ಜನಪದ ಸಂಸ್ಕೃತಿ ಉಳಿಸಿ-ಬೆಳೆಸಿ
Team Udayavani, Mar 12, 2020, 4:17 PM IST
ಮುಧೋಳ: ಜನಪದ ಅರಿಯದವರಿಗೆ ಭಾರತೀಯ ಸಂಸ್ಕೃತಿ ಪರಿಚಯವಾಗಲು ಸಾಧ್ಯವಿಲ್ಲ. ಜನಪದ ನಮ್ಮ ತಾಯಿ ಸಂಸ್ಕೃತಿ. ಇದನ್ನು ಉಳಿಸಿ ಬೆಳೆಸಬೇಕಾಗಿರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಿ.ಎಚ್. ಪಂಚಗಾಂವಿ ಹೇಳಿದರು.
ನಗರದ ರನ್ನ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಹಿರಿಮೆ ಗ್ರಾಮೀಣ ಭಾಗದ ಜನರಿಗೆ ಸಲ್ಲುತ್ತದೆ. ಈ ಕಲೆಗೆ ಪ್ರೋತ್ಸಾಹ ಅಗತ್ಯ. ಕಲಾವಿದನಿಗೆ ಪ್ರೇಕ್ಷಕರ ಚಪ್ಪಾಳೆ ದೊಡ್ಡ ಪ್ರಶಸ್ತಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಮಾತನಾಡಿ, ಗ್ರಾಮೀಣ ಸೊಡಗಿನ ಜನಪದ ವನ್ನು ದೇಶದಾದ್ಯಂತ ಪಸರಿಸಲು ಸರ್ಕಾರದ ಕಾರ್ಯಕ್ರಮ ವಿವರಿಸಿದರು.
ರೂಗಿ ಅಡವಿ ಮಠದ ನಿತ್ಯಾನಂದ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಅರುಣ ಕಾರಜೋಳ, ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ಕುಮಾರ ಹುಲಕುಂದ, ಕಲ್ಲಪ್ಪಣ್ಣ ಸಬರದ, ಸಿದ್ದು ದಿವಾನ, ಸಂಗಮೇಶ ನೀಲಗುಂದ, ಗುರುರಾಜ ಕಟ್ಟಿ, ಮಹಾಂತೇಶ ನರಸನಗೌಡ್ರ ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಭಜಂತ್ರಿ ಅವರಿಂದ ಶಹನಾಯಿ, ಶ್ರೀಮಂತ ಮಾಳಿ ತಂಡದಿಂದ ಭಜನೆ ಪದ, ಹನುಮಾನ ನೃತ್ಯ ರೂಪಕ ತಂಡದಿಂದ ಜನಪದ ನೃತ್ಯ ರೂಪಕ, ಯಶೋಧಾ ವಜ್ಜರಮಟ್ಟಿ ಅವರಿಂದ ಜನಪದ ಸಂಗೀತ, ಪೂಜಾ ಗುಣದಾಳದಿಂದ ಜನಪದ ನೃತ್ಯ, ಅಕ್ಕಮಹಾದೇವಿ ಸೋಬಾನಿ ತಂಡದಿಂದ ಕೋಲಾಟ, ಗಣಪತಿ ಗೊಂಧಳಿ ಅವರಿಂದ ಗೊಂಧಳಿ ಹಾಡು, ಲಲಿತಾ ಬಾಗವ್ವಗೋಳ ತಂಡದಿಂದ ಚೌಡಕಿ ಪದ, ಚಂದ್ರಕಾಂತ ಆಲೂರ ಹಾಗೂ ಸಂಗಡಿಗರಿಂದ ಜನಪದ ಹಾಡು, ಭೀಮಪ್ಪ ಮಾದರ ಹಾಗೂ ಸಂಗಡಿಗರಿಂದ ಹಂತಿ ಪದ, ಬೋರವ್ವ ಬಾಗನ್ನವರ ಹಾಗೂ ಸಂಗಡಿಗರಿಂದ ಚೌಡಕಿ ಪದ, ವಿಠಲ ಬಾಗವ್ವಗೋಳ ತಂಡದಿಂದ ಭಜನಾಪದಗಳು ನಡೆದವು.
ಜಡಗಾ ಬಾಲಾ ವೃತ್ತದಿಂದ ಹೊರಟ ಜನಪದ ಜಾತ್ರೆಯ ಮೆರವಣಿಗೆಯಲ್ಲಿ 15ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಸಂಸ್ಥೆಯ ಅಧ್ಯಕ್ಷ ಗಾಯಕ ಹಣಮಂತ ಮೇತ್ರಿ ಸ್ವಾಗತಿಸಿದರು. ರಮೇಶ ಬಿಳ್ಳೂರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ