ಪ್ರೀತಿಯಿಂದ ಎಲವನ್ನೂ ಗೆದ್ದವರು ಪುನೀತ್
ಸಮಾಜಸೇವಕ, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದ ಅಪ್ಪು
Team Udayavani, Mar 23, 2022, 2:14 PM IST
ಗುಳೇದಗುಡ್ಡ: ವ್ಯಕ್ತಿಗೆ ಬೆಲೆ ಸಿಗುವುದು ಅವರ ಆದರ್ಶಗಳಿಗೆ, ಸಮಾಜಸೇವೆ ಮತ್ತು ಸಾಧನೆಗೆ ಇದರಿಂದ ವ್ಯಕ್ತಿ ಭೌತಿಕವಾಗಿ ನಮ್ಮಿಂದ ದೂರವಾದರೂ ಅಮರರಾಗಿರುತ್ತಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಪಟ್ಟಣದ ಸಾಲೇಶ್ವರ ತೇರಿನ ಮನೆಯ ಮುಂದೆ ಹಾಕಿದ ಭವ್ಯ ವೇದಿಕೆಯಲ್ಲಿ ಪುನೀತ್ ರಾಜಕುಮಾರ ಅವರ ಅಭಿಮಾನಿ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪುನೀತ್ ಜನ್ಮದಿನದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುನೀತ್ ಬದುಕಿದ್ದಾಗ ಅಭಿಮಾನಿಗಳಿಗೆ ಅವರೊಬ್ಬ ನಟರಾಗಿ ಕಂಡ ಅವರು, ನಮ್ಮಿಂದ ದೂರವಾದ ಕ್ಷಣದಿಂದ ಅವರೊಬ್ಬ ಸಮಾಜಸೇವಕ, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಎಂಬುದು ಇಡೀ ಜಗತ್ತೇ ಕಣ್ಣೀರಿಟ್ಟಿತ್ತು ಎಂದು ಹೇಳಿದರು.
ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಪುನೀತ್ ಪ್ರೀತಿಯಿಂದ ಎಲ್ಲವನ್ನು ಗೆದ್ದವರು, ವ್ಯಕ್ತಿ ಗೆಲ್ಲುವುದಿಲ್ಲ, ವ್ಯಕ್ತಿತ್ವ ಗೆಲ್ಲುತ್ತದೆ ಎಂದು ಹೇಳಿದರು.
ಪುರಸಭೆ ಸದಸ್ಯ ಉಮೇಶ ಹುನಗುಂದ, ಚಂದ್ರಕಾಂತ ಶೇಖಾ ಮಾತನಾಡಿದರು. ಪ್ರಕಾಶ ವಾಳದುಂಕಿ, ಪುರಸಭೆ ಸದಸ್ಯರಾದ ಜ್ಯೋತಿ ಗೋವನಕೊಪ್ಪ. ಸಂತೋಷ ನಾಯನೇಗಲಿ, ಸುಮಿತ್ರಾ ಕೊಡಬಳಿ, ರಾಜೇಶ್ವರಿ ಉಂಕಿ, ಹಿರಿಯರಾದ ರವಿ ಗೌಡ್ರ, ಗಣೇಶ ಹೆಗಡೆ, ಗೌರವೀಶಪ್ಪ ಭಾವಿ, ಪುಂಡಲೀಕ ಕಂಠಿ, ಮಂಜುನಾಥ ರಾಜನಾಳ, ಬಸವರಾಜ ಗೌಡರ, ರಾಘು ಕೆಂಚಗಳ್ಳಿ, ಸಚೀನ ರಾಮಪುರ ಇತರರು ಇದ್ದರು.
ಗೀತ ನಮನ: ಕಾರ್ಯಕ್ರಮದ ನಂತರ ಗುಳೇದಗುಡ್ಡ ಜ್ಯೋತಿ ಅವರ ಕಲಾತಂಡದ ವತಿಯಿಂದ ಪುನೀತ್ ಅವರಿಗೆ ಗೀತ ನಮನ ಸಂಗೀತ ಕಾರ್ಯಕ್ರಮ ನಡೆಯಿತು. ಜ್ಯೋತಿ ಗುಳೇದಗುಡ್ಡ, ಜ್ಯೂ.ರವಿಚಂದ್ರನ್, ಜ್ಯೂ. ವಿಷ್ಣುವರ್ಧನ, ನೃತ್ಯಗಾರ್ತಿ ಕಲ್ಪನಾ ಬೆಂಗಳೂರು ಅವರ ಹಾಡು ನೃತ್ಯ ರಂಜಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ