ಮಹಾಲಿಂಗಪುರ: ಮುಗಿಯದ ಕಬ್ಬು ದರ ಸಮರ; ಸೋಮವಾರಕ್ಕೆ ಸಭೆ ಮುಂದೂಡಿಕೆ
ಕಬ್ಬು ಬೆಳೆಗಾರರ ಸಂಘ ಮತ್ತು ರೈತ ಸಂಘದ ಸಭೆ ವಿಫಲ....
Team Udayavani, Nov 5, 2022, 9:10 PM IST
ಮಹಾಲಿಂಗಪುರ: ಸಮೀಪದ ಸೈದಾಪುರ-ಸಮೀರವಾಡಿಯ ಶಿವಲಿಂಗೇಶ್ವರ ದೇವಾಲಯದಲ್ಲಿ ಪ್ರಸಕ್ತ ಸಾಲಿನ ಕಬ್ಬಿಗೆ ದರ ನಿಗದಿಗಾಗಿ ಸಮೀರವಾಡಿ ಕಬ್ಬು ಬೆಳೆಗಾರ ಸಂಘ ಮತ್ತು ಬಾಗಲಕೋಟೆ ಜಿಲ್ಲಾ ಕಬ್ಬು ಬೆಳೆಗಾರ ಸಂಘ, ರೈತ ಸಂಘದ ಸಭೆಯು ಶನಿವಾರ ಮುಂಜಾನೆ 11ರಿಂದ ಸಂಜೆ 7 ರವರೆಗೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತರು ಹಾಗೂ ರೈತ ಸಂಘದ ಮುಖಂಡರು ಬಾಗಲಕೋಟೆ ಜಿಲ್ಲೆಯ ರನ್ನ ಶುಗರ್ಸ್ 2900, ಬೆಳಗಾವಿ ಜಿಲ್ಲೆಯ ಕಾಗವಾಡ ಶಿರಗುಂಪಿ ಕಾರ್ಖಾನೆಯವರು 2850 , ಬೆಳಗಾವಿ ಜಿಲ್ಲೆಯ ಬೆಡಕಿಹಾಳ ವೆಂಕಟೇಶ್ವರ ಕಾರ್ಖಾನೆ 2900, ನಿಪ್ಪಾಣಿ ಹಾಲಸಿದ್ದನಾಥ ಕಾರ್ಖಾನೆಯವರು 2950 ರಂತೆ ದರ ಘೋಷಿಸಿ, ಈಗಾಗಲೇ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಅವರು ನೀಡಿದಂತೆ ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಸಹ 2900 ರೂಗಳ ದರ ಘೋಷಿಸಿ ಕಾರ್ಖಾನೆ ಪ್ರಾರಂಭಿಸಬೇಕೆಂದು ಸಭೆಯಲ್ಲಿ ಪಟ್ಟು ಹಿಡಿದರು.
ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಮತ್ತು ಸೇವೆಗಾಗಿಯೇ ಸಂಘಟನೆ ಇರುವುದು, ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ಪಡೆಯುವತನಕ ತಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ. ಕಬ್ಬು ಬೆಳೆಗಾರರ ಸಂಘವೂ ಸಹ ಸದಾ ತಮ್ಮ ಬೆನ್ನಿಗೆ ಇದೆ ಸೌಹಾರ್ದ ನೆಲೆಯಲ್ಲಿ ಸಮಸ್ಯೆ ಬಗೆ ಹರಿಸೋಣ ಎಂದರು.
ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ರಂಗನಗೌಡ ಪಾಟೀಲ ಮಾತನಾಡಿ, ಕಾರ್ಖಾನೆಗಳು ರೈತ ಬೆಳೆದ ಕಬ್ಬ ಟನ್ಗೆ 4 ರಿಂದ 5 ಸಾವಿರ ನಿಗದಿ ಮಾಡಿದರೂ ಕಡಿಮೆಯೇ. ರೈತರ ಹಿತ ದೃಷ್ಟಿಯನ್ನು ಪರಿಗಣಿಸಿ, ಈ ಮುಂಚೆ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಸುಮಾರು 500 ಜನ ರೈತರ ಒಪ್ಪಿಗೆಯಂತೆ 2022-23ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ 2800 ರೂಗಳು ಹಾಗೂ ಕಳೆದ ವರ್ಷದ ಎರಡನೇ ಕಂತಿನ 62 ರೂಗಳಿಗೆ ಒಪ್ಪಿಗೊಂಡಿದ್ದೇವೆ. ಇದೊಂದು ಬಾರಿ ಇದೇ ದರ ಪಡೆಯೋಣ, ಇದರಲ್ಲಿ ನಮ್ಮ ಯಾವುದೇ ಲಾಭಿ ಇಲ್ಲ ಎಂದರು.
ಸಭೆ ಸೋಮವಾರಕ್ಕೆ ಮುಂದೂಡಿಕೆ
ಶನಿವಾರ ಮುಂಜಾನೆ 11 ರಿಂದ ಸಂಜೆ 7 ವರೆಗೆ ಸಭೆ ನಡೆದರೂ ಸಹ ಸಮೀರವಾಡಿ ಕಬ್ಬು ಬೆಳೆಗಾರರು ಮತ್ತು ರೈತ ಸಂಘ, ಬಾಗಲಕೋಟೆ ಕಬ್ಬು ಬೆಳಗಾರ ಸಂಘದ ಮಧ್ಯೆ ಒಮ್ಮತ ಮೂಡದ ಕಾರಣ, ಸಭೆಯನ್ನು ನ.7ರ ಸೋಮವಾರಕ್ಕೆ ಮುಂದೂಡಲಾಯಿತು.
ಸಭೆಯಲ್ಲಿ ರೈತ ಮುಖಂಡರಾದ ಸಂಗಪ್ಪ ನಾಗರಡ್ಡಿ ಮುತ್ತಪ್ಪ ಕೋಮಾರ, ಸುಭಾಸ ಶಿರಬೂರ, ಶ್ರೀಕಾಂತ್ ಗೂಳನ್ನವರ, ಮಹಾಲಿಂಗಪ್ಪ ಸನದಿ, ಪ್ರಕಾಶ ಚನ್ನಾಳ, ಈರಪ್ಪ ಹಂಚಿನಾಳ, ಉದಯ ಸಾರವಾಡ, ಗಂಗಾಧರ ಮೇಟಿ, ಬಸವಂತಪ್ಪ ಕಾಂಬಳೆ, ಸುನ್ನಪ್ಪ ಪೂಜಾರಿ, ಬಿ.ಜಿ ಹೊಸೂರ, ಶ್ರೀಶೈಲ ಬೂಮಾರ, ಭೀಮಶಿ ಕರಿಗೌಡರ, ಬಸನಗೌಡ ಪಾಟೀಲ್, ಮಹಾದೇವ ಮಾರಾಪೂರ, ಚಿದಾನಂದ ಅಂಗಡಿ, ಲಕ್ಕಪ್ಪ ಪಾಟೀಲ್, ಬಂದು ಪಕಾಲಿ, ರಮೇಶ ಕುಲಕರ್ಣಿ, ರಾಮಣ್ಣ ಮಳಲಿ, ಮಹಾದೇವ ನಾಡಗೌಡ, ಬಸವಣ್ಣೆಪ್ಪ ಬ್ಯಾಳಿ, ಮಲ್ಲಪ್ಪ ಬಾಯಪ್ಪಗೋಳ, ಶಿವನಗೌಡ ಪಾಟೀಲ್, ಮಲ್ಲಪ್ಪ ಗುರವ, ವೆಂಕಪ್ಪ ಗಿಡ್ಡಪ್ಪನ್ನವರ, ರಮೇಶ ಮೇಟಿ, ಸದಾಶಿವ ಕಂಬಳಿ, ಪ್ರಕಾಶ ಕೋಳಿಗುಡ್ಡ, ಸದಾಶಿವ ಗೊಬ್ಬರದ, ಬಸವರಾಜ ಮಳಲಿ, ಪಿಯೂಷ್ ಓಸ್ವಾಲ, ಮಹಾಲಿಂಗಪ್ಪ ಇಟ್ನಾಳ, ರಾಮಪ್ಪ ಹಟ್ಟಿ, ಯಲ್ಲಪ್ಪ ಉಪ್ಪಾರ ಸೇರಿದಂತೆ ರೈತ ಸಂಘ ಮತ್ತು ಕಬ್ಬು ಬೆಳೆಗಾರರ ಸಂಘದ ಸಾವಿರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ