ಸೈಜಿಂಗ್‌ ಘಟಕ ಬಂದ್‌: ನೇಕಾರರು ಅತಂತ್ರ

ಲಾಕ್‌ಡೌನ್‌ನಿಂದ ಪೂರೈಕೆಯಾಗುತ್ತಿಲ್ಲ ಕಚ್ಚಾವಸ್ತುಗಳು

Team Udayavani, May 22, 2020, 11:21 AM IST

ಸೈಜಿಂಗ್‌ ಘಟಕ ಬಂದ್‌: ನೇಕಾರರು ಅತಂತ್ರ

ಬನಹಟ್ಟಿ: ಸೈಜಿಂಗ್‌ ಘಟಕ ಮತ್ತು ನೇಕಾರಿಕೆ ಪೂರಕವಾದ ಉದ್ಯೋಗಗಳು. ಸೈಜಿಂಗ್‌ ಘಟಕವೂ ಕೂಡಾ ನೇಕಾರಿಕೆ ಉದ್ಯೋಗದ ಅವಿಭಾಜ್ಯ ಅಂಗ. ಈಗ ಕೋವಿಡ್‌-19ನಿಂದಾಗಿ ರಬಕವಿ-ಬನಹಟ್ಟಿ ನಗರದಲ್ಲಿ 18 ಸೈಜಿಂಗ್‌ ಘಟಕದಲ್ಲಿರುವ ಯಂತ್ರೋಪಕರಣಗಳು ಧೂಳು ತಿನ್ನುತ್ತಿವೆ.

ಎಂಟು ವಾರಗಳಿಂದ ಸೈಜಿಂಗ್‌ ಘಟಕಗಳು ಕಾರ್ಯ ಸ್ಥಗಿತಗೊಳಿಸಿದ್ದು, ಸೈಜಿಂಗ್‌ ಘಟಕ ನಂಬಿಕೊಂಡಿದ್ದ ಕಾರ್ಮಿಕರು, ನೇಕಾರರ ಮತ್ತು ಮಾಲೀಕರ ಸ್ಥಿತಿ ಅತಂತ್ರವಾಗಿದೆ. ಒಂದು ಸೈಜಿಂಗ್‌ ಘಟಕದಲ್ಲಿ ಅಂದಾಜು 40-50 ಜನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಾರೆ. ಈಗ ಎರಡು ತಿಂಗಳಿಂದ ಘಟಕಗಳು ಬಂದ್‌ ಆಗಿದ್ದರಿಂದ ಎಲ್ಲ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ.

ಇನ್ನೂ ಮಾಲೀಕರ ಪರಿಸ್ಥಿತಿಯೂ ಕೂಡಾ ಬೇರೆಯಿಲ್ಲ. ಸೈಜಿಂಗ್‌ನಲ್ಲಿ ಲಕ್ಷಾಂತರ ಮೌಲ್ಯದ ಸೀರೆ ನೇಯ್ಗೆಗೆ ಬೇಕಾದ ಬಿಮ್‌ಗಳು ಕೂಡಾ ಧೂಳು ತಿನ್ನುತ್ತಿವೆ. ಮಗ್ಗಗಳು ಬಂದ್‌ ಆಗಿರುವುದರಿಂದ ಬಿಮ್‌ಗಳನ್ನು ಕೇಳುವವರೆ ಇಲ್ಲ. ಸೈಜಿಂಗ್‌ ಘಟಕಕ್ಕೆ ಬಿಮ್‌ ಪೂರೈಸದಿದ್ದರೆ ಮಗ್ಗಗಳು ನಡೆಯುವುದಿಲ್ಲ. ಮಗ್ಗಗಳು ಬಂದಾದರೆ ಬಿಮ್‌ ಕೇಳುವವರಿಲ್ಲದಂತಾಗುತ್ತದೆ.

ಮಾಲೀಕರು ಈ ಬಿಮ್‌ಗಳನ್ನು ತಯಾರಿ ಮಾಡಲು ಲಕ್ಷಾಂತರ ಹಣವನ್ನು ಕಚ್ಚಾ ವಸ್ತು ಮತ್ತು ಇನ್ನಿತರ ವಸ್ತುಗಳ ಮೇಲೆ ಹೂಡಿರುತ್ತಾರೆ. ಈಗ ಕಚ್ಚಾ ವಸ್ತುಗಳ ಹಣವೂ ಇಲ್ಲ. ಬಿಮ್‌ ಕೊಂಡವರು ಹಣವನ್ನು ನೀಡುತ್ತಿಲ್ಲ. ಇನ್ನೂ ಸೈಜಿಂಗ್‌ನಲ್ಲಿ ಹಾಗೇ ಉಳಿದುಕೊಂಡಿವೆ ಬಿಮ್‌ಗಳು.

ಸೈಜಿಂಗ್‌ ಘಟಕಗಳು ಮತ್ತೆ ಆರಂಭಗೊಳ್ಳಲು ಕಚ್ಚಾ ವಸ್ತುಗಳು ಪೂರೈಕೆ ಆಗಬೇಕು. ಈ ಕಚ್ಚಾ ವಸ್ತುಗಳು ಮಹಾರಾಷ್ಟ್ರ, ತಮಿಳನಾಡು ಮತ್ತು ಗುಜರಾತ್‌ನಿಂದ ಬರಬೇಕು. ಈಗ ಅಲ್ಲಿಯ ಕಾರ್ಮಿಕರು ಕೋವಿಡ್‌ನಿಂದಾಗಿ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ಇನ್ನೂ ಅವರು ಬಂದು ಕೆಲಸ ಆರಂಭಿಸಿದರೆ ಮಾತ್ರ ಕಚ್ಚಾ ವಸ್ತುಗಳು ಪೂರೈಕೆಯಾಗುತ್ತವೆ.

ಅಲ್ಲಿಯವರೆಗೆ ಸೈಜಿಂಗ್‌ಗಳ ಘಟಕಗಳು ಕಾರ್ಯಾರಂಭ ಮಾಡುವುದಿಲ್ಲ ಎಂದು ಸೈಜಿಂಗ್‌ ಘಟಕದ ಕಾರ್ಯದರ್ಶಿ ಬ್ರಿಜ್‌ಮೋಹನ ಡಾಗಾ ತಿಳಿಸಿದ್ದಾರೆ.

ಈಗಾಗಲೇ ಜಿಎಸ್‌ಟಿಯಿಂದಾಗಿ ಜವಳಿ ಉದ್ದಿಮೆ ತೊಂದರೆಯಲ್ಲಿದೆ. ಈಗ ಕೋವಿಡ್‌-19ನಿಂದಾಗಿ ನಮ್ಮ ಉದ್ಯೋಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಉದ್ಯೋಗ ಮತ್ತೆ ಜೀವಂತವಾಗಬೇಕಾದರೆ ಹಲವು ವರ್ಷಗಳೇ ಬೇಕಾಗುತ್ತದೆ.  –ಬ್ರಿಜ್‌ಮೋಹನ ಡಾಗಾ, ಕಾರ್ಯದರ್ಶಿ, ಸೈಜಿಂಗ್‌ ಮಾಲೀಕರ ಸಂಘ

ಸೈಜಿಂಗ್‌ ನಡೆಸುವುದೆ ಇಂದಿನ ದಿನಗಳಲ್ಲಿ ಕಷ್ಟವಾಗಿದೆ. ಸರ್ಕಾರ ಕೇವಲ ನೇಕಾರಿಕೆಯ ಉದ್ಯೋಗಕ್ಕೆ ಮಾತ್ರ ಸೌಲಭ್ಯ ನೀಡುತ್ತಿದೆ. ನೇಕಾರಿಕೆಯ ಉದ್ಯೋಗದ ಇನ್ನೊಂದು ಭಾಗವಾಗಿರುವ ಸೈಜಿಂಗ್‌ ಘಟಕದತ್ತ ಗಮನ ನೀಡಬೇಕಾಗಿದೆ. –ರಾಮಣ್ಣ ಭದ್ರನವರ ಅಧ್ಯಕ್ಷರು, ಸೈಜಿಂಗ್‌ ಮಾಲೀಕರ ಸಂಘ

 

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.