ಭಕ್ತರ ವ್ಯಸನ ಮುಕ್ತಿಗೆ ಭಿಕ್ಷೆ ಬೇಡುವ ರಾಜೇಶ್ವರ ಶ್ರೀ

ಪುತ್ಥಳಿ ತೆರವಿಗೆ ಸಹಕರಿಸಿ ಸಂಚಾರ ಸುಗಮಗೊಳಿಸಿದರು ಭಕ್ತರ ಆರೋಗ್ಯ-ಆರ್ಥಿಕ ಸ್ಥಿತಿ ಸುಧಾರಣೆಗೆ ಸಂಕಲ್ಪ

Team Udayavani, May 1, 2019, 4:54 PM IST

Udayavani Kannada Newspaper

ಭಾಲ್ಕಿ: ಸ್ವಾಮಿಗಳೆಂದರೆ ಭಕ್ತರಿಂದ ಪಾದಪೂಜೆ ಮಾಡಿಸಿಕೊಳ್ಳುವುದಕ್ಕೆ ಸೀಮಿತ ಎನ್ನುವ ನುಡಿಗೆ ಅಪವಾದ ಮೆಹಕರ ಶ್ರೀಗಳು ಭಕ್ತರ ಶ್ರೇಯಸ್ಸೇ ತಮ್ಮ ಶ್ರೇಯಸ್ಸು ಎಂದು ಹಗಲಿರುಳು ಭಕ್ತರ ಉದ್ಧಾರಕ್ಕಾಗಿ ದುಡಿಯುತ್ತಲಿದ್ದಾರೆ.

ಶ್ರೀಗಳು ಕಟ್ಟಿಮನಿ ಸಂಸ್ಥಾನ ಹಿರೇಮಠಗಳಾದ ಮೆಹಕರ, ತಡೋಳಾ, ರಾಜೇಶ್ವರ, ಡೊಣಗಾಪೂರ ಮಠಗಳ ಪೀಠಾಕ್ಷರಾಗಿ ತಮ್ಮ ಭಕ್ತರಿಗೆ ಉತ್ತಮ ಮಾರ್ಗ ದರ್ಶನ ಮಾಡುವುದರೊಂದಿಗೆ ಅವರ ಆರೋಗ್ಯದ ಕಡೆಗೂ ಗಮನ ನೀಡುತ್ತಿರುವುದು ಪ್ರಶಂಶನೀಯವಾಗಿದೆ.

ಮೆಹಕರ ಗ್ರಾಮದಲ್ಲಿ ನೂರಾರು ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಸರ್ಕಾರ ಮಾಡಲಾಗಂದತಹ ಕಾರ್ಯವನ್ನು ಶ್ರೀಗಳು ಮಾಡಿದರು. ಎಲ್ಲ ಧರ್ಮಿಯರನ್ನು ಒಂದು ಗೂಡಿಸಿ, ಮಹಾನ್‌ ಪುರುಷರ ಮೂರ್ತಿಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸಿ, ಗ್ರಾಮದ ರಸ್ತೆಗಳನ್ನು ಸುಗಮ ಸಂಚಾರಕ್ಕೆ ಅಣಿ ಮಾಡಿಕೊಟ್ಟರು.

ಇದೇ ಗ್ರಾಮದಲ್ಲಿ ಒಂದು ಸಲ ಒಬ್ಬ ಮಹಾನ್‌ ಪುರುಷರ ಮೂರ್ತಿ ತೆಗೆದಿದ್ದಕ್ಕಾಗಿ ತಹಸೀಲ್ದಾರ್‌ ಅವರ ಜೀಪ್‌ ಸುಟ್ಟ ಘಟನೆ ನಡೆದಿತ್ತು. ಇಂತಹ ಪರಿಸ್ಥಿತಿ ಇರುವ ಗ್ರಾಮದಲ್ಲಿ ಶ್ರೀಗಳು ಎಲ್ಲರನ್ನೂ ಒಟ್ಟುಗೂಡಿಸಿದ್ದು ಮಹಾನ್‌ ಕಾರ್ಯವಾಗಿದೆ.

ಸದ್ಯದಲ್ಲಿ ಶ್ರೀಗಳು ತಮ್ಮ ಗ್ರಾಮಗಳ ಭಕ್ತರ ಆರೋಗ್ಯ ವೃದ್ಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಸರಾ ಸಮಯದಲ್ಲಿ ಸುಮಾರು ದಿವಸಗಳಿಂದ ತಾಲೂಕಿನ ಡೊಣಗಾಪೂರ ಗ್ರಾಮದಲ್ಲಿ ಉಳಿದು, ಗ್ರಾಮದ ಎಲ್ಲಾ ಧರ್ಮಿಯರ ಓಣಿಗಳಿಗೆ ಸಂಪರ್ಕಿಸಿ, ಅಲ್ಲಿಯ ಜನರನ್ನು ವ್ಯಸನ ಮುಕ್ತಗೊಳಿಸಿದ್ದಾರೆ. ಇದರಿಂದ ಭಕ್ತರ ಆರೋಗ್ಯ ದೊಂದಿಗೆ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.

ಎಲ್ಲರೂ ತಿಳಿದುಕೊಳ್ಳುವ ಹಾಗೆ ಶ್ರೀಗಳು ಒಂದು ಧರ್ಮಕ್ಕೆ ಅಂಟಿಕೊಳ್ಳದೇ ಗ್ರಾಮದ ಎಲ್ಲರೂ ಸುಖವಾಗಿರಬೇಕು ಎನ್ನುವ ಉದ್ದೇಶದಿಂದ ಮಾಡುತ್ತಿರುವ ಕಾರ್ಯ ಎಲ್ಲರೂ ಮೆಚ್ಚುವಂತಹದಾಗಿದೆ.

ಭಕ್ತರೇ ನಮ್ಮ ಆಸ್ತಿ. ಮಠದಲ್ಲಿರುವ ಎಲ್ಲ ಆಸ್ತಿಗಿಂತಲೂ ಭಕ್ತರ ಆರೋಗ್ಯ ನಮಗೆ ಮುಖ್ಯ. ಹೀಗಾಗಿ ಭಕ್ತರು ಆರೋಗ್ಯವಂತರಾಗಿರಬೇಕಾದರೆ ಅವರು ತಮ್ಮ ಎಲ್ಲಾ ವ್ಯಸನಗಳಿಂದ ದೂರವಿರಬೇಕು. ಆಗ ಮಾತ್ರ ಅವರು ಆರೋಗ್ಯವಾಗಿದ್ದು, ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ನಾವು ನಮ್ಮ ಭಕ್ತರ ಹತ್ತಿರ ಅವರ ವ್ಯಸನಗಳ ಭಿಕ್ಷೆ ಬೇಡುತ್ತಿದ್ದೇನೆ. ಮಠಾಧಿಧೀಶರೆಂದರೆ ಮಠ ಬೆಳೆಸುವುದಲ್ಲ, ವೈಯಕ್ತಿಕ ಆಸ್ತಿಗೆ ಗಮನ ಕೊಡದೇ ಮಠಾಧೀಶರು ಭಕ್ತರ ಉದ್ಧಾರಕ್ಕೆ ದುಡಿಯಬೇಕು.
ಶ್ರೀ ರಾಜೇಶ್ವರ ಶಿವಾಚಾರ್ಯರು

ಶ್ರೀಗಳಿಗೆ ಅವರ ಮಠದ ಆಸ್ತಿಯೇ ಸಾಕಷ್ಟು ಇದೆ. ಅವರು ತಮ್ಮ ಮಠದಲ್ಲಿಯೇ ಪೂಜೆ ನಡೆಸಿಕೊಂಡು ಇರಬಹುದು. ಆದರೆ ಭಕ್ತರ ಉದ್ಧಾರಕ್ಕಾಗಿ ಮನೆ, ಮನೆಗೆ ತೆರಳಿ ಭಕ್ತರಲ್ಲಿಯ ದುರ್ಗುಣಗಳ ಭಿಕ್ಷೆ ಬೇಡಿ, ಅವರನ್ನು ಸನ್ಮಾರ್ಗಕ್ಕೆ ಹಚ್ಚುತ್ತಿರುವುದು ಪ್ರಶಂಶನೀಯವಾಗಿದೆ.
ರಾಮಶೆಟ್ಟಿ ವಿರಶೆಟ್ಟೆ, ಡೊಣಗಾಪೂರ ಗ್ರಾಮದ ಭಕ್ತ

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.