ಶಿರೂರ ಕೆರೆಗೆ ಹರಿದು ಬಂತು ಆಲಮಟ್ಟಿ ಜಲಾಶಯ ಹಿನ್ನೀರು
Team Udayavani, Jul 20, 2019, 10:47 AM IST
ಶಿರೂರ: ಮಹಾರುದ್ರಪ್ಪನ ಹಳ್ಳದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಪಂಪ್ಹೌಸ್.
ಶಿರೂರ: ಮಹಾರುದ್ರಪ್ಪನ ಹಳ್ಳದಲ್ಲಿ ಜಮೆಯಾಗಿರುವ ಆಲಮಟ್ಟಿ ಜಲಾಶಯದ ಹಿನ್ನೀರನ್ನು ಶಿರೂರ ಗ್ರಾಮದ ಐತಿಹಾಸಿಕ ಕೆರೆಗಳಾದ ದೊಡ್ಡ ಕೆರೆ ಹಾಗೂ ಸಣ್ಣ ಕೆರೆಗೆ ಪ್ರಯೋಗಿಕವಾಗಿ ಹರಿಸಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಈ ಭಾಗದ ರೈತರು ಸಂತಸಗೊಂಡಿದ್ದಾರೆ.
ಆಲಮಟ್ಟಿ ಜಲಾಶಯ ಹಿನ್ನೀರು ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಏತ ನೀರಾವರಿ ಯೋಜನೆಯಡಿ ಮಹಾರುದ್ರಪ್ಪನ ಹಳ್ಳದಲ್ಲಿ ನಿರ್ಮಾಣ ಮಾಡಿರುವ ಪಂಪ್ಹೌಸ್ನೊಂದಿಗೆ ಪೈಪ್ಲೈನ್ ಮೂಲಕ ಆಲಮಟ್ಟಿ ಜಲಾಶಯದ ಹಿನ್ನೀರನ್ನು ಶಿರೂರ ಕೆರೆಗಳಿಗೆ ಹರಿಸುವ ಯೋಜನೆ ರೂಪಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ದೊಡ್ಡ ಕೆರೆ 48.32 ಎಕರೆ ವಿಸ್ತೀರ್ಣ ಹೊಂದಿದೆ. ಸಣ್ಣ ಕೆರೆ 38.18 ಎಕರೆ ವಿಸ್ತೀರ್ಣವಾಗಿದೆ. ಈ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು 2017, ಸೆಪ್ಟಂಬರ್ನಲ್ಲಿ ಜಾರಿಗೆ ತಂದಿದ್ದರೂ ಬರಿದಾದ ಕೆರೆಗಳು ಭರ್ತಿಯಾಗಲಿಲ್ಲ. ಹೀಗಾಗಿ ಯೋಜನೆ ಅನುಷ್ಠಾನ ಗ್ರಾಮದ ಜನರಿಗೆ ಸಂತೋಷವಾಯಿತು ಹೊರತು 2 ತಿಂಗಳು ಕೂಡಾ ನೀರು ನಿಲ್ಲಲಿಲ್ಲ. ನೀರು ಹರಿದು ಬರುವ ಪೈಪ್ಲೈನ್ ಸಣ್ಣದಾಗಿದ್ದರಿಂದ ಹೆಚ್ಚಿನ ನೀರು ಹರಿದು ಬರುತ್ತಿಲ್ಲ. ಈಗಾಗಲೇ ಮತ್ತೆ ಹಿನ್ನೀರು ಹರಿದು ಬರುತ್ತಿದ್ದು, ಇದು ಹಿನ್ನೀರು ಇಳಿಮುಖವಾಗುವವರೆಗೂ ನಿರಂತರ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಂಡರೆ ವರ್ಷವಿಡೀ ನೀರು ಸಂಗ್ರಹವಾಗುವುದರೊಂದಿಗೆ ಪಾತಾಳಕ್ಕೆ ಇಳಿದಿರುವ ಅಂತರ್ಜಲ ಅಭಿವೃದ್ಧಿಯಾಗಿ ಜನ-ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಜತೆಗೆ ಅಂದಾಜು 60ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂಬುದು ರೈತರ ವಿಶ್ವಾಸ.
ಮೊದಲು ಸಣ್ಣ ಕೆರೆಗೆ ನೀರು: ಅಂದಾಜು 8 ಕಿ.ಮೀ. ಅಧಿಕ ಇರುವ ಕಾರಿಹಳ್ಳದ ಆಲಮಟ್ಟಿ ಹಿನ್ನೀರಿನಿಂದ ಕೊಳವೆ ಪೈಪ್ ಮೂಲಕ ಸಣ್ಣ ಪ್ರಮಾಣದಲ್ಲಿ ಹರಿದು ಬರುವ ನೀರು ಸಣ್ಣ ಕೆರೆ (ಪಡಗೇರಿ)ಗೆ ಮೊದಲು ನೀರು ಹರಿಯುತ್ತಿದೆ. ಈ ಕೆರೆ ಭರ್ತಿಯಾಗಲು ಸುಮಾರು 2 ತಿಂಗಳಕ್ಕೂ ಹೆಚ್ಚು ದಿನಗಳು ಬೇಕಾಗಬಹುದು. ಇನ್ನು ಎರಡು ಕೆರೆಗಳು ತುಂಬಲು ಅಂದಾಜು 4 ತಿಂಗಳು ಸಮಯ ಬೇಕಾಗಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್