ಯಡಹಳ್ಳಿ ಗ್ರಾಪಂ : 27 ವರ್ಷದಿಂದ ಚುನಾವಣೆಯೇ ನಡೆದಿಲ್ಲ

ಮಂಡಲ ಪಂಚಾಯಿತಿ ಇದ್ದಾಗಯಡಹಳ್ಳಿಯಲ್ಲಿ ಒಂದು ಬಾರಿ ಮಾತ್ರ ಚುನಾವಣೆ

Team Udayavani, Dec 16, 2020, 2:39 PM IST

ಯಡಹಳ್ಳಿ ಗ್ರಾಪಂ : 27 ವರ್ಷದಿಂದ ಚುನಾವಣೆಯೇ ನಡೆದಿಲ್ಲ

ಬಾಗಲಕೋಟೆ: ಯಡಹಳ್ಳಿ ಗ್ರಾಪಂಗೆ ಅವಿರೋಧವಾಗಿ ಆಯ್ಕೆಯಾದ 18 ಜನ ಅಭ್ಯರ್ಥಿಗಳನ್ನು ಮಂಗಳವಾರ ಸಂಜೆ ಗ್ರಾಮಸ್ಥರು ಸನ್ಮಾನಿಸಿದರು.

ಬಾಗಲಕೋಟೆ: ರಾಜ್ಯದಲ್ಲಿ ಗ್ರಾಪಂ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ಪಂಚಾಯಿತಿಗೆ ಚುನಾವಣೆಯೇ ನಡೆದಿಲ್ಲ. ಪ್ರತಿ ಬಾರಿಯೂ ಎಲ್ಲ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತ ಬರಲಾಗಿದ್ದು, ಈ ಪಂಚಾಯಿತಿ ರಾಜ್ಯಕ್ಕೆ ಮಾದರಿಯಾಗಿದೆ.

ಹೌದು. ಇದು ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಪಂ. ರಾಜ್ಯದಲ್ಲಿ 1993ರಿಂದ ಗ್ರಾಪಂ ವ್ಯವಸ್ಥೆ ಜಾರಿಗೆ ಬಂದಿದ್ದು, ಅಂದಿನಿಂದ ಚುನಾವಣೆ ನಡೆಸದೇಗ್ರಾಮದ ಹಿರಿಯರು ಸೇರಿ ಎಲ್ಲ ಸ್ಥಾನಗಳಿಗೂಅವಿರೋಧ ಆಯ್ಕೆ ಮಾಡುತ್ತ ಬಂದಿದ್ದಾರೆ. ಹಾಗಂತಈ ಗ್ರಾಮದಲ್ಲಿಚುನಾವಣೆ ನಡೆಯುವುದಿಲ್ಲಅಂತಲ್ಲ.ತಾಪಂ, ಜಿಪಂ, ವಿಧಾನಸಭೆ ಹಾಗೂ ಲೋಕಸಭೆಚುನಾವಣೆಗಳು ಪ್ರತಿಷ್ಠೆಯಿಂದ ನಡೆಯುತ್ತವೆ. ಆದರೆ ಗ್ರಾಮದ ವಿಷಯಕ್ಕೆಬಂದಾಗ ಮಾತ್ರ ಇಡೀ ಗ್ರಾಮಸ್ಥರುಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದು ಯಡಹಳ್ಳಿಯ ವಿಶೇಷ.

18 ಸ್ಥಾನಗಳೂ ಅವಿರೋಧ: ಯಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಯಡಹಳ್ಳಿ ಮತ್ತು ಅಮಲ ಝರಿ ಗ್ರಾಮಗಳಿವೆ. ಯಡಹಳ್ಳಿಯಲ್ಲಿ 3,650 ಜನಸಂಖ್ಯೆ ಇದ್ದರೆ, ಅಮಲಝರಿಯಲ್ಲಿಸುಮಾರು 3 ಸಾವಿರ ಜನಸಂಖ್ಯೆಯಿದೆ. ಮನೆ ಮನೆಗೂ ಶೌಚಾಲಯ, ಸ್ವಚ್ಛ ಗ್ರಾಮದ ಮೂಲಕ ಹೆಸರಾದ ಯಡಹಳ್ಳಿ ಹಲವು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಕೂಡ ಪಡೆದಿದೆ. ಮಂಡಲ ಪಂಚಾಯಿತಿವ್ಯವಸ್ಥೆ ಇದ್ದಾಗ, ಯಡಹಳ್ಳಿ, ತೆಗ್ಗಿ ಮಂಡಲಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಆಗ ಒಂದು ಬಾರಿ ಮಾತ್ರ ಚುನಾವಣೆ ನಡೆದಿತ್ತು. ಅದಾದಬಳಿಕ ಮಂಡಲ ಪಂಚಾಯಿತಿ, ಗ್ರಾಪಂ ವ್ಯವಸ್ಥೆಇದ್ದಾಗಿನಿಂದಲೂ ಇಲ್ಲಿ ಚುನಾವಣೆ ನಡೆದಿಲ್ಲ.ಸದ್ಯ ಯಡಹಳ್ಳಿ ಗ್ರಾಪಂ ವ್ಯಾಪ್ತಿಯ ಯಡಹಳ್ಳಿಯಲ್ಲಿ ಸಾಮಾನ್ಯ ಪುರುಷ-3, ಸಾಮಾನ್ಯ ಮಹಿಳೆ-3, ಎಸ್‌ಸಿ ಪುರುಷ ಮತ್ತು ಮಹಿಳೆ ತಲಾ 1, ಎಸ್‌ಟಿ ಪುರುಷ ಮತ್ತು ಮಹಿಳೆ ತಲಾ 1, ಹಿಂದುಳಿದ ಅ ವರ್ಗ 1 ಸೇರಿ ಒಟ್ಟು10 ಸ್ಥಾನಗಳಿವೆ. ಇನ್ನುಅಮಲಝರಿಯಲ್ಲಿ ತಲಾ ಎರಡು ಪುರುಷಮತ್ತು ಮಹಿಳಾ ಸಾಮಾನ್ಯ, ತಲಾ ಒಂದು ಎಸ್‌ಸಿ ಮಹಿಳೆ ಮತ್ತು ಪುರುಷ, ತಲಾ ಒಂದು ಎಸ್‌ಟಿಮಹಿಳೆ ಮತ್ತು ಪುರುಷ ಸೇರಿ 8 ಸ್ಥಾನಗಳಿವೆ. ಎರಡೂಗ್ರಾಮಗಳು ಸೇರಿ 18 ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಿವೆ.

ಹಿರಿಯರ ಮಧ್ಯಸ್ಥಿಕೆ: ಅಂದ ಹಾಗೆ ಯಡಹಳ್ಳಿ ಗ್ರಾಮ ಬೀಳಗಿಯ ಮಾಜಿ ಶಾಸಕ ಜೆ.ಟಿ. ಪಾಟೀಲರ ಹುಟ್ಟೂರ. ಈ ಊರಿನ ಹಿರಿಯರಾದ ಎಂ.ಆರ್‌. ದೇಸಾಯಿ, ಜೆ.ಟಿ.ಪಾಟೀಲ, ಎಸ್‌.ಟಿ. ಪಾಟೀಲ, ಜಿತೇಂದ್ರ ಪಾಟೀಲ, ದೊಡ್ಡಣ್ಣ ದೇಸಾಯಿ, ಅಮಲಝರಿಯ ತೋಪಣಗೌಡ, ರಾಚಪ್ಪ ದೇಸಾಯಿ, ಭೀಮಶಿ ದೇಸಾಯಿ ಸೇರಿ ಎರಡೂ ಗ್ರಾಮದ ಹಲವು ಮುಖಂಡರು ಸೇರಿ ಗ್ರಾಪಂ ಚುನಾವಣೆ ಆಕಾಂಕ್ಷಿಗಳ ಸಭೆ ನಡೆಸುತ್ತಾರೆ. ಆಯಾ ವಾರ್ಡ್‌ಗೆ ಮೀಸಲಾದ ಸ್ಥಾನಗಳಿಗೆ ಎಲ್ಲ ಸಮಾಜದ ಅರ್ಹ ವ್ಯಕ್ತಿಯೊಬ್ಬರಿಗೆ ಸ್ಪರ್ಧಿಸಲು ತಿಳಿಸಿ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಪ್ರಸ್ತುತ ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ 18 ಜನ ಅಭ್ಯರ್ಥಿಗಳನ್ನು ಮಂಗಳವಾರ ಸಂಜೆ ಯಡಹಳ್ಳಿಯಲ್ಲಿ ಪಕ್ಷಾತೀತವಾಗಿ ಸನ್ಮಾನಿಸಿ ಎರಡೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಹಿರಿಯರು ಸಲಹೆ ನೀಡಿದ್ದಾರೆ.

ಮದ್ಯ-ಮಾಂಸ, ಗುಟಕಾ ಮಾರಲ್ಲ : ಯಡಹಳ್ಳಿಯ ಮತ್ತೂಂದು ವಿಶೇಷ ಅಂದರೆ ಇಲ್ಲಿ ಮದ್ಯ, ಮಾಂಸ ಹಾಗೂ ಗುಟಕಾ ಯಾವುದನ್ನೂ ಮಾರಾಟ ಮಾಡಲ್ಲ. ಯಾವುದೇ ಅಂಗಡಿಗಳಲ್ಲೂ ಈ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಮಾರಿದರೆಗ್ರಾಮಸ್ಥರೇ ವಿರೋಧ ಮಾಡುತ್ತಾರೆ. ಹಾಗಂತ ಇಲ್ಲಿ ಮದ್ಯ, ಮಾಂಸ ಸೇವನೆ ಮಾಡುವವರಿಲ್ಲ ಅಂತಲ್ಲ. ಅವರೆಲ್ಲ ಬೇರೆ ಊರಿಗೆ ಹೋದಾಗ ಮಾತ್ರ ಅದೆಲ್ಲ ಮಾಡುತ್ತಾರೆ. ತಮ್ಮೂರಲ್ಲಿ ಇದ್ದಾಗ ಅದನ್ನು ಸ್ವಯಂಘೋಷಿತ ನಿಷಿದ್ಧ ಮಾಡಿಕೊಳ್ಳುತ್ತಾರೆ ಎಂಬುದು ಇಲ್ಲಿನ ಪಿಕೆಪಿಎಸ್‌ ಅಧ್ಯಕ್ಷ ಜೀತೇಂದ್ರ ಪಾಟೀಲರ ಹೆಮ್ಮೆಯ ಮಾತು.

 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.