ರಬಕವಿ-ಬನಹಟ್ಟಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಕೊಳವೆಬಾವಿಗಳಲ್ಲಿ ಬರುತ್ತಿಲ್ಲ ನೀರು ಟ್ಯಾಂಕರ್ಗಳ ಮೂಲಕ ನೀರು ಸರಬುರಾಜು
Team Udayavani, May 19, 2019, 11:04 AM IST
ನಹಟ್ಟಿ: ನಗರದ ಕರೋಳಿ ಲೇನ್ ಹತ್ತಿರ ಜನತೆ ನೀರಿಗಾಗಿ ಕೊಡಗಳೊಂದಿಗೆ ಸರದಿಯಲ್ಲಿ ನಿಂತಿರುವುದು.
ಬನಹಟ್ಟಿ; ರಬಕವಿ ಬನಹಟ್ಟಿ ಅವಳಿನಗರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಳೆದ ವಾರಕ್ಕೂ ಮತ್ತು ಈಗ ಹೋಲಿಸಿದರೆ ಅಂತರ್ಜಲ ಮಟ್ಟ ಖುಷಿದಿದೆ. ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಬೋರ್ವೆಲ್ಗಳಲ್ಲಿ ನೀರು ಬಾರದೆ ಹರಸಾಹಸ ಪಡುವಂತಾಗಿದೆ. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸಮಸ್ಯೆ ಉಲ್ಬಣವಾಗುವ ಮುಂಚೆಯೇ ಟ್ಯಾಂಕ್ರಗಳ ಮೂಲಕ ನೀರು ಸರಬುರಾಜು ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಈಗ ನಗರಸಭೆಯವರು ಅತಿ ಹೆಚ್ಚು ಸಮಸ್ಯೆ ಇರುವ ಗುಡ್ಡದ ಪ್ರದೇಶಗಳ ಕೆಲವು ವಾರ್ಡ್ಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ.
ಬನಹಟ್ಟಿ ನಗರದ ಘೋರಕನಾಥ ದೇವಸ್ಥಾನ ಅಕ್ಕಪಕ್ಕದ ಏರಿಯಾ, ಬನಹಟ್ಟಿ ದಾನಮ್ಮದೇವಿ ದೇವಸ್ಥಾನ ಹಿಂಬದಿಯ ಗಲ್ಲಿಗಳಲ್ಲಿ ನೀರಿನ ತೊಂದರೆ ತೀವ್ರವಾಗಿದ್ದು, ಅಲ್ಲಿ ಟ್ಯಾಂಕರ್ಗಳ ಮೂಲಕ ನೀರು ಕೊಡಲಾಗುತ್ತಿದೆ. ಟ್ಯಾಂಕರ್ಗಳಿಗೆ ಜನ ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಸಾರ್ವಜನಿಕರು ಕೊಡ ನೀರಿಗೂ ರಾತ್ರಿಯೇ ಸರದಿಯಲ್ಲಿ ನಿಲ್ಲುವಂತಾಗಿದೆ. ಕೆಲವು ವಾರ್ಡ್ಗಳಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಕರೆ ತಂದು ನಾವು ನಿಮಗೇ ಮತ ಹಾಕಿದ್ದೇವೆ. ನಮಗೆ ನೀರು ಬೇಕು ಕೊಡಿ ಎಂದು ಕೇಳುತ್ತಿರುವ ಸನ್ನಿವೇಷಗಳನ್ನು ನಿತ್ಯ ಕಾಣುವಂತಾಗಿದೆ. ಸದಸ್ಯರು ನಗರಸಭೆ ಅಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದುಕೊಂಡು ಸಮಸ್ಯೆ ಸರಿಪಡಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ