ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ
Team Udayavani, Dec 9, 2019, 12:48 PM IST
ಬನಹಟ್ಟಿ: ಸ್ಥಳೀಯ ಹಿರೇಮಠದ ಶಾಂತವೀರ ಶಿವಾಚಾರ್ಯರ 29ನೇ ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ರವಿವಾರ ಭಕ್ತ ಸಾಗರದ ಮಧ್ಯದಲ್ಲಿ ಅದ್ಧೂರಿಯಾಗಿ ನಡೆಯಿತು.
ಸ್ಥಳೀಯ ಭದ್ರನವರ ಕಟ್ಟಡದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಿರೇಮಠವನ್ನು ಮಧ್ಯಾಹ್ನ ತಲುಪಿತು. ಸಿದ್ದಾಪುರ ಶುಗರ್ಸ್ನ ಜಗದೀಶ ಗುಡಗುಂಟಿಮಠ, ಹಿರೇಮಠದ ಶರಣ ಬಸವ ಶಿವಾಚಾರ್ಯರು, ಜಮಖಂಡಿಯ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ಸಂಗಣ್ಣ ಗಣೇಶನವರ, ಶಂಕರ ಸೋರಗಾವಿ, ಮಹಾಶಾಂತ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಕುಂಭ ಮತ್ತು ಆರತಿ ಹೊತ್ತ ಮಹಿಳೆಯರು, ಪೇಠ ಸುತ್ತಿಕೊಂಡ ಪುರುಷರು ಕರಡಿ, ಸಂಬಾಳ, ಹಲಗೆ ಕೈ ಪಟ್ಟು ತಂಡ ಮತ್ತು ಸಂಗೀತ ವಾದಕರು ಮೆರವಣಿಗೆಗೆ ಕಳೆ ತಂದಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಜಗದ್ಗುರುಗಳಿಗೆ ಹೂವಿನ ಮಳೆಗೈದರು. ಕಲ್ಲು ಸಕ್ಕರೆ ನೀಡಿ ಪ್ರಸಾದ ಸ್ವೀಕರಿಸಿದರು.
ಶೃಂಗಾರಗೊಂಡ ನಗರ: ಬೆಳಗ್ಗೆಯಿಂದಲೇ ಹೆಣ್ಣು ಮಕ್ಕಳು ಮೆರವಣಿಗೆ ಸಾಗುವ ರಸ್ತೆಯನ್ನು ಸ್ವತ್ಛಗೊಳಿಸಿ ರಂಗೋಲಿ ಹಾಕಿದ್ದರು. ಅಂದಾಜು ಎರಡು ಕಿ.ಮೀ ಉದ್ದದ ಮೆರವಣಿಗೆ ಗಮನ ಸೆಳೆಯಿತು. ಮೆರವಣಿಗೆಯ ಸಂದರ್ಭದಲ್ಲಿ ಚಾಕಲೇಟ್, ಕಲ್ಲು ಸಕ್ಕರೆ, ಶರಬತ್ ಮಜ್ಜಿಗೆ ನೀಡಿದರು. ಶ್ರೀಪಾದ ಬಾಣಕಾರ, ರಾಜಶೇಖರ ಮಾಲಾಪುರ, ವಿರೂಪಾಕ್ಷಪ್ಪ ಕೊಟಕನೂರ, ರಾಜಶೇಖರ ಹಿರೇಮಠ, ಚೆನ್ನಯ್ಯ ಲಿಂಗದ, ಬಸವರಾಜ ಜಾಡಗೌಡ, ಮಲ್ಲಿಕಾರ್ಜುನ ಬಾವಲತ್ತಿ, ಪ್ರಕಾಶ ಹೋಳಗಿ, ಪ್ರಕಾಶ ಮಂಡಿ, ಮಲ್ಲಿನಾಥ ಕಕಮರಿ ಪ್ರಶಾಂತ ಕೊಳಕಿ, ಮಲ್ಲಿಕಾರ್ಜುನ ತುಂಗಳ, ಸೋಮು ಗೊಂಬಿ, ಗೌರಿ ಮಿಳ್ಳಿ, ಶಾಂತಾ ಸೋರಗಾವಿ, ಕಮಲಾ ಹಾರೂಗೇರಿ, ಶಿವಾನಂದ ಹಿರೇಮಠ, ವಿರೂಪಾಕ್ಷಿಮಠದ ರುದ್ರಯ್ಯ ಕಾಡದೇವರ, ವೈ.ಬಿ. ಕೊರಡೂರ, ದಾನಪ್ಪ ಹುಲಜತ್ತಿ, ಶಿವು ಗುಂಡಿ, ರವಿ ಬಾಡಗಿ, ಶಂಕರ ಕೆಸರಗೊಪ್ಪ, ನಂದು ಕುಳ್ಳಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ