ಡಿಡಿಪಿಐಗಳ 2ನೇ ಹಂತದ ವರ್ಗಾವಣೆ
Team Udayavani, Aug 20, 2017, 7:25 AM IST
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ
ಎರಡನೇ ಹಂತದ ವರ್ಗಾವಣೆ ಶನಿವಾರ ನಡೆದಿದೆ.
ಈ ಹಿಂದೆ 30 ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಹಲವು ಶಾಸಕರ ಅಸಮಾಧಾನದಿಂದ ಆ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆಹಿಡಿದು, ಶಾಸಕರ ಒತ್ತಾಸೆಯಂತೆ ಪರಿಷ್ಕರಿಸಿ ಪುನರ್ ಪ್ರಕಟಿಸಿದ್ದರು.
ಇದಾದ ನಂತರ ಶನಿವಾರ ಡಿಡಿಪಿಐಗಳ ವರ್ಗಾವಣೆಯ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲಾ ಉಪನಿರ್ದೇಶಕಿ ಎಂ.ಎಂ.ಸಿಂಧೂರ ಅವರನ್ನು ವಿಜಯಪುರದ ಡಯಟ್ ಪ್ರಾಂಶುಪಾಲರ ಹುದ್ದೆಗೆ, ರಾಯಚೂರು ಉಪನಿರ್ದೇಶಕ ಮಂಜುನಾಥ್ ರನ್ನು ಹಾಸನ ಜಿಲ್ಲೆಗೆ, ಯಾದಗಿರಿ ಡಯಟ್ ಪ್ರಾಂಶುಪಾಲ ವಾಲ್ಟರ್ ಹಿಲೇರಿ ಡಿಮೇಲೋ ಅವರನ್ನು ಕೊಡಗು ಡಯಟ್ಗೆ ವರ್ಗಾಯಿಸಲಾಗಿದೆ.
ಕೊಡಗು ಡಯಟ್ ಪ್ರಾಂಶುಪಾಲ ಶ್ರೀಶೈಲ ಶಾಂತಪ್ಪ ಬಿರಾದರ್-ಯಾದಗಿರಿಗೆ, ಉಡುಪಿ ಜಿಲ್ಲಾ ಉಪನಿರ್ದೇಶಕ ಈಶ್ವರ ಎಚ್.ನಾಯ್ಕ- ಉತ್ತರ ಕನ್ನಡ ಜಿಲ್ಲಾ ಡಯಟ್ಗೆ, ಬೀದರ್ ಉಪನಿರ್ದೇಶಕ ಎಚ್.ಸಿ.ಚಂದ್ರಶೇಖರ್- ಚಾಮರಾಜನಗರ ಡಯಟ್ಗೆ, ಕುಮಟಾ ಡಯಟ್ ಪ್ರಾಂಶುಪಾಲ ಎಚ್.ಆರ್. ಬಸಪ್ಪ- ಶಿಕ್ಷಕರ ಕಲ್ಯಾಣ ನಿಧಿ ಉಪನಿರ್ದೇಶಕ ಹುದ್ದೆಗೆ, ಕೊಪ್ಪಳ ಜಿಲ್ಲಾ ಉಪನಿರ್ದೇಶಕಿ ಅಮಿತಾ ಎನ್. ಯರಗೋಳ್ಕರ್-ಸಿಟಿಇ ಕಲಬುರಗಿಗೆ ರೀಡರ್ ಆಗಿ ಮತ್ತು ಚಾಮರಾಜನಗರ ಡಯಟ್ ಪ್ರಾಂಶುಪಾಲ ಎ.ಶ್ಯಾಮಸುಂದರ್ ಅವರನ್ನು ಬೀದರ್ ಜಿಲ್ಲಾ ಡಯಟ್ಗೆ ವರ್ಗಾಯಿಸಲಾಗಿದೆ. ಪಟ್ಟಿಯಲ್ಲಿ ಈ ಹಿಂದೆ ವರ್ಗಾವಣೆಯಾದವರ ಹೆಸರು ಸೇರಿಕೊಂಡಿದೆ. ವರ್ಷದ
ಆರಂಭದಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಯಾಗಿತ್ತು. ಇದರಿಂದ ಅತೃಪ್ತಿಗೊಂಡಿರುವ ಕೆಲವರು ಶಾಸಕರ ಮೂಲಕ ಸಿಎಂ ಮೇಲೆ ಒತ್ತಡ ಹೇರಿದ್ದರು. ಇದರ ಪರಿಣಾಮ ಹೊಸ ಆದೇಶದಂತೆ ಕೆಲವರು ಹಳೇ ಸ್ಥಾನಕ್ಕೆ ವಾಪಸ್ ಆಗಿದ್ದಾರೆ.
ಕೆಇಎ ವೆಬ್ಸೈಟ್ನಲ್ಲಿ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪಿಜಿಸಿಇಟಿ-2017ರ ಎಂಬಿಎ, ಎಂಸಿಎ, ಎಂ.ಇ., ಎಂ.ಟೆಕ್ ಕೋರ್ಸ್ಗಳ ಪ್ರವೇಶದ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ದಾಖಲೆ ಪರಿಶೀಲನೆ, ಆಪ್ಷನ್ ಎಂಟ್ರಿ, ಸೀಟು ಹಂಚಿಕೆ ವೇಳಾಪಟ್ಟಿಯು ವೆಬ್ಸೈಟ್ http://kea.kar.nic.in ನಲ್ಲಿ ಲಭ್ಯವಿದೆ.
ಡಿಸಿಇಟಿ ಫಲಿತಾಂಶ: ಡಿಪ್ಲೊಮಾ ಅಭ್ಯರ್ಥಿಗಳಿಗೆ 2017ನೇ ಸಾಲಿನ 2ನೇ ವರ್ಷದ ಎಂಜಿನಿಯರಿಂಗ್ಕೋರ್ಸ್ಗೆ ಪ್ರವೇಶ ಪಡೆಯಲು ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗಿದೆ. ಪ್ರಾಧಿಕಾರದ
ವೆಬ್ಸೈಟ್ http://kea.kar.nic.in ನಲ್ಲಿ ಮಾಹಿತಿ ಲಭ್ಯವಿದ್ದು, ಫಲಿತಾಂಶ ಪರೀಶಿಲಿಸಿದ ನಂತರ
ಅಭ್ಯರ್ಥಿಗಳು ಆಪ್ಷನ್ ಎಂಟ್ರಿ ಮಾಡಿ ಮುಂದಿನ ಕ್ರಮ ವಹಿಸುವಂತೆ ಪ್ರಾಧಿಕಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ