ಹಿಜಾಬ್ ಹಾಕಿ ಬಂದ್ರು; ತೆಗೆದು ಪರೀಕ್ಷೆ ಬರೆದ್ರು
ಇಳಕಲ್ಲನಲ್ಲಿ ಪರೀಕ್ಷೆ ಬರೆಯದೇ ಮರಳಿದ ವಿದ್ಯಾರ್ಥಿನಿ
Team Udayavani, Mar 29, 2022, 12:21 PM IST
ಬಾಗಲಕೋಟೆ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮಹತ್ವದ ಘಟ್ಟ ಎಂದೇ ಕರೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಆರಂಭಗೊಂಡಿದ್ದು, ಹಿಜಾಬ್ ಹಾಕಿಕೊಂಡು ಬರುವ ಕುರಿತ ವಾದ-ವಿವಾದದ ಮಧ್ಯೆ ಹಲವಾರು ಮಕ್ಕಳು ಹಿಜಾಬ್ ಧರಿಸಿ, ಪರೀಕ್ಷೆ ಕೊಠಡಿವರೆಗೆ ಆಗಮಿಸಿ, ಮರಳಿ ಅದನ್ನು ತೆಗೆದಿಟ್ಟು ಪರೀಕ್ಷೆ ಬರೆದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷೆ ಕೇಂದ್ರದ ಎದುರು ನೂರಾರು ವಿದ್ಯಾರ್ಥಿಗಳು, ಹಿಜಾಬ್ ಧರಿಸಿಯೇ ಆಗಮಿಸಿದ್ದರು. ಈ ವೇಳೆ ಶಿಕ್ಷಕರು, ಹಿಜಾಬ್ ಧರಿಸಿ, ಪರೀಕ್ಷೆ ಕೊಠಡಿಗೆ ತೆರಳುವಂತೆ ಸೂಚಿಸಿದರು. ಇದಕ್ಕೆ ವಿದ್ಯಾರ್ಥಿಗಳು, ಪಾಲಕರೂ ಒಪ್ಪಿಗೆ ನೀಡಿ, ಹಿಜಾಬ್ ತೆಗೆದು ಪರೀಕ್ಷೆ ಕೊಠಡಿಗೆ ತೆರಳಿದರು.
ಇನ್ನೂ ಕೆಲ ಮಕ್ಕಳು, ಶಾಲಾ ಆವರಣದ ಹೊರಗೆ ಇದ್ದ ಪಾಲಕರ ಬಳಿಯೇ ಹಿಜಾಬ್ ಕೊಟ್ಟು ತೆರಳಿದರು. ಇಳಕಲ್ಲ ನಗರದ ಪರೀಕ್ಷೆ ಕೇಂದ್ರದ ಎದುರು ಪಾಲಕರೊಂದಿಗೆ ಬೈಕ್ನಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರೊಬ್ಬರು, ಪರೀಕ್ಷೆ ಬರೆಯದೇ ಮರಳಿದರು. ಬುರ್ಖಾ ಮತ್ತು ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ್ದಕ್ಕೆ ಆ ವಿದ್ಯಾರ್ಥಿನಿ ಮರಳಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ರೆಗ್ಯೂಲರ್, ರಿಪಿಟರ್ ಸೇರಿದಂತೆ ಒಟ್ಟು 30,575 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಿದ್ದು, ಆದರೆ, 30,361 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ರೆಗ್ಯುಲರ್ 30,266 ಹಾಗೂ 95 ಜನ ರಿಪಿಟರ್ ವಿದ್ಯಾರ್ಥಿಗಳು ಹಾಜರಾಗಿದ್ದರು. 21 ಜನ ರಿಪಿಟರ್ ಮತ್ತು 209 ಜನ ರೆಗ್ಯೂಲರ್ ಸಹಿತ ಒಟ್ಟು 330 ವಿದ್ಯಾರ್ಥಿಗಳು ಗೈರು ಉಳಿದಿದ್ದರು ಎಂದು ಡಿಡಿಪಿಐ ಶ್ರೀಶೈಲ ಎಸ್. ಬಿರಾದಾರ ತಿಳಿಸಿದ್ದಾರೆ.
ಮೊದಲ ದಿನದ ಪರೀಕ್ಷೆಗೆ 42 ಮಕ್ಕಳು ಗೈರು ಬಾದಾಮಿ: ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯ ಮೊದಲ ದಿನ ಸೋಮವಾರ ಕನ್ನಡ ಭಾಷೆಯ ಪರೀಕ್ಷೆ ಶಾಂತಿ ಸುವ್ಯವಸ್ಥಿತವಾಗಿ ನಡೆಯತು. ತಾಲೂಕಿನಾದ್ಯಂತ 23 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5108 ಮಕ್ಕಳಲ್ಲಿ 42 ಮಕ್ಕಳು ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದರು. ಉಳಿದಂತೆ 5066 ಮಕ್ಕಳು ಪರೀಕ್ಷೆ ಬರೆದರು. ನಗರದಲ್ಲಿನ ಶ್ರೀ ಕಾಳಿದಾಸ, ವೀರಪುಲಿಕೇಶಿ ಸಂಸ್ಥೆಯ ಎಸ್ಬಿಸಿ ಬಾಲಕಿಯರ ಕೇಂದ್ರ, ಜಿಎಂಕೆ ಪರೀಕ್ಷಾ ಕೇಂದ್ರ ಮತ್ತು ಬಸವೇಶ್ವರ ಪರೀಕ್ಷಾ ಕೇಂದ್ರದಲ್ಲಿಯೂ ನಾಲ್ಕು ಕೇಂದ್ರಗಳಲ್ಲಿ ಸಹ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆದವು. ಯಾವುದೇ ಮಕ್ಕಳು ಡಿಬಾರ್ ಆಗಿಲ್ಲ. ಸುಗಮವಾಗಿ ಪರೀಕ್ಷೆ ನಡೆದವು. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಬಿಇಒ ಆರೀಫ್ ಬಿರಾದಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?