ರೈತರ ಕಬ್ಬಿನ ಗದ್ದೆಗೆ ನುಗ್ಗಿದ ಚರಂಡಿ ನೀರು ಖಾಲಿ, ನಿರಾಳರಾದ ರೈತರು
Team Udayavani, Apr 18, 2022, 7:31 PM IST
ರಬಕವಿ-ಬನಹಟ್ಟಿ: ಕಳೆದ ಒಂದು ತಿಂಗಳಿಂದ ನಗರಸಭೆ ವ್ಯಾಪ್ತಿಯ ರಾಂಪುರ ನರದ ರೈತ ತಮ್ಮಣ್ಣಿ ಮಾಯಣ್ಣನವರ ಕಬ್ಬಿನ ಗದ್ದೆಗೆ ರಾಂಪುರ ನಗರದ ಜನರು ಬಳಸಿದ ಚರಂಡಿ ನೀರು ಹರಿದು ಹೋಗದೆ ಗದ್ದೆಯಲ್ಲಿಯೇ ಸಂಗ್ರಹವಾಗಿ ಎರಡು ಎಕರೆ ಕಬ್ಬು ಸಂಪೂರ್ಣ ನಾಶವಾಗುತ್ತಿದೆ ಎಂಬ ಸುದ್ದಿಯನ್ನು ಏ.4 ರಂದು ಉದಯವಾಣಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಸಂಬಂಧಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಮೊದಲಿದ್ದಂತೆ ಚರಂಡಿ ನೀರು ಹರಿದು ಹೋಗಲು ಕಾಲುವೆ ತೋಡಿ ಸರಿಪಡಿಸಿದ್ದಾರೆ ಇದರಿಂದ ರೈತ ತಮ್ಮಣ್ಣಿ ನಿರಾಳರಾಗಿದ್ದಾರೆ.
ಘಟನೆ ವಿವರ; ರಾಂಪುರ ನಗರ ರೈತ ತಮ್ಮಣ್ಣಿ ಮಾಯನ್ನವರ ಎರಡು ಏಕರೆ ಕಬ್ಬಿನ ಗದ್ದೆಯಲ್ಲಿ ರಾಂಪುರ ಜನರು ಬಳಸಿದ ನೀರು ಚರಂಡಿಗೆ ಅಡ್ಡಲಾಗಿ ಉದ್ದಿಮೆಗಳು ಕಲ್ಲು ಮಣ್ಣು ಹಾಕಿ ಬಂದ್ ಮಾಡಿದ್ದರು. ಆದ್ದರಿಂದ ನೀರು ಹರಿದು ಹೋಗದೇ ಗದ್ದೆಯೊಳಗೆ ನಿಲ್ಲುತ್ತಿತ್ತು, ತೊಂದರೆಯಾಗಿದೆ ಎಂದು ಹಲವು ಬಾರಿ ರೈತ ಮೌಕಿಕವಾಗಿ ನಗರಸಭೆಗೆ ಬೆಟ್ಟಿ ನೀಡಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆಗ ತಮಗಾದ ತೊಂದರೆಯನ್ನು ಪತ್ರಿಕೆ ಎದಿರು ಅಳಲು ತೋಡಿಕೊಂಡರು.
ಈ ಕುರಿತು ಏ.4 ರಂದು ಉದಯವಾಣಿ ಪತ್ರಿಕೆ ರೈತನ ಹೊಲಕ್ಕೆ ನುಗ್ಗಿದ ಚರಂಡಿ ನೀರು ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ಕೂಡಲೇ ಲೋಕಪಯೋಗಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಈ ಮೊದಲು ಚರಂಡಿ ನೀರು ಹರಿದು ಹೋಗುವ ಸ್ಥಳದಲ್ಲಿಯೇ ಜೆಸಿಬಿಯಿಂದ ಕಾಲುವೆ ನಿರ್ಮಿಸಿ ನೀರು ಸರಾಗವಾಗಿ ಹೋಗುವಂತೆ ಕ್ರಮ ಜರುಗಿಸಿದ್ದಾರೆ. ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಲೋಕೋಪಯೋಗಿ ಇಲಾಖೆ ಎಇಇ ಶಂಕರ ಬಂಡಿವಡ್ಡರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು