ಆರ್ಥಿಕ ನೆರವು ನೀಡಲು ಬುರುಡ ಸಮಾಜದ ಮನವಿ
Team Udayavani, May 16, 2020, 12:21 PM IST
ಮಹಾಲಿಂಗಪುರ: ಪಟ್ಟಣದ ಬುರುಡ (ಮೇದಾರ) ಸಮಾಜದ ಬಡಜನರು ಲಾಕ್ ಡೌನ್ನಿಂದ ಸಂಕಷ್ಟ ಅನುಭವಿಸುತ್ತಿದ್ದು, ಆರ್ಥಿಕ ಸಹಾಯ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬುರುಡ ಸಮಾಜದ ಅಧ್ಯಕ್ಷ ಹನಮಂತ ಬುರುಡ ಮಾತನಾಡಿ, ಕೆಲಸ ಕಾರ್ಯಗಳಿಲ್ಲದೆ ಸಮಾಜದ25 ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಕಾರಣ ಸಮುದಾಯವು ಬಿದಿರು ಬೊಂಬುಗಳಿಂದ ತಯಾರಿಸಿದ ಬುಟ್ಟಿ, ಮೊರ ಮುಂತಾದ ದಿನನಿತ್ಯ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಎರಡು ತಿಂಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಾಜದ ಬಡವರಿಗೂ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದರು.
ಬುರುಡ ಸಮಾಜದ ಬಸವರಾಜ ಬುರುಡ, ಬಸಪ್ಪ ಬುರುಡ, ಗಂಗಪ್ಪ ಬುರುಡ, ರಾಯಪ್ಪ ಬುರುಡ, ಸಂತೋಷ ಬುರುಡ, ಭೀಮಸಿ ಬುರುಡ, ರವಿ ಬುರುಡ, ಸಂಗಮೇಶ ಬುರುಡ, ಮಾಂತೇಶ ಬುರುಡ, ಮಾನಿಂಗ ಬುರುಡ, ಪ್ರಭು ಬುರುಡ, ಶ್ರೀಕಾಂತ ಬುರುಡ, ಮಲ್ಲಪ್ಪ ಮೇದಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು