ರಾಜಧಾನಿಯಲ್ಲಿ 2ಲಕ್ಷ ಸಕ್ರಿಯ ಸೋಂಕಿತರು
Team Udayavani, Apr 28, 2021, 1:35 PM IST
ಬೆಂಗಳೂರು: ರಾಜಧಾನಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಬರೋಬ್ಬರಿ ಎರಡು ಲಕ್ಷ ಗಡಿದಾಟಿದ್ದು, ದೆಹಲಿ, ಪುಣೆ,ಮುಂಬೈಗಿಂತಲೂ ದುಪ್ಪಟ್ಟು ಹೆಚ್ಚು ಸೋಂಕಿತರು ಚಿಕಿತ್ಸೆ/ಆರೈಕೆಯಲ್ಲಿದ್ದಾರೆ.
ಇನ್ನೊಂದೆಡೆ ನಗರದಲ್ಲಿ ಈವರೆಗೂಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಆರು ಸಾವಿರಕ್ಕೆಹೆಚ್ಚಳವಾಗಿದೆ.ಮಂಗಳವಾರ ನಗರದಲ್ಲಿ 17550 ಮಂದಿಗೆ ಸೋಂಕುತಗುಲಿದ್ದು, 97 ಸೋಂಕಿತರ ಸಾವಾಗಿದೆ.
3899 ಮಂದಿಗುಣಮುಖರಾಗಿದ್ದಾರೆ. ನಿರಂತರ ಸೋಂಕು ಪ್ರಕರಣಗಳುಹೆಚ್ಚಳವಾದ ಹಿನ್ನೆಲೆ ಸಕ್ರಿಯ ಪ್ರಕರಣಗಳು 2,06, 223 ಕ್ಕೆತಲುಪಿವೆ. ಈ ಪೈಕಿ 11,500 ಸೋಂಕಿತರು ಆಸ್ಪತ್ರೆಯಲ್ಲಿ, 1500ಸೋಂಕಿತರು ಕೊರೊನಾ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ / ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವವರಲ್ಲಿ 590 ಮಂದಿ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಕಿ 1.93 ಲಕ್ಷ ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ.ಮಹಾನಗರಗಳಾದ ದೆಹಲಿ 1.1 ಲಕ್ಷ, ಪುಣೆ 1.1 ಲಕ್ಷ, ಮುಂಬೈ75 ಸಾವಿರ ಸಕ್ರಿಯ ಸೋಂಕಿತರಿದ್ದಾರೆ. ಈ ನಗರಗಳಿಗೆ ಹೋಲಿಸಿದರೆಸಕ್ರಿಯ ಪ್ರಮಾಣ ದುಪ್ಪಟ್ಟಿದೆ.ಈ ಮೂಲಕ ನಗರದ ಒಟ್ಟಾರೆ ಸೋಂಕು ಪ್ರಕರಣಗಳು 6.87 ಲಕ್ಷಕ್ಕೆಹೆಚ್ಚಳವಾಗಿದ್ದು, 4.75 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕಳೆದಒಂದು ವಾರದಿಂದ ಸರಾಸರಿ 100ಕ್ಕೂ ಅಧಿಕ ಸೋಂಕಿತರು ನಗರದಲ್ಲಿಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 6,002ಕ್ಕೆ ಹೆಚ್ಚಳವಾಗಿದೆ.ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಹೊಸ ಪ್ರಕರಣಗಳುಒಂದು ಸಾವಿರ ಹೆಚ್ಚಾಗಿದ್ದು, ಎಂಟು ಸಾವು ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ