ಏರ್‌ ಶೋದಲ್ಲಿ ದುರ್ಘ‌ಟನೆ ಈ ಬೇಜವಾಬ್ದಾರಿ ಸಲ್ಲ 


Team Udayavani, Feb 25, 2019, 12:30 AM IST

aero-india-2019fire.jpg

ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಶನಿವಾರ ಸುಮಾರು 300 ಕಾರುಗಳು ಭಸ್ಮವಾಗಿರುವ ಬೆಂಕಿ ಅನಾಹುತ ಭೀಕರ ಘಟನೆಯೇ ಸರಿ. ಈ ಸಲದ ಏರೋ ಇಂಡಿಯಾ ಶೋಕ್ಕೆ ಆರಂಭ ದಿಂದಲೂ ಕಂಟಕಗಳೇ ಎದುರಾಗುತ್ತಿವೆ. ಫೆ.1ರಂದು ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದ ಮಿರಾಜ್‌-2000 ಯುದ್ಧ ವಿಮಾನ ಸ್ಫೋಟಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಅನಂತರ ವೈಮಾನಿಕ ಪ್ರದರ್ಶನ ಶುರುವಾಗುವ ಮುನ್ನಾದಿನ ತಾಲೀಮು ನಡೆಸುತ್ತಿದ್ದ ಸೂರ್ಯಕಿರಣ ವಿಮಾನಗಳೆರಡು ಗಗನದಲ್ಲಿ ಢಿಕ್ಕಿ ಹೊಡೆದು ಓರ್ವ ಪೈಲಟ್‌ ದುರ್ಮರಣಕ್ಕೀಡಾದರು. ಇದೀಗ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ ದುರಂತ ಸಂಭವಿಸಿ ಕಾರುಗಳು ಸುಟ್ಟುಹೋಗಿ ಕೋಟಿಗಟ್ಟಲೆ ನಷ್ಟ ಸಂಭ ವಿಸಿದೆ. ಇಂದು ಕಾರ್ಯಕ್ರಮದ ಅನತಿ ದೂರದಲ್ಲಿ ನೀಲಗಿರಿ ತೋಪು ಬೆಂಕಿ ಹತ್ತಿಕೊಂಡು ಉರಿದು ಹೋಗಿದೆ. ಈ ಘಟನೆಗಳಲ್ಲಿ ಪ್ರಾಣ ಹಾನಿಯಾಗಿಲ್ಲ ಎನ್ನುವುದು ಸಮಾಧಾನ ಕೊಡುವ ಅಂಶವಾಗಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಒಂದು ಕಾರ್ಯಕ್ರಮದಲ್ಲಿ ಬೆನ್ನುಬೆನ್ನಿಗೆ ಅವಘಡ ಸಂಭವಿಸಿರುವುದು ಕಪ್ಪುಚುಕ್ಕೆ. ಇದು ಈ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸುವ ನಮ್ಮ ಸಾಮರ್ಥ್ಯದ ಮೇಲೊಂದು ಪ್ರಶ್ನಾರ್ಥಕ ಚಿಹ್ನೆಯನ್ನಿಡುತ್ತಿದೆ ಎನ್ನುವುದನ್ನು ಆಯೋಜಕರು ನೆನಪಿಟ್ಟುಕೊಳ್ಳಬೇಕು. 

ಬೆಂಗಳೂರು ಮಾತ್ರವಲ್ಲ ದೇಶದ ಹಲವೆಡೆ ಇತ್ತೀಚೆಗಿನ ದಿನಗಳಲ್ಲಿ ಭೀಕರ ಅಗ್ನಿ ದುರಂತಗಳು ಸಂಭವಿಸಿವೆ. ಇತ್ತೀಚೆಗೆ ದಿಲ್ಲಿಯ ಕರೋಲ್‌ಬಾಗ್‌ನ ಹೊಟೇಲೊಂದರಲ್ಲಿ ಸಂಭವಿಸಿದ ಅವಘಡದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2017ರಲ್ಲಿ ಮುಂಬಯಿಯ ಹೊಟೇಲೊಂದರ ರೂಫ್ಟಾಪ್‌ಗೆ ಬೆಂಕಿ ಹತ್ತಿಕೊಂಡು 14 ಮಂದಿ ಬಲಿಯಾಗಿದ್ದರು. ಈ ಮಾದರಿಯ ದುರಂತ ಗಳು ಪ್ರತಿ ವರ್ಷ ದೇಶದ ಎಲ್ಲಾದರೊಂದು ಕಡೆ ನಡೆಯುತ್ತಲೇ ಇರುತ್ತವೆ. ಕೇರಳದ ದೇವಸ್ಥಾನವೊಂದರಲ್ಲಿ ಸುಡುಮದ್ದಿಗೆ ಬೆಂಕಿ ಹತ್ತಿ ಕೊಂಡು ಸಂಭವಿಸಿದ ಭೀಕರ ಅನಾಹುತ ಇನ್ನೂ ಜನಮಾನಸದಿಂದ ಮಾಸಿಲ್ಲ. ಈ ಎಲ್ಲ ಅವಘಡಗಳು ಮಾನವ ನಿರ್ಮಿತ ಎನ್ನುವುದು ಮಾತ್ರ ದುರಂತ. ಬೆಂಕಿ ಶಮನ ಮುನ್ನೆಚ್ಚರಿಕೆಯತ್ತ ನಮಗಿರುವ ದಿವ್ಯ ನಿರ್ಲಕ್ಷ್ಯವೇ ಇಂಥ ಘಟನೆಗಳು ಸಂಭವಿಸಲು ಕಾರಣ. ನಮ್ಮ ವ್ಯವಸ್ಥೆ ದುರಂತ ನಡೆದಾಗಲೊಮ್ಮೆ ಎಚ್ಚೆತ್ತುಕೊಂಡು ಕಾನೂನು, ನಿಯಮ ಎಂದು ಕೂಗಾಡುತ್ತದೆ. ಯಾರೋ ನಾಲ್ಕು ಮಂದಿಯನ್ನು ಹಿಡಿದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಅವರ ವಿಚಾರಣೆ ಮುಗಿದು ಶಿಕ್ಷೆಯಾಗುವುದು ಇನ್ಯಾವುದೋ ಕಾಲದಲ್ಲಿ. ಕ್ರಮೇಣ ಘಟನೆ ಜನರ ನೆನಪಿನಿಂದ ಮರೆಯಾಗುತ್ತದೆ. ಮತ್ತೆ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತದೆ. ಇದನ್ನು ಲಾಗಾ ಯ್ತಿನಿಂದ ನೋಡುತ್ತಾ ಬಂದಿದ್ದರೂ ವ್ಯವಸ್ಥೆಯನ್ನು ಬದಲಾಯಿಸುವ ಗಂಭೀರ ಪ್ರಯತ್ನ ಆಗಿಲ್ಲ. ಪ್ರತಿ ಸಲ ಅಗ್ನಿ ದುರಂತ ಸಂಭವಿಸಿದಾಗ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಚರ್ಚೆಯಾಗುತ್ತದೆ. ಹೊಸದಾಗಿ ಒಂದಷ್ಟು ನಿಯಮಗಳನ್ನು ರಚಿಸಲಾಗುತ್ತದೆ. ಆದರೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಕಲ್ಪ ಮಾತ್ರ ಇರುವುದಿಲ್ಲ. ಬೆಂಗಳೂರು, ದಿಲ್ಲಿ, ಮುಂಬಯಿಯಂಥ ಇಕ್ಕಟ್ಟಾದ ನಗರಗಳಲ್ಲಿ ನಿಯಮಗಳನ್ನು ಸಾರಾಸಗಟು ನಿರ್ಲಕ್ಷಿಸುವುದರಿಂದ ಎಂಥ ಘೋರ ಪರಿಣಾಮವಾಗುತ್ತದೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ.

ಬೀಡಿ, ಸಿಗರೇಟು ಸೇದಿದ ಬಳಿಕ ಉಳಿದ ತುಂಡನ್ನು ನಂದಿಸಿ ಬಿಸಾಕ ಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಹೆಚ್ಚಿನವರಲ್ಲಿ ಇಲ್ಲ. ಬೆಂಗಳೂರಿನಲ್ಲಿ ಸಿಗರೇಟು ತುಂಡಿನಿಂದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ವ್ಯಾಪಿಸಿದೆ ಎನ್ನಲಾಗುತ್ತಿದೆ. ಈಗೀಗ ಬೇಸಿಗೆಯಲ್ಲಿ ಸಾಮಾನ್ಯವಾಗುತ್ತಿರುವ ಕಾಡ್ಗಿಚ್ಚುಗಳಿಗೂ ಈ ಮಾದರಿಯ ಬೇಜವಾಬ್ದಾರಿ ವರ್ತನೆಯೇ ಕಾರಣ ವಾಗುತ್ತಿದೆ. ಬಂಡೀಪುರದಲ್ಲಿ ಇತ್ತೀಚೆಗೆ ಹೆಕ್ಟೇರ್‌ಗಟ್ಟಲೆ ಅರಣ್ಯ ಬೆಂಕಿಗಾಹುತಿಯಾಗಲು ಕೂಡಾ ಸೇದಿ ಎಸೆದ ಸಿಗರೇಟು ತುಂಡು ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈಗ ಬಿರು ಬೇಸಿಗೆ ಕಾಲ. ಬೆಂಕಿ ಹತ್ತಿಕೊಳ್ಳಲು ಚಿಕ್ಕದೊಂದು ಕಿಡಿ ಸಾಕು. ಈ ಮಾದರಿಯ ಕ್ಷುಲ್ಲಕ ಪ್ರಮಾದಗಳನ್ನು ಎಸಗಬಾರದು ಎಂಬ ಪ್ರಜ್ಞೆ ಜನರಲ್ಲಿ ಮೂಡಿಬರಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸಿದ್ದರೆ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆ ವಿಧಿಸಬೇಕು. ಸಾರ್ವ ಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅಗ್ನಿ ಸುರಕ್ಷಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಪರಿಶೀಲನೆಯಾಗಬೇಕು. ಹೊಟೇಲ್‌, ಮಾಲ್‌, ಥಿಯàಟರ್‌ ಹೀಗೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಫ‌ಯರ್‌ ಆಡಿಟ್‌ ನಡೆಸುದನ್ನು ಕಡ್ಡಾಯಗೊಳಿಸಿದರೆ ದುರಂತಗಳು ಸಂಭವಿಸುವುದನ್ನು ಆದಷ್ಟು ಕಡಿಮೆಗೊಳಿಸಬಹುದು.

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.