ಕೆಲಸಕ್ಕೆಂದು ಕರೆಸಿಕೊಂಡು ಅತ್ಯಾಚಾರ
Team Udayavani, Dec 20, 2022, 1:22 PM IST
ಬೆಂಗಳೂರು: ಪೋಷಕರು ಮತ್ತು ಸಾಕು ನಾಯಿ ನೋಡಿಕೊಳ್ಳಲು “ಬುಕ್ಮೈಭಾಯಿ. ಕಾಂ’ ಎಂಬ ವೆಬ್ಸೈಟ್ ಮೂಲಕ ಯುವತಿ ಯನ್ನು ಮನೆಗೆ ಕರೆಸಿಕೊಂಡ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ಕೂಡ್ಲು ನಿವಾಸಿ ಪರಶಿವಮೂರ್ತಿ (47) ಬಂಧಿತ. ಆರೋಪಿ. ಈತ ನ.30ರಂದು ಉತ್ತರ ಭಾರತ ಮೂಲದ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಪರಶಿವಮೂರ್ತಿ ತಾಯಿ ಜತೆ ಕೂಡ್ಲುನಲ್ಲಿ ವಾಸವಾಗಿದ್ದಾನೆ. ತಾಯಿಗೆ ವಯಸ್ಸಾಗಿದ್ದರಿಂದ ಅವರನ್ನು ನೋಡಿಕೊಳ್ಳಲು ಮತ್ತು ಅಡುಗೆ ಕೆಲಸ ಹಾಗೂ ಸಾಕು ನಾಯಿ ನೋಡಿಕೊಳ್ಳಲು ಮನೆ ಕೆಲಸದಾಕೆಗಾಗಿ ಶೋಧಿಸುತ್ತಿದ್ದ. ಈ ವೇಳೆ ವಿಲ್ಸನ್ಗಾರ್ಡ್ನಲ್ಲಿರುವ “ಬುಕ್ ಮೈಭಾಯಿ.ಕಾಂ’ ವೆಬ್ಸೈಟ್ ಮೂಲಕ ಕೆಲಸದಾಕೆ ಬೇಕೆಂದು ಸಂಪರ್ಕಿಸಿದ್ದಾನೆ. ಹೀಗಾಗಿ ಕಂಪನಿ ಯ ಸದಸ್ಯರು 21 ವರ್ಷದ ಯುವತಿಯನ್ನು ಕೆಲಸಕ್ಕೆ ಕಳುಹಿಸಿದ್ದರು. ನ. 30ರಂದು ಯುವತಿ ಕೆಲಸಕ್ಕೆ ಹೋಗಿದ್ದರು. ಅದೇ ದಿನ ಆರೋಪಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.
ಪ್ರಾಣ ಬೆದರಿಕೆ: ಕೃತ್ಯ ಎಸಗಿದ ಆರೋಪಿ, ಅತ್ಯಾಚಾರದ ವಿಚಾರವನ್ನು ಹೊರಗಡೆ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದಾನೆ. ಒಂದು ವೇಳೆ ಪೊಲೀಸರು ಹಾಗೂ ತನ್ನ ಕಂಪನಿಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿ ಮೊಬೈಲ್ ಕೊಡದೆ ಹಿಂಸೆ ನೀಡಿದ್ದಾನೆ. ಆದರೆ, ಯುವತಿ ಡಿ. 1ರಂದು ಮೊಬೈಲ್ನಿಂದ ಕಂಪನಿಗೆ ಕರೆ ಮಾಡಿ ದೂರು ನೀಡಿದ್ದರು.
ಬಳಿಕ ಕಂಪನಿಯ ಸದಸ್ಯರು ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡಿ. 2ರಂದು ಸಂತ್ರಸ್ತೆಯಿಂದ ಹೇಳಿಕೆ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…