲ್ಲಿ ಕಬ್ಬು ನುರಿಸಲು ಕಾರ್ಖಾನೆ ಆರಂಭವಾಗುವುದರಿಂದ ಕಾರ್ಖಾನೆ ಕಬ್ಬು ನುರಿಯುಸುವ ಕಾರ್ಯವನ್ನು ಸ್ಥಗಿತಗೊಳಿಸುವವರೆಗೆ 5ರಿಂದ 6 ತಿಂಗಳು ನೆರೆಯ ಮಹಾರಾಷ್ಟ್ರದ ಜನ ತಂಡೋಪ ತಂಡವಾಗಿ ಕಬ್ಬು ಕಟಾವು ಮಾಡುವ ಕೆಲಸಕ್ಕೆಂದು ಬರುತ್ತಾರೆ. ಬಡತನ, ನಿರುದ್ಯೋಗ ಸಮಸ್ಯೆ ಹಾಗೂ ಆರ್ಥಿಕ ಅಭದ್ರತೆ ನೀಗಿಸಿಕೊಳ್ಳಲು 6 ತಿಂಗಳುವರೆಗೆ ರಾಜ್ಯಕ್ಕೆ ಆಗಮಿಸುವ ಈ ಜನ, ತಮ್ಮೊಡನೆ ಮಕ್ಕಳನ್ನು ಕರೆ ತಂದಿರುತ್ತಾರೆ. ಹೆತ್ತವರ ಜತೆ ರಾಜ್ಯಕ್ಕೆ ಆಗಮಿಸುವ ಮಕ್ಕಳು ಅನಿವಾರ್ಯವಾಗಿ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ಕಲಿಯುವ ವಯಸ್ಸಿನಲ್ಲಿ ಹೆತ್ತವರ ಕೆಲಸಕ್ಕೆ ನೆರವಾಗುತ್ತಾರೆ. ಅವರೊಡನೆ ಅಲೆಮಾರಿ ಜೀವನ ನಡೆಸುವುದರಿಂದ ಮಕ್ಕಳ ಸುಂದರ ಬಾಲ್ಯದ ಜೀವನ ಮಸುಕಾಗುತ್ತಿದೆ. ಬಡತನದ ಬೇಗೆಗೆ ಮಕ್ಕಳ ಹಕ್ಕುಗಳು ಮೊಟಕಾಗುತ್ತಿವೆ.

ಹೆತ್ತವರಿಗೆ ನೆರವು: ಹೆತ್ತವರು ಬೆಳಗಿನ ಜಾವದಲ್ಲೇ ಕಬ್ಬು ಕಟಾವು ಮಾಡಲು ತೆರಳುವುದರಿಂದ ಮಕ್ಕಳು ತಮ್ಮ ಗುಡಿಸಲಿನ ಕಾವಲು ಕಾಯುವುದು, ಮನೆ ಕೆಲಸ ಮಾಡುವುದು, ತಮ್ಮ ತಂದೆ- ತಾಯಂದರಿಗೆ ಬುತ್ತಿ ತೆಗೆದುಕೊಂಡು ಹೋಗುವುದು ಮಾಡುತ್ತಾರೆ. ಬಡತನದ ಅನಿವಾರ್ಯತೆಯಿಂದಾಗಿ ಆಟವಾಡಿ ಬೆಳೆಯುವ ವಯಸ್ಸಲ್ಲಿ ಮನೆ ಕೆಲಸ ಮಾಡುತ್ತ ಶಿಕ್ಷಣದಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಮಕ್ಕಳಿಗಾಗಿಯೇ ಸರ್ಕಾರ ಟೆಂಟ್‌ ಶಾಲೆ ಆರಂಭಿಸಬೇಕು ಎಂಬುದು ಕೆಲವರ ಒತ್ತಾಯ. ಆದರೆ, ಈ ಮಕ್ಕಳು, ಅವರ ಪಾಲಕರು ಅದಕ್ಕೆ ಸ್ಪಂದಿಸಿದರೆ, ಮಕ್ಕಳು ಹಕ್ಕು ಮೊಟಕಾಗುವುದು ತಪ್ಪಿಸಬಹುದು.

ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಜಿಲ್ಲೆಗೆ ಬಂದಿರುವ ಪಾಲಕರ ಮಕ್ಕಳಿಗೆ ಶಿಕ್ಷಣ ಕೊಡಲು ಇಲಾಖೆಯಲ್ಲಿ ವಿಶೇಷ ಅವಕಾಶವಿಲ್ಲ. ಆದರೆ, ಅವರು ಕನ್ನಡ ಮಾಧ್ಯಮ ಶಿಕ್ಷಣ ಪಡೆಯಲು ಇಚ್ಛಿಸಿದರೆ ಅವರಿಗೆ ವಲಸೆ ಮಕ್ಕಳು ಎಂಬ ಪತ್ರ ನೀಡುತ್ತೇವೆ. ಅವರು ನಮ್ಮ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಇಂಗ್ಲಿಷ್‌, ಗಣಿತ ಸಹಿತ ವಿವಿಧ ವಿಷಯ ಕಲಿಯಬಹುದು. ಅವರಿಗೆ ಬಿಸಿ ಊಟದ ವ್ಯವಸ್ಥೆ ಮಾಡಲೂ ಅವಕಾಶವಿದೆ. ವಲಸೆ ಬಂದಿರುವ ಪಾಲಕರು, ಈ ಪ್ರಯೋಜನೆ ಪಡೆಯಬಹುದು. ಅಂತಹ ಮಕ್ಕಳು, ಜಿಲ್ಲೆಯಲ್ಲಿ ಶಿಕ್ಷಣ ಪಡೆಯಲು ಮುಂದೆ ಬಂದರೆ ತಕ್ಷಣ, ವಸಲೆ ಪತ್ರ ನೀಡಿ, ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಲಾಗುವುದು.  –ಶ್ರೀಶೈಲ ಎಸ್‌. ಬಿರಾದಾರ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

 

-ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.