ಕೆಲಸಕ್ಕೆ ಹೋಗ್ಬೇಕಾ?; ಮಕ್ಕಳ ಚಿಂತೆ ಬಿಡಿ !

ಈ ಕೇಂದ್ರದ ಸಿಬ್ಬಂದಿ, ತಮ್ಮ ಸ್ವಯಂ ಮಕ್ಕಳಂತೆ ಉದ್ಯೋಗಸ್ಥ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

Team Udayavani, Jun 25, 2022, 5:41 PM IST

ಕೆಲಸಕ್ಕೆ ಹೋಗ್ಬೇಕಾ?; ಮಕ್ಕಳ ಚಿಂತೆ ಬಿಡಿ !

ಬಾಗಲಕೋಟೆ: ನೀವು ನಿತ್ಯವೂ ದುಡಿಯಲು ಹೋಗಬೇಕಾ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಬಿಟ್ಟು ಹೇಗೆ ಹೋಗೋದು ಎಂಬ ಚಿಂತೆಯೇ. ಹಾಗಾದರೆ, ಮಕ್ಕಳನ್ನು ನೋಡಿಕೊಳ್ಳುವ ಚಿಂತೆ ನಿಮಗೆ ಬೇಡ. ಅದಕ್ಕಾಗಿ ಜಿಪಂ ಹೊಸ ಯೋಜನೆ ಆರಂಭಿಸಿದೆ. ನೀವು, ಕೆಲಸಕ್ಕೆ ಹೋಗಿ ಬರುವವರೆಗೂ ನಿಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವ ಕರ್ತವ್ಯ ನಿರ್ವಹಿಸುತ್ತಿದೆ.

ಹೌದು, ನಿತ್ಯವೂ ಸರ್ಕಾರಿ, ಖಾಸಗಿ ನೌಕರಿಗೆ ಹೋಗುವ ಪೋಷಕರು, ನಿತ್ಯ ಬೇರೆ ಬೇರೆ ಕಡೆ ದುಡಿಯಲು ಹೋಗುವ ಮಹಿಳೆಯರ ಮಕ್ಕಳಿಗಾಗಿ ಜಿಲ್ಲಾಡಳಿತ, ಜಿಪಂ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯ, ಸರ್ಚ್‌ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಜಿಪಂ ಕಚೇರಿ ಆವರಣದಲ್ಲಿ ಶಿಶುಪಾಲನೆ ಕೇಂದ್ರ ಆರಂಭಿಸಲಾಗಿದೆ. ಸದ್ಯ ಈ ಕೇಂದ್ರದಲ್ಲಿ 7 ಜನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದು, ಒಟ್ಟು 17 ಜನ ಪೋಷಕರು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಹೆಸರು ನೋಂದಾಯಿಸಿದ್ದಾರೆ.

ಏನಿದು ಕೇಂದ್ರ?: ಒಬ್ಬಂಟಿ ಮಹಿಳೆಯರು ಅಥವಾ ಪುರುಷರು, ನಿತ್ಯ ಸರ್ಕಾರಿ ನೌಕರಿ, ಖಾಸಗಿ ಸೇವೆ ಅಥವಾ ಬೇರೆ ಬೇರೆ ಕಡೆ ದುಡಿಯಲು ಹೋಗುತ್ತಾರೆ. ಆದರೆ, ಪುಟ್ಟ ಪುಟ್ಟ ಮಕ್ಕಳನ್ನು ನೌಕರಿ, ಕೆಲಸಕ್ಕೆ ಹೋಗುವಾಗ ಕರೆದುಕೊಂಡು ಹೋಗುವುದು ಸಮಸ್ಯೆಯಾಗುತ್ತದೆ. ಮಕ್ಕಳು ಅಳುತ್ತಿದ್ದರೆ, ಖಾಸಗಿ ಸೇವೆಯಲ್ಲಿರುವವರು ಕೆಲಸ ನಿರ್ವಹಿಸುವುದೇ ಕಷ್ಟ. ಹೀಗಾಗಿ ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಹೊತ್ತ ಕೆಲಸಕ್ಕೆ ಬರುವ ಮಹಿಳೆಯರನ್ನು ಹಲವೆಡೆ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ಬನ್ನಿ ಎಂದು ಕೆಲಸವೇ ಬಿಡಿಸುವ ಪ್ರಸಂಗ ನಡೆಯುತ್ತವೆ.

ಆದರೆ, ಅವರು ದುಡಿಯದೇ ಇದ್ದರೆ ಬದುಕು ನಡೆಯಲ್ಲ. ಹೀಗಾಗಿ ಏನು ಮಾಡಬೇಕೆಂಬ ಚಿಂತೆಯಲ್ಲೇ ಸಾಲ ಮಾಡಿ ಬದುಕು ನಿರ್ವಹಿಸುತ್ತಾರೆ. ಅಂತವರಿಗಾಗಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಚ್‌ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯಡಿ ಜಿ.ಪಂ.ನ ಸಭಾ ಭವನದ ಎದುರಿಗೆ ಇರುವ, ಈ ಮೊದಲು ಸದಸ್ಯರ ವಿಶ್ರಾಂತಿಗಾಗಿ ಮೀಸಲಿದ್ದ ಕೊಠಡಿಯಲ್ಲೇ ಈಗ, ಮಕ್ಕಳ ಶಿಶುಪಾಲನಾ ಕೇಂದ್ರ ಆರಂಭಿಸಲಾಗಿದೆ.

ನೋಂದಣಿ ಕಡ್ಡಾಯ: ಉದ್ಯೋಗಸ್ಥ ಪೋಷಕರು ಮತ್ತು ದುಡಿಯುವ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನೆ ಕೇಂದ್ರದಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಬಿಡಬೇಕಾದರೆ ಮೊದಲು ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಪೋಷಕರು, ಪಾಲಕರ ಸಂಪೂರ್ಣ ವಿವರ ಪಡೆಯಲಾಗುತ್ತದೆ. ಅಲ್ಲದೇ ಮಕ್ಕಳ ಪಾಲನೆಗಾಗಿ, ಈ ಕೇಂದ್ರದಲ್ಲಿ ಬಿಡಲು ಪಾಲಕರೂ ಒಪ್ಪಿಕೊಂಡು ಬಿಡಬೇಕು. ಆಗ ಈ ಕೇಂದ್ರದ ಸಿಬ್ಬಂದಿ, ತಮ್ಮ ಸ್ವಯಂ ಮಕ್ಕಳಂತೆ ಉದ್ಯೋಗಸ್ಥ
ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

ಇಬ್ಬರು ತಾಯಂದಿರು: ಜಿಲ್ಲಾಡಳಿತ ಭವನದ ಜಿ.ಪಂ. ಸದಸ್ಯರ ಕೊಠಡಿಯಲ್ಲಿ ಆರಂಭಗೊಂಡ ಶಿಶುಪಾಲನೆ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸರ್ಚ್‌ ಸ್ವಯಂ ಸೇವಾ ಸಂಸ್ಥೆಯಿಂದ ಲಕ್ಷ್ಮಿ ಎನ್‌. ಗಾಯಕವಾಡ ಮತ್ತು ಪೂರ್ಣಿಮಾ ಮಸೂತಿ ಎಂಬ ಇಬ್ಬರು ತಾಯಂದಿರನ್ನು ನೇಮಕ ಮಾಡಲಾಗಿದೆ. ಇವರು ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಇಲ್ಲಿಗೆ ಬಿಟ್ಟು ಹೋಗುವ ಮಕ್ಕಳನ್ನು ಬೆಳಗ್ಗೆ 10ರಿಂದ ಸಂಜೆ 5:30ರ (ರಜೆ ದಿನ ಹೊರತುಪಡಿಸಿ) ವರೆಗೆ ನೋಡಿಕೊಳ್ಳುತ್ತಾರೆ. ಜತೆಗೆ ಆ ಮಕ್ಕಳಿಗೆ ರಾಗಿ ಗಂಜಿ ಸಹಿತ ವಿವಿಧ ಸಿಹಿ ತಿನಿಸುಗಳನ್ನು ಇಲಾಖೆಯಿಂದಲೇ ವ್ಯವಸ್ಥೆ ಮಾಡಲಾಗಿದೆ.

0 ದಿಂದ 6 ವರ್ಷದ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಡಬಹುದು. ನಿತ್ಯ ದುಡಿಯಲು ಹೋಗುವ ಮಹಿಳೆಯರ ಮಕ್ಕಳು, ಉದ್ಯೋಗಸ್ಥ-ಸರ್ಕಾರಿ ನೌಕರರ ಮಕ್ಕಳನ್ನು ಇಲ್ಲಿಗೆ ಬಿಡಬಹುದು. ಯಾವುದೇ ಶುಲ್ಕವಿಲ್ಲದೇ ಸರ್ಚ್‌ ಸ್ವಯಂ ಸೇವಾ ಸಂಸ್ಥೆಯಡಿ ಮಕ್ಕಳ ಪಾಲನೆ ಮಾಡಲಾಗುತ್ತದೆ. ಜತೆಗೆ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಆರೋಗ್ಯ, ದೈಹಿಕ ಅರಿವಿನ ಸಾಮಾಜಿಕ, ಭಾವನಾತ್ಮಕ ಬೆಳವಣಿಗೆ ಹೊಂದುವುದು, ಕಲಿಕಾ ಸಾಮಗ್ರಿ, ಆಟಿಕೆ ಸಾಮಗ್ರಿ, ಚಿತ್ರಪಟಗಳು, ಮಕ್ಕಳ ಸ್ನೇಹಿ ವಾತಾವರಣ ವ್ಯವಸ್ಥೆ ಮಾಡುವುದು ಈ ಕೇಂದ್ರದ ಮುಖ್ಯ ಆಶಯ. ಸದ್ಯ ಒಂದು ತಿಂಗಳ ಹಿಂದೆ ಆರಂಭಗೊಂಡ ಈ ಕೇಂದ್ರದಲ್ಲಿ 7 ಜನ ಮಕ್ಕಳು, ಇಲ್ಲಿ ನಿತ್ಯ ಪಾಲನೆಗೊಳ್ಳುತ್ತಿದ್ದಾರೆ.

ಉದ್ಯೋಗಸ್ಥ ಪೋಷಕರು, ದುಡಿಯುವ ಮಹಿಳೆಯರ ಮಕ್ಕಳ ಪಾಲನೆಗಾಗಿ ಆರಂಭಿಸಿದ ಮಕ್ಕಳ ಪಾಲನೆ ಕೇಂದ್ರ ಸಂಪರ್ಕಿಸಲು, ಸರ್ಚ್‌ ಶಿಶುಪಾಲನೆ ಕೇಂದ್ರ, ಜಿಲ್ಲಾಡಳಿತ ಭವನ, ಜಿ.ಪಂ. ಮುಖ್ಯ ಕಚೇರಿ, ನವನಗರ, (ಮೊ: 9448801473, 8088871164)ಗೆ ಒಮ್ಮೆ ಭೇಟಿ ಕೊಡಿ.

*ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಬರಿದಾಗುತ್ತಿದೆ ಕೃಷ್ಣೆ; ಭೀಕರ ಬರದ ಆತಂಕ

ಬಾಗಲಕೋಟೆ: ಬರಿದಾಗುತ್ತಿದೆ ಕೃಷ್ಣೆ; ಭೀಕರ ಬರದ ಆತಂಕ

Rabkavi Banhatti; ಬರಿದಾಗುತ್ತಿರುವ ಕೃಷ್ಣೆ; ಭೀಕರ ಬರದ ಆತಂಕ..!

Rabkavi Banhatti; ಬರಿದಾಗುತ್ತಿರುವ ಕೃಷ್ಣೆ; ಭೀಕರ ಬರದ ಆತಂಕ..!

ಮುಧೋಳ: ಯುಪಿಐ ಪೇಮೆಂಟ್‌ನಲ್ಲಿ ಮುಧೋಳ ಮಹತ್ತರ ಸಾಧನೆ

ಮುಧೋಳ: ಯುಪಿಐ ಪೇಮೆಂಟ್‌ನಲ್ಲಿ ಮುಧೋಳ ಮಹತ್ತರ ಸಾಧನೆ

Rabkavi Banhatti; ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಿ: ಶಾಸಕ ಸಿದ್ದು ಸವದಿ

Rabkavi Banhatti; ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಿ: ಶಾಸಕ ಸಿದ್ದು ಸವದಿ

ಮುಧೋಳ-ದೇಶಸೇವೆಗಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ: ಹಲಗಲಿ

ಮುಧೋಳ-ದೇಶಸೇವೆಗಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ: ಹಲಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.