45 ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ
Team Udayavani, Oct 1, 2018, 6:00 AM IST
ಬೆಂಗಳೂರು:ಭಾರಿ ಮಳೆಯಿಂದ ತತ್ತರಿಸಿ ಅಪಾರ ಹಾನಿಗೊಳಗಾಗಿರುವ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ 45 ತಾಲೂಕುಗಳನ್ನು ಸರ್ಕಾರ ಪ್ರವಾಹ ಪೀಡಿತ ಎಂದು ಘೋಷಿಸಿದೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಎಂಟು ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ವಿಪರೀತ ಪ್ರವಾಹ, ಭೂ ಕುಸಿತ, ಬೆಳೆ ಹಾನಿ, ಜನ ಜಾನುವಾರುಗಳ ಜೀವ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎನ್ಡಿ.ಆರ್.ಎಫ್ ಅಡಿಯಲ್ಲಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಮಳೆ ಹಾನಿಯಿಂದಾದ ನಷ್ಟವನ್ನು ಆಧರಿಸಿ ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಭಾಗಗಳ ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ಮಾಡಿರುವ ಸಾಲಗಳ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ಸಿಗಲಿದೆ. ಪ್ರವಾಹ, ಅನಾವೃಷ್ಠಿ, ಅಗ್ನಿ ಅವಘಡ ಸೇರಿದಂತೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಹೆಚ್ಚಿನ ಕಾಲಾವಕಾಶ ನೀಡಲು ಆರ್ಬಿಐ ನಿಯಮಗಳಲ್ಲಿ ಅವಕಾಶವಿದೆ. ಜೊತೆಗೆ ಇಂತಹ ಸಂದರ್ಭದಲ್ಲಿ ಸಂತ್ರಸ್ಥರ ಅಲ್ಪಾವಧಿ ಸಾಲವು ದೀರ್ಘಾವಧಿ ಸಾಲವಾಗಿ ಮಾರ್ಪಡುತ್ತದೆ ಹಾಗೂ ಹೊಸ ಸಾಲ ತೆಗೆದುಕೊಳ್ಳಲೂ ಅವಕಾಶ ದೊರೆಯುತ್ತದೆ .
ಅಲ್ಲದೇ ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಚಟುವಟಿಕೆಗಳು ಎಂದಿನಂತೆ ನಡೆಯಲು ಅಗತ್ಯವಿರುವ ಎಲ್ಲ ಪರಿಹಾರ ಕ್ರಮಗಳನ್ನು ಒದಗಿಸಲು ಆರ್ಬಿಐ ನಿಯಮಗಳಲ್ಲಿ ಅವಕಾಶಿವಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಬ್ಯಾಂಕ್ರ್ಗಳ ಸಭೆ, ಕೊಡಗಿನಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್ಗಳ ಸಭೆ ಕೂಡ ನಡೆದಿದೆ. ನೆರೆ ಪೀಡಿತ ರೈತರಿಗೆ ಹೆಚ್ಚಿನ ನೆರವು ಸಿಗಲಿದೆ. ಉಳಿದಂತೆ ಪ್ರವಾಹ ಪೀಡಿತರಿಗೆ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಅಗತ್ಯ ಪರಿಹಾರಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರವಾಹ ಪೀಡಿತ ತಾಲೂಕುಗಳು
ಕೊಡಗು ಜಿಲ್ಲೆ
ಮಡಿಕೇರಿ
ಸೋಮವಾರ ಪೇಟೆ
ವಿರಾಜಪೇಟೆ
ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು
ಬಂಟ್ವಾಳ
ಪುತ್ತೂರು
ಸುಳ್ಯ
ಬೆಳ್ತಂಗಡಿ
ಉಡುಪಿ ಜಿಲ್ಲೆ
ಕುಂದಾಪುರ
ಉಡುಪಿ
ಕಾರ್ಕಳ
ಶಿವಮೊಗ್ಗ ಜಿಲ್ಲೆ
ಭದ್ರಾವತಿ
ಶಿಕಾರಿಪುರ
ಸಾಗರ
ಸೊರಬ
ತೀರ್ಥಹಳ್ಳಿ
ಹೊಸನಗರ
ಶಿವಮೊಗ್ಗ
ಉತ್ತರ ಕನ್ನಡ ಜಿಲ್ಲೆ
ಕಾರವಾರ
ಅಂಕೋಲಾ
ಕುಮಟಾ
ಹೊನ್ನಾವರ
ಭಟ್ಕಳ
ಸಿದ್ದಾಪುರ
ಶಿರಸಿ
ಮುಂಡಗೋಡ
ಯಲ್ಲಾಪುರ
ಜೋಯಿಡಾ
ಹಳಿಯಾಳ
ಹಾಸನ ಜಿಲ್ಲೆ
ಸಕಲೇಶಪುರ
ಅರಕಲಗೂಡು
ಹೊಳೆ ನರಸಿಪುರ
ಆಲೂರು
ಚಿಕ್ಕಮಗಳೂರು ಜಿಲ್ಲೆ
ಎನ್.ಆರ್.ಪುರ
ಚಿಕ್ಕಮಗಳೂರು
ಮೂಡಿಗೆರೆ
ಶೃಂಗೇರಿ
ಕೊಪ್ಪ
ಮೈಸೂರು ಜಿಲ್ಲೆ
ಎಚ್.ಡಿ.ಕೋಟೆ
ಹುಣಸೂರು
ಕೃಷ್ಣರಾಜನಗರ
ಮೈಸೂರು
ನಂಜನಗೂಡು
ಪಿರಿಯಾಪಟ್ಟಣ
ಟಿ. ನರಸೀಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್