ಸಮಗಾರ ಹರಳಯ್ಯ ಸಂಘದಿಂದ ಪ್ರತಿಭಟನೆ
ಸಮಗಾರ ಸಮಾಜದ ಮೂಲ ವೃತ್ತಿ ಕಸಬಿಗೆ ಅವಮಾನ ಮಾಡಲಾಗುತ್ತಿದೆ.
Team Udayavani, Nov 25, 2021, 3:35 PM IST
ಬಾಗಲಕೋಟೆ: ಕರವೇ ಕಾರ್ಯಕರ್ತರು ವಿವಿಧೆಡೆ ಬೂಟ್ (ಶೂ) ಪಾಲಿಶ್ ಮೂಲಕ ಹಣ ಸಂಗ್ರಹಿಸುವ ಪ್ರತಿಭಟನೆ ನಡೆಸಿ, ಸಮಗಾರ ಸಮಾಜವನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಸಮಗಾರ ಹರಳಯ್ಯ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಾಜದ ಪ್ರಮುಖರು, ಕರವೇ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಹಿರಿಯ ಮುಖಂಡ ಯಪ್ಪಲ್ಲ ಬೆಂಡಿಗೇರಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣ ಸಂಗ್ರಹಿಸಲು ಕರವೇ ಕಾರ್ಯಕರ್ತರು ಸಾರ್ವಜನಿಕರ ಸ್ಥಳದಲ್ಲಿ ಬೂಟ್ ಪಾಲಿಶ್ ಹೋರಾಟದ ಮೂಲಕ, ಸಮಗಾರ ಸಮಾಜದ ಮೂಲ ವೃತ್ತಿ ಕಸಬಿಗೆ ಅವಮಾನ ಮಾಡಲಾಗುತ್ತಿದೆ. ಕರವೇ ಕಾರ್ಯಕರ್ತರು ಇಂತಹ ಅವಮಾನಕರ ಪ್ರತಿಭಟನೆ ಕೈಬಿಡುವಂತೆ ಆಗ್ರಹಿಸಿದರು.
ಈ ವೇಳೆ ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಸಮಾಜದ ಪ್ರಮುಖರಾದ ಎಂ.ಬಿ. ಯಾದವಾಡ, ಪರಮೇಶ್ವರ ಬಾವಲತ್ತಿ, ಪಿ.ಎಂ. ಹೊಸಮನಿ, ಜಿ.ಎಚ್. ಮುಂಡೇವಾಡಿ, ಶನಸು ಬೀಳಗಿ ಸೇರಿದಂತೆ ಹರಳಯ್ಯ ಸಮಗಾರ ಸಂಘದ ಪ್ರಮುಖರು ಇದ್ದರು.