ಕಾರಜೋಳರಿಗೆ ದೇವರ ಆಶೀರ್ವಾದ ಹೆಚ್ಚಿತ್ತು ಹಾಗಾಗಿ ಡಿಸಿಎಂ ಆದ್ರು!
Team Udayavani, Nov 5, 2019, 9:33 PM IST
ಬಾಗಲಕೋಟೆ: ಗೋವಿಂದ ಕಾರಜೋಳರಿಗೆ ದೇವರು ಹೆಚ್ಚು ಆಶೀರ್ವಾದ ಮಾಡಿದ್ದಾನೆ. ಹೀಗಾಗಿ ಅವರು ಉಪ ಮುಖ್ಯಮಂತ್ರಿ ಆದ್ರ. ನನಗೆ ಕಡಿಮೆ ಆಶೀರ್ವಾದ ಮಾಡಿದ್ದಾನೆ. ಹೀಗಾಗಿ ನಾನು ಸಚಿವನಾಗಿದ್ದೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಮುಧೋಳ ತಾಲೂಕಿನ ಗುಲಗಾಲ ಜಂಬಗಿಯಲ್ಲಿ ಪ್ರವಾಹದಿಂದ ಬಿದ್ದ ಮನೆಗಳ ಪರಿಶೀಲನೆ ಮಾಡಿ, ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋವಿಂದ ಕಾರಜೋಳ ಮತ್ತು ನಾನು ಕಳೆದ 35 ವರ್ಷಗಳಿಂದ ಒಂದೇ ಪಕ್ಷದಿಂದ ರಾಜಕೀಯ ಮಾಡಿದವರು. ದೇವರು ಕಾರಜೋಳರಿಗೆ ಹೆಚ್ಚು ಆಶೀರ್ವಾದ ಮಾಡಿದ್ದಾನೆ, ನನಗೆ ಸ್ವಲ್ಪ ಕಡಿಮೆ ಆಶೀರ್ವಾದ ಮಾಡಿದ್ದು, ಹೀಗಾಗಿ ನಾನು ಸಚಿವನಾದರೆ, ಕಾರಜೋಳರು ಉಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಲಘು ದಾಟಿಯಲ್ಲಿ ಹೇಳಿದರು..