ನೇಕಾರರು ರೈತರಂತೆ ಸ್ವಾವಲಂಬಿಗಳು
Team Udayavani, May 31, 2020, 11:53 AM IST
ಮಹಾಲಿಂಗಪುರ: ನೇಕಾರರು ಸಹ ರೈತರಂತೆ ಸ್ವಾವಲಂಬಿಗಳು. ಅವರ ದುಡಿಮೆಯಲ್ಲಿಯೇ ಬದುಕುವ ನಿಷ್ಠಾವಂತರು ಎಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಶನಿವಾರ ಸ್ಥಳೀಯ ಕುರುವಿನಶೆಟ್ಟಿ ಅರ್ಬನ ಕೋ.ಆಪ್. ಬ್ಯಾಂಕ್ನಲ್ಲಿ ನೇಕಾರ ಸಾಲಮನ್ನಾ ಯೋಜನೆಯಲ್ಲಿ ಸಾಲಮನ್ನಾ ಯೋಜನೆಯ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿವರ್ಷ ಕೈಮಗ್ಗ ನೇಕಾರರು ಮತ್ತು ಪವರಲೂಮ್ ನೇಕಾರರು ಸಹಎಲ್ಲರಂತೆ ಆರ್ಥಿಕವಾಗಿ ಸಬಲರಾಗಲಿ ಎಂಬ ಸದುದ್ದೇಶದಿಂದ ಪ್ರತಿವರ್ಷ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದು, ಸರ್ಕಾರವೇ ನೇಕಾರರ ಸಾಲವನ್ನು ಮರುಪಾವತಿ ಮಾಡುತ್ತಿದೆ ಎಂದರು.
ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರಿರುವುದರಿಂದ ಈ ಯೋಜನೆಯಿಂದ ನಮ್ಮ ನೇಕಾರರಿಗೆ ಅನುಕೂಲವಾಗಿದೆ. ಲಾಕ್ಡೌನ್ ಆರಂಭವಾದ ನಂತರ ಎಲ್ಲ ಮಗ್ಗಗಳು, ಸೀರೆ ವ್ಯಾಪಾರ ಪೂರ್ತಿಯಾಗಿ ಬಂದಾಗಿ ನೇಕಾರರು ನೇಯ್ದ ಸೀರೆಗಳು ಉಳಿದಿವೆ. ಹೀಗಾಗಿ ನೇಕಾರರು ಹೆಚ್ಚಿನ ಮಟ್ಟಿಗೆ ತೊಂದರೆ ಅನುಭವಿಸುವಂತಾಗಿದೆ. ಈ ವಿಷಯವನ್ನು ಮನಗಂಡು ಸರ್ಕಾರ ಸಹಾಯವನ್ನು ನೇಕಾರರಿಗೆ ಮಾಡುತ್ತಿದೆ. ಇದರ ಸದುಪಯೋಗವನ್ನು ಎಲ್ಲ ನೇಕಾರರು ಪಡೆದುಕೊಳ್ಳಬೇಕು ಎಂದರು.
ನೇಕಾರ ಸಾಲಮನ್ನಾಯೋಜನೆಯಡಿ 7 ಫಲಾನುಭವಿಗಳಿಗೆ 3.91.465 ಲಕ್ಷ ರೂಗಳ ಚೆಕ್ಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಬ್ಯಾಂಕಿನ ಸದಸ್ಯರಾದ ಬಸವರಾಜ ಬಟಕುರ್ಕಿ, ಸುರೇಶ ಶಿರೋಳ, ಅಕ್ಷತಾ ಹಲಗತ್ತಿ, ಪರಶುರಾಮ ಜಕ್ಕನ್ನವರ, ಜೀವವಿಮಾ ಪ್ರತಿನಿಧಿ ಈರಣ್ಣ ಹಲಗತ್ತಿ, ಶಾಖಾ ವ್ಯವಸ್ಥಾಪಕ ಪ್ರಶಾಂತ ಬೆಳಕೂಡ, ಬಸಪ್ಪ ಬೋಳನ್ನವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ