ಹಿಪ್ಪರಗಿ ಜಲಾಶಯಕ್ಕೆ ಎರಡು ಲಕ್ಷ ಕ್ಯೂಸೆಕ್ ನೀರು!
• ಅಥಣಿಗೆ ತೆರಳಲು ಅಸ್ಕಿ ಗ್ರಾಮದಿಂದ ಬೋಟ್ ವ್ಯವಸ್ಥೆ •ನಡುಗಡ್ಡೆಯಾದ ಅವಳಿ ನಗರ ಜಾಕ್ವೆಲ್ಗಳು
Team Udayavani, Aug 3, 2019, 10:40 AM IST
ಬನಹಟ್ಟಿ: ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಯು ತುಂಬಿ ಹರಿಯುತ್ತಿದ್ದು, ಅವಳಿ ನಗರಗಳ ಜಾಕ್ವೆಲ್ಗಳು ಸದ್ಯ ನಡುಗಡ್ಡೆಯಾಗಿವೆ.
ಬನಹಟ್ಟಿ: ಕೃಷ್ಣೆಯ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಲ್ಲಿನ ಅನೇಕ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ. ಇದರಿಂದ ನದಿ ಪಾತ್ರದ ಗ್ರಾಮಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇದೆ.
ರಬಕವಿ ನಗರದ ಸಮೀಪದಲ್ಲಿ ಕೃಷ್ಣಾನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ನದಿ ದಡದಲ್ಲಿ ಸುಳಿಗಳು ನಿರ್ಮಾಣವಾಗುತ್ತಿವೆ. ಅವಳಿ ನಗರಗಳಿಗೆ ನೀರು ಪೂರೈಸುವ ಜಾಕ್ವೆಲ್ಗಳಿಗೆ ಹೋಗುವ ಮಾರ್ಗ ಬಂದಾಗಿದೆ. ಸದ್ಯ ಜಾಕ್ವೆಲ್ಗಳು ನಡುಗಡ್ಡೆಗಳಾಗಿವೆ. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕೃಷ್ಣಾ ನದಿಯ ತನ್ನ ಒಡಲು ಬಿಟ್ಟು ಹೊರಗೆ ಹರಿಯುತ್ತಿದ್ದಾಳೆ. ಇದರಿಂದಾಗಿ ನದಿ ತೀರದ ಹಲವಾರು ಎಕರೆಯಷ್ಟು ಭೂ ಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ನಿಂತಿವೆ. ಹಿಪ್ಪರಗಿ ಜಲಾಶಯದ ಹಿನ್ನೀರು ಕ್ರಮೇಣ ಹೆಚ್ಚಾಗುತ್ತಿದೆ. ಆದ್ದರಿಂದ ಜನರು ಮತ್ತು ಜಾನುವಾರುಗಳನ್ನು ನದಿ ನೀರಿಗೆ ಇಳಿಸಬಾರದು ಎಂದು ತಾಲೂಕು ಆಡಳಿತ ಮುನ್ನಚ್ಚರಿಗೆ ನೀಡಿದೆ.
ರಬಕವಿ-ಬನಹಟ್ಟಿ ಜಾಕ್ವೆಲ್ ಹತ್ತಿರ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಬೋಟ್ ವ್ಯವಸ್ಥೆ ಬಂದ್ ಮಾಡಲಾಗಿದೆ. ಅಥಣಿ ತಾಲೂಕಿಗೆ ಬೋಟ್ ಮೂಲಕ ತೆರಳಲು ಅನುಕೂಲವಾಗಲೆಂದು ನೆರೆಯ ಅಸ್ಕಿ ಗ್ರಾಮದಿಂದ ಈ ಬೋಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅಥಣಿ ತಾಲೂಕಿನ ಮಹೀಷವಾಡಗಿಗೆ ಹೋಗಲು ಅನೂಕೂಲವಾಗಲಿದೆ.
ಶುಕ್ರವಾರ ಮುಂಜಾನೆ 7ಗಂಟೆಗೆ ದಾಖಲಾದಂತೆ ಹಿಪ್ಪರಗಿ ಜಲಾಶಯಕ್ಕೆ ಒಟ್ಟು 2,18,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದಿನ ನೀರಿನ ಮಟ್ಟ 524.35 ಮೀಟರ್ ಇದ್ದು, ಜಲಾಶಯದ ಹೊರಹರಿವು 2,17,500 ಕ್ಯೂಸೆಕ್ ನಷ್ಟಿದೆ. ಮಹಾರಾಷ್ಟ್ರದ ಕೊಯ್ನಾ 165 ಮೀ, ನವಜಾ 147 ಮಿ.ಮೀ., ಮಹಾಬಲೇಶ್ವರ 222 ಮಿ. ಮೀ, ವಾರಣಾ 149 ಮಿ.ಮೀ., ಸಾಂಗಲಿ 10 ಮಿ.ಮೀ, ಕೊಲ್ಲಾಪುರ 34 ಮಿ. ಮೀ, ರಾಧಾನಗರಿ 162 ಮಿ. ಮೀ, ದೂಧಗಂಗಾ 101 ಮಿ.ಮೀ ನಷ್ಟು ಮಳೆಯಾದ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ನದಿಗೆ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚಿಕೆಯ ಕ್ರಮವಾಗಿ ಡಂಗುರ ಸಾರಿ ಜನರು ನದಿ ತೀರಕ್ಕೆ ಸ್ನಾನಕ್ಕೆ, ಬಟ್ಟೆ ತೊಳೆಯಲಿಕ್ಕೆ, ದನಕರುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಗ್ರೇಡ್-2 ತಹಶೀಲ್ದಾರ್ ಎಸ್.ಬಿ. ಕಾಂಬಳೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್