ಸಂಭ್ರಮದ ಹನುಮಾನ ದೇವರ ಓಕುಳಿ
Team Udayavani, Jul 8, 2019, 2:27 PM IST
ಜಮಖಂಡಿ: ನಗರದಲ್ಲಿ ರವಿವಾರ ನಡೆದ ಹನುಮಾನ ಓಕಳಿ ಸ್ಪರ್ಧೆ.
ಜಮಖಂಡಿ: ನಗರದ ಹನುಮಾನ ದೇವರ ಓಕುಳಿ ರವಿವಾರ ಸ್ಥಳೀಯ ಹಿರಿಯರ ನೇತೃತ್ವದಲ್ಲಿ ಯುವಕರಿಂದ ಓಕಳಿ ಕಂಬ ಏರುವ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.
ಅಂದಾಜು 50 ಅಡಿ ಎತ್ತರದ ಕಂಬವನ್ನು ಎರಲು ಹರಸಾಹಸ ಮಾಡುತ್ತಿದ್ದ ತಂಡಕ್ಕೆ ಮತ್ತೂಂದು ತಂಡದ ಯುವಕರು ನೀರು ಎರಚುವ ಮೂಲಕ ಕೆಳಗಡೆ ಇಳಿಸುವ ದೃಶ್ಯ ವಿಶೇಷವಾಗಿತ್ತು. ನೀರು ಎರಚುವ ತಂಡ ಲೆಕ್ಕಿಸದೇ ಕುಂಬಾರ ಗಲ್ಲಿ ಯುವಕರ ತಂಡ ಪರವಾಗಿ ಸೋಮಲಿಂಗ ಯುವಕ 50 ಅಡಿ ಕಂಬ ಏರುವ ಮೂಲಕ ವಿಜೇತರಾದರು. ನಂತರ ಹನುಮಾನ ದೇವಸ್ಥಾನ ಕಮೀಟಿ ಮತ್ತು ನಗರದ ಹಿರಿಯರು ವಿಜೇತ ತಂಡದ ಯುವಕನನ್ನು ಸನ್ಮಾನಿಸಿ ಮೆರವಣಿಗೆ ಮಾಡಿದರು.
ಐತಿಹಾಸಿಕ ಓಕಳಿ ಕಂಬ ಹತ್ತುವ ಸ್ಪರ್ಧೆಯನ್ನು ಜನತೆ ವೀಕ್ಷಿಸಿ ಸಂಭ್ರಮಿಸಿದರು. ನಂತರ ನೆರದಿದ್ದ ಜನರಿಗೆ ಬಣ್ಣದ ನೀರು ಎರಚುವ ಮೂಲಕ ಓಕುಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು