ಹಿಪ್ಪರಗಿ ಜಲಾಶಯದಿಂದ ನೀರು ಬಿಡುಗಡೆ: ಶಾಸಕ ಸವದಿ
Team Udayavani, May 18, 2020, 2:32 PM IST
ಜಮಖಂಡಿ: ಹಿಪ್ಪರಗಿ ಜಲಾಶಯದಿಂದ ಜಮಖಂಡಿ ಹಾಗೂ ಅಥ ತಾಲೂಕಿನ 40 ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಬಾರದೆಂಬ ಉದ್ದೇಶದಿಂದ ಚಿಕ್ಕಪಡಸಲಗಿ ಬ್ಯಾರೇಜ್ ವರೆಗೆ ಮತ್ತೆ 0.03 ಟಿಎಂಸಿ ನೀರು ಬಿಡಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಹಿಪ್ಪರಗಿ ಬ್ಯಾರೇಜ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಶ್ಯಕತೆಗೆ ಅನುಗುಣವಾಗಿ ನೀರು ಬಿಡಲಾಗಿದ್ದು, ರೈತರು ನೀರನ್ನು ಪೋಲು ಮಾಡದೇ ಬಳಕೆ ಮಾಡಬೇಕು. ಶೂರ್ಪಾಲಿ, ಕಡಕೋಳ, ತುಬಚಿ, ಮೈಗೂರು-ಮುತ್ತೂರು, ಕಂಕನವಾಡಿ ಇನ್ನಿತರರ ಗ್ರಾಮಗಳಿಗೆ ನೀರಿನ ಬವಣೆ ತಪ್ಪಲಿದೆ. ಮಹಾರಾಷ್ಟ್ರದ ರಾಜಾಪುರ ಡ್ಯಾಂದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ಪ್ರತಿದಿನ 1 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಹಿಪ್ಪರಗಿ ಬ್ಯಾರೇಜ್ ಹೆಚ್ಚಿನ ಒಳಹರಿವು ಹೆಚ್ಚಾಗಿದೆ ಎಂದರು.
ಹಿಪ್ಪರಗಿ ಬ್ಯಾರೇಜ್ದಿಂದ 2500 ಕ್ಯೂಸೆಕ್ ನೀರನ್ನು ಬ್ಯಾರೇಜಿನ ಜಿರೋ ಪಾಯಿಂಟ್ ಭಾಗದಿಂದ ಒಂದು ಗೇಟ್ ತೆರವುಗೊಳಿಸಿ ಸತತ 4 ದಿನಗಳ ಕಾಲ ಬಿಡಲಾಗುತ್ತದೆ. ಬ್ಯಾರೇಜಿನಲ್ಲಿ ಪ್ರಸಕ್ತ 1.84 ಟಿಎಂಸಿ ನೀರು ಸಂಗ್ರಹವಾಗಿದೆ ಎಂದರು. ಜಿಪಂ ಸದಸ್ಯ ಪುಂಡಲೀಕ ಪಾಲಬಾವಿ, ಬಸವರಾಜ ಸಿಂಧೂರ, ರಮೇಶ ನಾಯಿಕ, ಆನಂದ ಕಂಪು, ಅಣ್ಣಪ್ಪ ಸಾವಳಗಿ, ಚನ್ನಬಸಪ್ಪ ಹೊಸಮನಿ, ಸಲಬಣ್ಣ ಮಂಟೂರ, ಜಮಖಂಡಿ: ಹಿಪ್ಪರಗಿ ಬ್ಯಾರೇಜ್ಗೆ ಶಾಸಕ ಸಿದ್ದು ಸವದಿ ಭೇಟಿ ನೀಡಿದ್ದರು. ದಯಾನಂದ ಧರೀಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು