ಚಿಕ್ಕಮಾಗಿ ಶಾಲೆಯ 35 ಮಕ್ಕಳು ಅಸ್ವಸ್ಥ
Team Udayavani, Dec 21, 2018, 6:00 AM IST
ಕಮತಗಿ (ಬಾಗಲಕೋಟೆ): ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ತಕ್ಷಣ ಮಕ್ಕಳನ್ನು ಆ್ಯಂಬುಲೆನ್ಸ್ ಮತ್ತು ಟಂಟಂ ಮೂಲಕ ಕಮತಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಅಲ್ಲಿ ವೈದ್ಯರಿಲ್ಲದ ಕಾರಣ ಸ್ಟಾಪ್ನರ್ಸ್ ಮತ್ತು ಸಿಬ್ಬಂದಿಯೇ ಸಲೈನ್ ಹಚ್ಚಿ, ಮಕ್ಕಳ ಆರೈಕೆ ಮಾಡಿದರು. ಬಳಿಕ ಐದು ಆಂಬ್ಯುಲೆನ್ಸ್ ಮೂಲಕ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಗೊತ್ತಾಗಿದ್ದು ಹೇಗೆ?: 143 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಎಂದಿನಂತೆ ಬಿಸಿಯೂಟ ಸಿದಟಛಿಪಡಿಸಲಾಗಿತ್ತು. ಸುಮಾರು 40 ಮಕ್ಕಳಿಗೆ ಅನ್ನ-ಸಾಂಬಾರ ಬಡಿಸಲಾಗಿತ್ತು. 41ನೇ ವಿದ್ಯಾರ್ಥಿಗೆ ಊಟ ಬಡಿಸುವ ವೇಳೆ ಸಾಂಬಾರದಲ್ಲಿ ಹಲ್ಲಿ ಕಂಡು ಬಂತು. ಆಗ ಊಟ ಮಾಡದಂತೆ ಕೂಗಿ ಹೇಳಲಾಯಿತು. ಆದರೆ, ಅಷ್ಟೊತ್ತಿಗೆ 35ಕ್ಕೂ ಹೆಚ್ಚು ಮಕ್ಕಳು ಅರ್ಧ ಊಟ ಮಾಡಿದ್ದರು. ಕೆಲವು ಮಕ್ಕಳು ವಾಂತಿ ಮಾಡಿಕೊಳ್ಳಲಾರಂಭಿಸಿದರು. ತಕ್ಷಣ ಎಲ್ಲ ಮಕ್ಕಳನ್ನೂ ಕಮತಗಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಯಿತು.
ಅಧ್ಯಕ್ಷೆ-ಸಿಇಒ ಭೇಟಿ: ವಿಷಯ ತಿಳಿದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಿಇಒ ಗಂಗೂಬಾಯಿ ಮಾನಕರ, ಹುನಗುಂದ ತಹಶೀಲ್ದಾರ್ ಸುಭಾಸ ಸಂಪಗಾವಿ ಮುಂತಾದವರು ಭೇಟಿ ನೀಡಿ, ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು. ಕಮತಗಿ ಆಸ್ಪತ್ರೆಗೆ ಐಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ನಿಯೋಜನೆ ಇದ್ದು, ವಿಷಯ ತಿಳಿದ ಅವರು ಬಳಿಕ ಆಸ್ಪತ್ರೆಗೆ ಬಂದು
ಚಿಕಿತ್ಸೆ ನೀಡಿದರು.
ಘಟನೆಗೆ ಚಿಕ್ಕಮಾಗಿ ಶಾಲೆಯ ಬಿಸಿಯೂಟ ತಯಾರಕರೇ ಮೂಲಕಾರಣ. ಊಟ ತಯಾರಿಸುವ ವೇಳೆ ಶುಚಿತ್ವ ಕಾಪಾಡುವುದು ಅವರ ಹೊಣೆ. ಹಲ್ಲಿ ಬಿದ್ದರೂ ನೋಡದೇ ಮಕ್ಕಳಿಗೆ ಊಟ ಬಡಿಸಿದ ಕಾರಣ ಮೂವರು ಅಡುಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗುವುದು.
● ಗಂಗೂಬಾಯಿ ಮಾನಕರ, ಜಿಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ