ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, Dec 9, 2019, 12:28 PM IST
ಮಹಾಲಿಂಗಪುರ: ಕಚ್ಚಾನೂಲು, ಬಿಮ್, ಸಂಬಳ ಪಾವತಿ ಸೇರಿದಂತೆ ನೇಕಾರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಹಾಲಿಂಗಪುರ, ಚಿಮ್ಮಡ ಭಾಗದ ಕೈಮಗ್ಗ ನೇಕಾರರು ಹುಬ್ಬಳ್ಳಿಯಲ್ಲಿ ಕೆಎಚ್ಡಿಸಿ ನಿಗಮದ ಎಂ.ಡಿ.ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ನೇಕಾರರು ಮಾತನಾಡಿ, ನಮಗೆ ವರ್ಷವಿಡಿ ಉದ್ಯೋಗ ನೀಡಬೇಕು, ಸಕಾಲಕ್ಕೆ ನೂಲು, ಬಿಮ್ ಪೂರೈಸಬೇಕು. ನೇಕಾರರ ಸಂಬಳ ಹೆಚ್ಚಿಸಬೇಕು. ಪ್ರೋತ್ಸಾಹ ಧನ ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಶಿಷ್ಯವೇತನ ವಿತರಿಸಬೇಕು. ಕೆಎಚ್ಡಿಸಿ ನೇಕಾರರಿಗೂ ಸಾಲಮನ್ನಾ ಸೌಲಭ್ಯ ಸಿಗುವಂತೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೇಕಾರರಿಂದ ಮನವಿ ಸ್ವೀಕರಿಸಿದ ಕೆಎಚ್ಡಿಸಿ ನಿಗಮದ ಎಂ.ಡಿ ರಾಮಚಂದ್ರಪ್ಪ ಮಾತನಾಡಿ, ವಾರದಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ನಿರಂತರ ನೂಲು, ಬಿಮ ಪೂರೈಕೆ ಮತ್ತು ಸಕಾಲಕ್ಕೆ ಸಂಬಳ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೆಎಚ್ಡಿಸಿ ನಿಗಮದ ಉತ್ಪಾದನಾ ವಿಭಾಗದ ಪ್ರಭಾರಿ ವ್ಯವಸ್ಥಾಪಕ ಸಿ.ಪಿ.ಕೊಡತೆ ಇದ್ದರು. ಕೈಮಗ್ಗ ನೇಕಾರ ನಿಯೋಗದಲ್ಲಿ ಜಿ.ಎಸ್.ಗೊಂಬಿ, ಗುರುಪಾದ ಅಂಬಿ, ಸದಾಶಿವ ಜಿಡ್ಡಿಮನಿ, ಫಿರಸಾಬ ನದಾಫ್, ರಾಚು ದಢೂತಿ, ಮಹಾಲಿಂಗಪ್ಪ ಬುದ್ನಿ, ಗಂಗಪ್ಪ ಅಂಬಿ, ಶಂಕರ ಮುಂಡಗನೂರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು