ಎರಡಿದ್ದ ಎಸ್‌ಟಿ ಮೀಸಲು ಈ ಬಾರಿ 3ಕ್ಕೇರಿಕೆ

40 ಸ್ಥಾನಗಳಲ್ಲಿ 20 ಮಹಿಳೆಯರಿಗೆ ಮೀಸಲು ­!110 ತಾಪಂನಲ್ಲೂ 58 ಸ್ಥಾನ ಮಹಿಳೆಯರಿಗೆ

Team Udayavani, May 2, 2021, 7:04 PM IST

gjyhfyrt

ವರದಿ : ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸಲು ರಾಜ್ಯ ಚುನಾವಣೆ ಆಯೋಗ, ಮೀಸಲಾತಿ ಪ್ರಮಾಣ ನಿಗದಿಯ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಸ್ಥಾನಗಳು ಈ ಬಾರಿ 3ಕ್ಕೆ ಏರಿಕೆಯಾಗಲಿವೆ.

ಹೌದು. ಕಳೆದ ಬಾರಿ 36 ಇದ್ದ ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. 36 ಸದಸ್ಯ ಬಲದ ಜಿಪಂನಲ್ಲಿ ಎಸ್‌ಟಿ ವರ್ಗಕ್ಕೆ ತಲಾ ಒಂದು ಮಹಿಳೆ ಮತ್ತು ಒಂದು ಪುರುಷ ಸ್ಥಾನಕ್ಕೆ ಮಾತ್ರ ಅವಕಾಶವಿತ್ತು. ಈ ಬಾರಿ ಎಸ್‌ಟಿ ವರ್ಗಕ್ಕೆ ಮೂರು ಸ್ಥಾನ ನೀಡಿದ್ದು, ಅದರಲ್ಲಿ 2 ಮಹಿಳೆಯರಿಗೆ, 1 ಪುರುಷರಿಗೆ ಮೀಸಲಾಗಲಿದೆ. ಪುರುಷ ಸದಸ್ಯ ಸ್ಥಾನ ಬಾಗಲಕೋಟೆ ತಾಲೂಕಿಗೆ ದೊರೆಯುವ ಸಾಧ್ಯತೆ ಇದೆ.

ಶೇ. 50 ಮಹಿಳೆಯರಿಗೆ ಮೀಸಲು:

ಜಿಪಂನ ಒಟ್ಟು 40 ಸ್ಥಾನಗಳಲ್ಲಿ 20 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಅದರಲ್ಲಿ ಎಸ್‌ಸಿ ವರ್ಗಕ್ಕೆ 4, ಎಸ್‌ಟಿ ವರ್ಗಕ್ಕೆ 2, ಹಿಂದುಳಿದ ಅ ವರ್ಗಕ್ಕೆ 6 ಹಾಗೂ ಹಿಂದುಳಿದ ವರ್ಗ ಬಕ್ಕೆ 1, ಸಾಮಾನ್ಯ ವರ್ಗಕ್ಕೆ 9 ಸೇರಿ ಒಟ್ಟು 20 ಸ್ಥಾನಗಳಲ್ಲಿ ಮಹಿಳೆಯರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಈ 20 ಸ್ಥಾನಗಳಲ್ಲಿ ಮಹಿಳೆಯರೇ ಸ್ಪರ್ಧಿಸಬೇಕು. ಅಲ್ಲದೇ ಜಿಪಂನ 40 ಸ್ಥಾನಗಳಲ್ಲಿ ಎಸ್‌ಸಿ (ಮಹಿಳೆ-4), ಎಸ್‌ಟಿ-3 (ಮಹಿಳೆ-2), ಹಿಂದುಳಿದ ಅ ವರ್ಗ (ಮಹಿಳೆ-6), ಹಿಂದುಳಿದ ಬ ವರ್ಗ 2 (1), ಸಾಮಾನ್ಯ 20 (ಮಹಿಳೆ) ವರ್ಗಕ್ಕೆ ಮೀಸಲಿಡಲಾಗುತ್ತಿದೆ.

ತಾಪಂನಲ್ಲೂ ಮಹಿಳೆಯರ ಮೇಲುಗೈ:

ಜಿಲ್ಲೆಯ 9 ತಾಪಂ ವ್ಯಾಪ್ತಿಯಲ್ಲಿ ಒಟ್ಟು 110 ಕ್ಷೇತ್ರಗಳಿದ್ದು, ಇದರಲ್ಲಿ 58 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಹೀಗಾಗಿ ಜಿಪಂನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಸಮಬಲವಾಗಲಿದ್ದರೆ, ತಾಪಂಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಲಿದೆ. ಬಾಗಲಕೋಟೆ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, ಅದರಲ್ಲಿ 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಅದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ವರ್ಗ ಅ-2 (ಮಹಿಳೆ-1), ಸಾಮಾನ್ಯ-7 (3) ಸ್ಥಾನ ಮೀಸಲಾಗಲಿವೆ. ತಾಪಂಗೆ ಹಿಂದುಳಿದ ವರ್ಗ ಬ ವರ್ಗಕ್ಕೆ ಒಂದೂ ಸ್ಥಾನ ಮೀಸಲಾಗಿಲ್ಲ. ಹುನಗುಂದ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಮಹಿಳೆಯರಿಗೆ ಮೀಸಲು ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ ಒಂದು ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಲಿವೆ. ಇನ್ನು ಸಾಮಾನ್ಯ-5 (ಮಹಿಳೆ-2) ನಿಗದಿಯಾಗಲಿವೆ. ಬಾದಾಮಿ ತಾಪಂನಲ್ಲಿ ಒಟ್ಟು 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮೀಸಲಾಗಲಿವೆ. ಎಸ್‌ಸಿ-2 (ಮಹಿಳೆ-1), ಎಸ್‌ಟಿ-2 (ಮಹಿಳೆ-1), ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-4). ಇಳಕಲ್ಲ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ 1 ಸ್ಥಾನಗಳಿದ್ದು ಅವೂ ಮಹಿಳೆಯರಿಗೆ ಮೀಸಲಾಗಲಿವೆ.

ಅಲ್ಲದೇ ಸಾಮಾನ್ಯ-5(ಮಹಿಳೆ-2). ಗುಳೇದಗುಡ್ಡ ಹೊಸ ತಾಲೂಕಿಗೆ 6 ಮಹಿಳೆಯರು: ಗುಳೇದಗುಡ್ಡ ಹೊಸ ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಲಿದ್ದು ಅದರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ-1 ಸ್ಥಾನ ಇದ್ದು, ಅದು ಮಹಿಳೆಗೆ ಮೀಸಲು. ಹಿಂದುಳಿದ ಅ ವರ್ಗ-2(ಮಹಿಳೆ-1), ಸಾಮಾನ್ಯ-6 (ಮಹಿಳೆ-3). ಜಮಖಂಡಿ ತಾಪಂನಲ್ಲಿ 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮಹಿಳೆಯರಿಗೆ. ಎಸ್‌ಸಿ-3 (ಮಹಿಳೆ-2), ಎಸ್‌ಟಿಗೆ ಒಂದು ಸ್ಥಾನವಿದ್ದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-3). ಮುಧೋಳ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾ ನ್ಯ-7 (ಮಹಿಳೆ-3). ಬೀಳಗಿ ತಾಪಂನಲ್ಲಿ 12 ಸದಸ್ಯರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಬ ವರ್ಗಕ್ಕೆ ತಲಾ ಒಂದು ಸ್ಥಾನ ಮೀಸಲಿದ್ದು, ಅವು ಮಹಿಳೆಯರಿಗೆ ಮೀಸಲಿವೆ. ರಬಕವಿ-ಬನಹಟ್ಟಿ ಹೊಸ ತಾಲೂಕಿನಲ್ಲಿ 11 ಸ್ಥಾನಗಳಿದ್ದು, 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಒಂದು ಸ್ಥಾನವಿದ್ದು, ಅದೂ ಮಹಿಳೆಗೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾನ್ಯ 6 (ಮಹಿಳೆ-3) ಸ್ಥಾನ ಮೀಸಲಿವೆ.

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.