ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿನಿಗೆ 20 ಲಕ್ಷ ವಂಚನೆ
Team Udayavani, May 31, 2019, 12:43 PM IST
ಬೆಂಗಳೂರು: ಕೆ.ಜಿ.ಹಳ್ಳಿಯ ಡಾ ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಾಲ್ವರು ಆರೋಪಿಗಳು ಆಂಧ್ರ ಮೂಲದ ವಿದ್ಯಾರ್ಥಿನಿಗೆ 20 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹೈದರಾಬಾದ್ನ ಎನ್.ಶ್ವೇತಾ ಬಿಂದು ಎಂಬ ವಿದ್ಯಾರ್ಥಿನಿ ಮೇ 28ರಂದು ಕಾಡುಗೊಂಡನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಆಧಾರದ ಮೇಲೆ ಮಧ್ಯವರ್ತಿಗಳು ಎನ್ನಲಾದ ಸಾಕೇತ್, ಸಂತೋಷ್, ಕೃಷ್ಣಕುಮಾರ್, ಮೆಡಿಕಲ್ ಕಾಲೇಜಿನ ಅಧ್ಯಕ್ಷನ ಸಹೋದರ ಎಂದು ಹೇಳಿಕೊಂಡಿದ್ದ ವ್ಯಕ್ತಿ ಸೇರಿ ನಾಲ್ವರ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಶ್ವೇತಾ ಬಿಂದು ಮೆಡಿಕಲ್ ಎಂ.ಡಿ ಸೀಟು ಪಡೆಯಲು ದೆಹಲಿಯ ಮಧ್ಯವರ್ತಿ ಸಾಕೇತ್ನನ್ನು ಕೇಳಿದ್ದರು. ಆತ ಬೆಂಗಳೂರಿನ ಸಂತೋಷ್ನ ಮೊಬೈಲ್ ನಂಬರ್ ಕೊಟ್ಟಿದ್ದರು. ಅದರಂತೆ ಆಕೆ, ಸಂತೋಷ್ನನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಆತ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ತನಗೆ ಪರಿಚಯಸ್ಥ ವ್ಯಕ್ತಿಗಳಿದ್ದು, ಹಣ ಕೊಟ್ಟರೆ ಸೀಟು ಕೊಡಿಸುವುದಾಗಿ ನಂಬಿಸಿದ್ದ. ಕೆಲ ದಿನಗಳ ಬಳಿಕ ಕಾಲೇಜಿನ ಅಧ್ಯಕ್ಷರ ಕೊಠಡಿಗೆ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದ ಸಂತೋಷ್, ತನ್ನ ಸ್ನೇಹಿತನನ್ನೇ ಅಧ್ಯಕ್ಷನ ಸಹೋದರ ಎಂದು ಪರಿಚಯಿಸಿಕೊಟ್ಟಿದ್ದ. ಆಗ ಆತ 10 ಲಕ್ಷ ರೂ. ಅನ್ನು ಮುಂಗಡವಾಗಿ ಕೊಟ್ಟರೆ, ಸೀಟು ಕೊಡಿಸುವುದಾಗಿ ನಂಬಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮಾ.5ರಂದು ಮುಂಗಡ ಹಣ 50 ಸಾವಿರ ರೂ. ಅನ್ನು ಸಂತೋಷ್ ಮತ್ತು ಅಧ್ಯಕ್ಷನ ಸಹೋದರ ಎಂದು ಹೇಳಿಕೊಂಡಿದ್ದ ವ್ಯಕ್ತಿಗೆ ಕೊಟ್ಟಿದ್ದಾರೆ. ನಂತರ ಮಾ 8ರಂದು ಕಾಲೇಜು ಆವರಣದಲ್ಲೇ 9.50 ಲಕ್ಷ ರೂ.ಹಾಗೂ ಮೇ 20ರಂದು 10 ಲಕ್ಷ ರೂ. ಒಟ್ಟು 20 ಲಕ್ಷ ರೂ. ಕೊಟ್ಟಿದ್ದಾರೆ. ಆದರೆ, ಆರೋಪಿಗಳು ಇದುವರೆಗೂ ವೈದಕೀಯ ಎಂ.ಡಿ.ಸೀಟು ಕೊಡಿಸದೇ, ತೆಗೆದುಕೊಂಡಿರುವ ಹಣವನ್ನು ವಾಪಸ್ ಕೊಡದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ