ರಸ್ತೆ ಕಾಮಗಾರಿಗೆ ಚಾಲನೆ
Team Udayavani, Dec 12, 2019, 1:15 PM IST
ಸಾವಳಗಿ: ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಚಿಕ್ಕಲಕ್ಕಿ, ಚಿಕ್ಕಲಕ್ಕಿಕ್ರಾಸ ಹಾಗೂ ತುಂಗಳ ಗ್ರಾಮಗಳಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಮಂಜೂರಾಗಿದ ರಸ್ತೆಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚಿಕ್ಕಲಕ್ಕಿ ಕ್ರಾಸ್ದಿಂದ ಚಿಕ್ಕಪಡಸಲಗಿ ಗ್ರಾಮದವರೆಗೆ ಹದಗಟ್ಟಿರುವ ರಸ್ತೆ ನಿಮಾರ್ಣಕ್ಕೆ 499 (4.9ಕೋಟಿ) ಲಕ್ಷ ರೂ. ಚಿಕ್ಕಲಕ್ಕಿ ಗ್ರಾಮದ ಎಸ್ಸಿ ಕಾಲೋನಿಯ ರಸ್ತೆಗೆ 1ಕೋಟಿ, ತುಂಗಳ ಗ್ರಾಮದ ಜನತಾ ಪ್ಲಾಟ್ನಲ್ಲಿ 17ಲಕ್ಷ
ರೂಪಾಯಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ರಸ್ತೆ ಹಾಳಾಗಿರುವ ಕಡೆ ಗಮನಿಸಿ ಅನುದಾನ ಬಿಡುಗಡೆ ನೀಡಿರುವುದಾಗಿ ಹೇಳಿದರು. ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚು ಅನುದಾನ ತಂದು ಒಳ್ಳೆಯ ರಸ್ತೆಯ ನಿರ್ಮಾಣ ಮಾಡಿ ಜನರ ಸಂಪರ್ಕಕ್ಕೆ ಅನುಕೂಲ ಮಾಡುವುದಾಗಿ ಭರವಸೆ ನೀಡಿದರು.
ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, ಜನರು ಕಾಮಗಾರಿಯ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಜಯಾನಂದ ಹಿರೇಮಠ, ವೆಂಕಟೇಶ ಆದಾಪೂರ ಹಾಗೂ ಪ್ರಮುಕರಾದ ಕಲ್ಲಪ್ಪ ಗಿರಡ್ಡಿ, ಮಹಾದೇವ ಭಜಂತ್ರಿ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ