ಎಐ ಆಧಾರಿತ ಕಸ ಪತ್ತೆ ವ್ಯವಸ್ಥೆ!
Team Udayavani, Feb 13, 2020, 3:06 AM IST
ಬೆಂಗಳೂರು: ಯಾವ ಪ್ರದೇಶದಲ್ಲಿ ಎಷ್ಟು ಕಸ ವಿಲೇವಾರಿಯಾಗಿದೆ? ಇನ್ನೂ ಎಷ್ಟು ವಿಲೇವಾರಿಯಾಗದೆ ಉಳಿದಿದೆ? ಇದರ ಪತ್ತೆಗೆ ಬೆಳಗಾವಿ ಮಹಾನಗರ ಪಾಲಿಕೆಯು ಅಳವಡಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆ ಈಗ ಐಟಿ ರಾಜಧಾನಿಗೇ ಮಾದರಿ ಆಗುವ ಸಾಧ್ಯತೆ ಇದೆ.
ಕೃತಕ ಬುದ್ಧಿಮತ್ತೆ ಮೂಲಕ ಕಸ ಪತ್ತೆಹಚ್ಚುವ ತಂತ್ರಜ್ಞಾನವನ್ನು ಬೆಳಗಾವಿ ಮಹಾನಗರ ಪಾಲಿಕೆ ಕಳೆದ ಮೂರು ತಿಂಗಳಿಂದ ಅಳವಡಿಸಿಕೊಂಡಿದೆ. ನಗರದ ವಾರ್ಡ್ನಲ್ಲಿರುವ ಬ್ಲಾಕ್ ಸ್ಪಾಟ್ಗಳಲ್ಲಿ ಬಿದ್ದಿರುವ ಕಸವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಆ್ಯಪ್ಗೆ ಅಪ್ಲೋಡ್ ಮಾಡಿದರೆ, ಆ ಕಸದ ಮಾದರಿಯನ್ನು ಹೇಳುತ್ತದೆ. ಜತೆಗೆ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ಹೋಗುತ್ತದೆ. ಅದರಿಂದ ತಕ್ಷಣ ತೆರವುಗೊಳಿಸಬಹುದು.
ಅಸಮರ್ಪಕ ಕಸ ವಿಲೇವಾರಿಗೂ ಇದು ಕಡಿವಾಣ ಹಾಕಲಿದೆ. ಎಸ್ಸಿಎನ್ ಇನ್ನೋವೇಷನ್ಸ್ ಎಲ್ಎಲ್ಪಿ ಕಂಪನಿ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್ ಮತ್ತು ಸುಸ್ಥಿರ ನಗರ ಪರಿಹಾರಗಳು ಕುರಿತ 16ನೇ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಬೆಳಗಾವಿ ಪಾಲಿಕೆಗೆ ಸಂಬಂಧಿಸಿದ ಮಳಿಗೆಯಲ್ಲಿ ಇದನ್ನು ಕಾಣಬಹುದು.
ಬೆಳಗಾವಿ ಪಾಲಿಕೆಯೂ ಈಗಷ್ಟೇ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಯಾವ ಪ್ರದೇಶದಲ್ಲಿ ಕಸ ಇದೆ. ಕಸ ಬಿದ್ದಿರುವುದನ್ನು ಮೊಬೈಲ್ನಲ್ಲಿ ಚಿತ್ರ ತೆಗೆದು ಆ್ಯಪ್ಗೆ ಅಪ್ಲೋಡ್ ಮಾಡಿದರೆ ಒಣ, ಹಸಿ, ಪ್ಲಾಸ್ಟಿಕ್, ಮೆಟಲ್ ಸೇರಿದಂತೆ ವಿವಿಧ ಪ್ರಕಾರಗಳನ್ನಾಗಿ ವಿಂಗಡಿಸಿ ಕಸದ ವಿವರಣೆ ನೀಡುತ್ತದೆ. ಪೋಟೋ ತೆಗೆದ ಜಾಗ ಕೂಡ ಜಿಪಿಎಸ್ನಿಂದ ಪತ್ತೆಯಾಗಲಿದೆ. ಆಗ, ಆ ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ, ಪೌರ ಕಾರ್ಮಿಕರ ಮೂಲಕ ಕೂಡಲೇ ಹೋಗಿ ಕಸ ಸ್ವಚ್ಛಗೊಳಿಸಬಹುದು ಎಂದು ಕಂಪೆನಿ ನಿರ್ದೇಶಕ ಸುಮಿತ್ ಆನ್ವೇಕರ್ ತಿಳಿಸಿದರು.
ಈ ವ್ಯವಸ್ಥೆಯಿಂದ ಸಮರ್ಪಕ ಕಸ ವಿಲೇವಾರಿ ಸಾಧ್ಯವಾಗುವುದರಿಂದ ಪರೋಕ್ಷವಾಗಿ ಆದಾಯ ವೃದ್ಧಿಗೂ ಪೂರಕವಾಗಲಿದೆ. ಬೆಂಗಳೂರಿನಲ್ಲಿ ಇದರ ಅಳವಡಿಕೆಗೆ ಸಂಬಂಧಿಸಿದಂತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಪೂರಕ ಸ್ಪಂದನೆ ದೊರೆಯುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ