68ನೇ ಸೀನಿಯರ್ ರಾಷ್ಟ್ರೀಯ ಕಬ್ಬಡ್ಡಿ ಚಾಂಪಿಯನ್ ಶಿಪ್ ಗೆ ಜಿಲ್ಲೆಯ ಇಬ್ಬರು ಬಾಲಕಿಯರು ಆಯ್ಕೆ
Team Udayavani, Mar 7, 2022, 3:15 PM IST
ಮಹಾಲಿಂಗಪುರ : ಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳೆಯರ ವಿಭಾಗದ ( ಸೀನಿಯರ್ ನ್ಯಾಷನಲ್ ) ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯ ಮಹಿಳಾ ತಂಡಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಕೆಸರಗೊಪ್ಪ ಗ್ರಾಮದ ಸರಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಕೆಸರಗೊಪ್ಪದ ಡಾ.ಸಿ.ಹೊನ್ನಪ್ಪ ಕಬ್ಬಡಿ ಅಕಾಡೆಮಿಯ ಕ್ರೀಡಾಪಟುಗಳಾದ ಕು.ದೀಪಾ ಲ.ಬ್ಯಾಕೂಡ, ದಾನೇಶ್ವರಿ ಬ.ಬ್ಯಾಕೂಡ ಆಯ್ಕೆಯಾಗಿದ್ದಾರೆ.
ಇದೇ ಮಾರ್ಚ್ 10 ರಿಂದ 13ರವರೆಗೆ ಹರಿಯಾಣದಲ್ಲಿ ನಡೆಯಲಿರುವ 68 ನೇ ಸಿನಿಯರ್ ರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡದ 12 ಜನ ಕ್ರೀಡಾಪಟುಗಳಲ್ಲಿ ಕೆಸರಗೊಪ್ಪ ಗ್ರಾಮದ ಈ ಇಬ್ಬರು ಬಾಲಕಿಯರು ಕ್ರೀಡಾಪಟುಗಳಾಗಿ ಆಟವಾಡುತ್ತಿರುವುದು ಹೆಮ್ಮೆಯ ಸಂಗತಿ.
ಈ ವಿದ್ಯಾರ್ಥಿಗಳಿಗೆ ಡಾ.ಸಿ.ಹೊನ್ನಪ್ಪ ಕಬ್ಬಡ್ಡಿ ಅಕಾಡೆಮಿಯ ಅಧ್ಯಕ್ಷ ಡಿ.ಎಂ.ಬ್ಯಾಕೂಡ ಅವರು ತರಬೇತಿ ನೀಡಿದ್ದಾರೆ. ಒಂದೇ ಗ್ರಾಮದ ಇಬ್ಬರು ಬಾಲಕಿಯರು ಏಕಕಾಲಕ್ಕೆ ಕರ್ನಾಟಕ ರಾಜ್ಯ ತಂಡದ ಆಟಗಾರರಾಗಿ ಆಯ್ಕೆಯಾಗಿರುವದಕ್ಕೆ ಕೆಸರಗೊಪ್ಪ ಗ್ರಾಮದ ಗುರುಹಿರಿಯರು, ಹಿರಿಯ-ಕಿರಿಯ ಕ್ರೀಡಾಪಟುಗಳು, ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಬಾಗಲಕೋಟೆ ಜಿಲ್ಲೆಯ ಸಮಸ್ತ ಕ್ರೀಡಾಪಟುಗಳು, ನಿರ್ಣಾಯಕರು, ಜಿಲ್ಲೆಯ ಪದಾಧಿಕಾರಿಗಳು ಆಯ್ಕೆಯಾದ ಇಬ್ಬರು ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ