ಗಂಜಿ ಕೇಂದ್ರದಲ್ಲಿ ವರಮಹಾಲಕ್ಷ್ಮೀ ಪೂಜೆ
Team Udayavani, Aug 11, 2019, 11:25 AM IST
ತೇರದಾಳ: ಪಟ್ಟಣದ ಜೆವಿ ಮಂಡಳ ಗಂಜಿ ಕೇಂದ್ರದಲ್ಲಿ ಶ್ರಾವಣ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಜರುಗಿತು.
ತೇರದಾಳ: ಕೃಷ್ಣಾ ನದಿಯ ಪ್ರವಾಹದಿಂದ ನಿರಾಶ್ರಿತರಾದ ತಮದಡ್ಡಿ ಹಾಗೂ ಹಳಿಂಗಳಿ ಗ್ರಾಮದ ಗುಳ್ಳಿಮಳಿ ಭಾಗದ ಜನರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಜರುಗಿತು.
ಮುಖಂಡ ಪ್ರೊ| ಬಸವರಾಜ ಕೊಣ್ಣೂರ ಪೂಜೆ ಹಾಗೂ ಸಿಹಿ ಭೋಜನದ ವ್ಯವಸ್ಥೆ ಮಾಡಿದ್ದರು. ನಗರದ ಜೆವಿ ಮಂಡಳದ ಸಮುದಾಯ ಭವನದಲ್ಲಿ ಮತ್ತು ನೀಲಕಂಠೇಶ್ವರ ಮಂದಿರದ ಆವರಣದಲ್ಲಿ ತಮದಡ್ಡಿ ಗ್ರಾಮದವರಿಗೆ, ಹಳಿಂಗಳಿ ಗ್ರಾಮದ ಗುಳ್ಳಿಮಳಿ ಭಾಗದ ಜನರಿಗೆ ಹಳಿಂಗಳಿ ಗುಡ್ಡದ ಭಾಗದಲ್ಲಿ ವಸತಿ ವ್ಯವಸ್ಥೆ ಜೊತೆಗೆ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ತೇರದಾಳ ಮತಕ್ಷೇತ್ರದಲ್ಲಿ ಒಟ್ಟು 9 ಕಡೆಗೆ ಗಂಜಿ ಕೇಂದ್ರಗಳಿವೆ. ಎಲ್ಲ ಗಂಜಿ ಕೇಂದ್ರಗಳಲ್ಲೂ ವರಮಹಾಲಕ್ಷ್ಮೀ ದೇವಿ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಉಡಿ ತುಂಬಲಾಯಿತು. ನಿರಾಶ್ರಿತ ಮಹಿಳೆಯರು ಆರುತಿ ಮಾಡಿದರು. ನಂತರ ಶಿರಾ ಮತ್ತು ಫಲಾವ್ ಊಟ ಬಡಿಸಲಾಯಿತು. ಜೆವಿ ಮಂಡಳದ ಸಮುದಾಯ ಭವನದಲ್ಲಿ ಒಟ್ಟು 300ಕ್ಕೂ ಅಧಿಕ ಜನರು ಹಾಗೂ ನೀಲಕಂಠೇಶ್ವರ ಮಂದಿರದ ಆವರಣದ ಗಂಜಿ ಕೇಂದ್ರದಲ್ಲಿ 450ಕ್ಕೂ ಹೆಚ್ಚಿನ ಜನರು ವಾಸವಾಗಿದ್ದು, ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪ್ರೊ| ಬಸವರಾಜ ಕೊಣ್ಣೂರ ಲಕ್ಷ್ಮೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಚಂದ್ರಶೇಖರ ಶಿವಾಚಾರ್ಯ ಶ್ರೀ, ಭುಜಬಲಿ ಕೆಂಗಾಲಿ, ಬಸವರಾಜ ಬಾಳಿಕಾಯಿ, ನಂದು ಗಾಯಕವಾಡ, ಶಶಿಕುಮಾರ ವಲ್ಯಾಪೂರ, ಡಾ| ಜೆ.ಬಿ. ಆಲಗೂರ, ಡಿ.ಬಿ. ಪಾಟೀಲ, ವಿಜಯ್ ಶಿಗ್ಲಿ, ಎಸ್.ಎನ್. ಹೆಬ್ಟಾಳೆ, ಆರ್.ಬಿ. ಬಾಳಿಕಾಯಿ, ಕಲ್ಲಪ್ಪ ಕಬಾಡಗಿ, ಬಸವರಾಜ ಕಲಬುರ್ಗಿ, ಪ್ರಭು ಹೂಗಾರ, ಈರಪ್ಪ ಮಗದುಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ