ಶ್ರೀ ಸಾಮಾನ್ಯರ ಕೈಗೆಟಕುವ ವಿಮಾನಯಾನ: ಮಧ್ಯಮ, ಮೇಲ್ಮಧ್ಯಮ ವರ್ಗಗಳ ವೈಮಾನಿಕಯಾನದ ಕನಸು- ನನಸು

ಕೇಂದ್ರ ಸರ್ಕಾರದ ಸೂಚನೆಯಂತೆ ದರ ನಿಗದಿ

Team Udayavani, Oct 25, 2020, 12:20 PM IST

bng-tdy-1

ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಮಾನ್ಯವಾಗಿ ಹಬ್ಬದ ಸೀಜನ್‌ಗಳಲ್ಲಿ ರೈಲು ಮತ್ತು ಬಸ್‌ಗಳು ಭರ್ತಿ ಆಗುತ್ತಿದ್ದವು. ಆದರೆ, ಈ ಬಾರಿ ವಿಮಾನಗಳು ಭರ್ತಿ ಆಗುತ್ತಿವೆ. ಇದು “ಕೋವಿಡ್‌-19’ರ ಎಫೆಕ್ಟ್! ಕೋವಿಡ್‌-19 ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಬಹು ತೇಕ ವೈಮಾನಿಕ ಸೇವೆ ಕಂಪನಿಗಳು ಕೇಂದ್ರ ಸರ್ಕಾರದ ಸೂಚನೆಯಂತೆ ಕೈಗೆಟಕುವ ದರ ನಿಗದಿ  ಪಡಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿ ರುವುದು ಕಂಡುಬರುತ್ತಿದೆ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ನಡುವಿನ ಅಂತರ ತಗ್ಗಲು ಪರೋಕ್ಷವಾಗಿ ಇದು ಕಾರಣವಾಗುತ್ತಿದೆ.

ಈ ಮೊದಲು 1 ಮತ್ತು 2ನೇ ಹಂತದ ನಗರಗಳಿಗೆ ತೆರಳುವ ಮಧ್ಯಮ ವರ್ಗದ ಜನ ಹೆಚ್ಚಾಗಿ ರೈಲು ಮತ್ತು ಬಸ್‌ಗಳಲ್ಲಿ ಊರುಗಳಿಗೆ ತೆರಳುತ್ತಿದ್ದರು. ಇದರಿಂದ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರ ಹಲವು ಮಾರ್ಗಗಳಲ್ಲಿ 2,000ರಿಂದ 2,500 ರೂ.ವರೆಗೂ ಇರುತ್ತಿತ್ತು. ಆದರೆ, ಈಗ ಅದೇ ಮೊತ್ತದಲ್ಲಿ ಬೆಂಗಳೂರಿ  ನಿಂದ ಮಂಗಳೂರು, ಬೆಳಗಾವಿ, ಹುಬ್ಬಳ್ಳಿಗೆ ತೆರಳಬಹುದಾಗಿದೆ.

ಸುರಕ್ಷತೆ, ಸಮಯ ಉಳಿತಾಯ: “ಬೆಂಗಳೂರಿನಿಂದ ಬೆಳಗಾವಿಗೆ ನಾನು ಹಬ್ಬಕ್ಕೆ ಕೊರೊನಾ ಪೂರ್ವದಲ್ಲಿ ರೈಲು ಅಥವಾ ಹವಾನಿಯಂತ್ರಿತ ಬಸ್‌ನಲ್ಲಿ ತೆರಳುತ್ತಿದ್ದೆ. ತಿಂಗಳು ಮೊದಲೇ ಬುಕಿಂಗ್‌ ಮಾಡಿದರೆ, ಸಾಮಾನ್ಯ ದರದಲ್ಲಿ ಸೀಟು ಸಿಗುತ್ತಿತ್ತು. ಕೊನೆ ಕ್ಷಣ  ದಲ್ಲಾದರೆ ಎರಡರಿಂದ ಎರಡೂವರೆ ಸಾವಿರ ಪಾವತಿಸಿ ಪ್ರಯಾಣಿಸಿದ ಉದಾಹರಣೆಗಳೂ ಇವೆ. ಈ ಬಾರಿ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಹೋಗುತ್ತಿದ್ದೇನೆ. ಹೋಗಿ-  ಬರುವುದು ಸೇರಿ ಪ್ರಯಾಣ ದರ 5,300 ರೂ. ಆಗಿದೆ. ಗಣೇಶ ಚತುರ್ಥಿಗೂ ವಿಮಾನದಲ್ಲೇ ತೆರಳಿದ್ದೆ. ಕಾರಿನಲ್ಲಿ ಸ್ನೇಹಿತರೊಂದಿಗೆ ತೆರಳಿದರೂ ಮೂರು ಜನರ ನಡುವೆ ಒಂದು ಮಾರ್ಗಕ್ಕೆ ಹತ್ತು ಸಾವಿರ ರೂ. ಆಗುತ್ತದೆ. ಪ್ರಯಾಣ ಅವಧಿ 10 ತಾಸುಗಳು. ವಿಮಾನದಲ್ಲಿ ಕೇವಲ 2 ತಾಸುಗಳಲ್ಲಿ ಹೋಗುತ್ತೇನೆ. ಫೇಸ್‌ ಶೀಲ್ಡ್‌ನಿಂದ ಹಿಡಿದು ಸುರಕ್ಷಿತ ಕಿಟ್‌ ಇರುತ್ತದೆ’ ಎಂದು ರಾಜಾಜಿನಗರ ನಿವಾಸಿ ರವಿ ಜಾಧವ್‌ ಹೇಳುತ್ತಾರೆ.

ಸದ್ಯ ವಿಮಾನಗಳ ಒಟ್ಟಾರೆ ಸಾಮರ್ಥ್ಯದ ಪೈಕಿ ಶೇ. 60ರಷ್ಟು ಪ್ರಯಾಣಕರನ್ನು ಕೊಂಡೊಯ್ಯಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಪ್ರಯಾಣ ದರ ಕೂಡ 2ರಿಂದ 3 ಸಾವಿರ ರೂ.ಗಳ ಆಸು ಪಾಸು ಇದೆ. ಹೋಗಿ-ಬರುವ ಟಿಕೆಟ್‌ ಬುಕಿಂಗ್‌ ಒಮ್ಮೆಲೆ ಮಾಡಿದರೆ, ಮತ್ತಷ್ಟು ಕಡಿಮೆ ಆಗುತ್ತದೆ. ಆದರೆ, ಸ್ಪರ್ಧಾತ್ಮಕ ದರ ಇರುವುದರಿಂದ ಸೀಟುಗಳ ಬುಕಿಂಗ್‌ನ ನಿಖರ ಮಾಹಿತಿ ಬಗ್ಗೆ ಎಲ್ಲ ಕಂಪನಿಗಳು ಗೌಪ್ಯತೆ ಕಾಪಾಡಿಕೊಂಡಿವೆ. “ಬುಕಿಂಗ್‌ ಟ್ರೆಂಡ್‌ ಬಗ್ಗೆ ಈಗಲೇ ಹೇಳುವುದು ತುಂಬಾ ಕಷ್ಟ. ಹಿಂದಿನ ಹಬ್ಬದ ಸೀಜನ್‌ಗಳಿಗೆ ಹೋಲಿಸಿದರೆ, ಕೊರೊನಾ ನಡುವೆಯೂ ಉತ್ತಮ ಸ್ಪಂದನೆಯಂತೂ ಇದೆ’ ಎಂದು ಇಂಡಿಗೊ ಕಂಪೆನಿಯ ವಕ್ತಾರರು “ಉದಯವಾಣಿ’ಗೆ ತಿಳಿಸುತ್ತಾರೆ.

ನಿತ್ಯ 385 ವಿಮಾನಗಳ ಹಾರಾಟ: ಕೋವಿಡ್‌-19 ಪೂರ್ವದಲ್ಲಿ ನಿತ್ಯ ಆಗಮನ ಮತ್ತು ನಿರ್ಗಮನ ಸೇರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ದಿಂದ ಸರಾಸರಿ 700 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಕೋವಿಡ್ ನಂತರ ಅಂದರೆ ಮೇ-  ಜುಲೈ ಅವಧಿಯಲ್ಲಿ ಅಂದಾಜು 200-215 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಈಗ ಹಬ್ಬದ ಸೀಜನ್‌ ಶುರುವಾದಾಗಿನಿಂದ ಪ್ರತಿದಿನ ಆಗಮನ-ನಿರ್ಗಮನ ಸೇರಿ 385 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ ಹೆಚ್ಚು ಇಂಡಿಗೊ ಇದ್ದು, ಪುಣೆ, ಮುಂಬೈ, ಕೊಲ್ಕತ್ತ ಸೇರಿದಂತೆ ಉತ್ತರ ಭಾರತದ ಪ್ರಮುಖ ನಗರಗಳ ಕಡೆಗೆ ಹಾರುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. “ಹಬ್ಬದ ಸೀಜನ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ನಿಜ. ಯಾವ ಮಾರ್ಗದಲ್ಲಿ ಹಾಗೂ ಎಷ್ಟು ಏರಿಕೆ ಆಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ. ಮುಂದಿನ ವಾರದಲ್ಲಿ ವರದಿ ಬಿಡುಗಡೆ ಆಗಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಲು ಮುಖ್ಯವಾಗಿ ನಿಲ್ದಾಣದಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು, ಪ್ರಯಾಣದ ಅವಧಿ ತುಂಬಾ ಕಡಿಮೆ ಇರುವುದು ಮತ್ತಿತರ ಅಂಶಗಳು ಕಾರಣವಾಗಿರಬಹುದು’ ಎಂದು ಬಿಐಎಎಲ್‌ ವಕ್ತಾರರು ಸ್ಪಷ್ಟಪಡಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳ ಬುಕಿಂಗ್‌ನಲ್ಲಿ ಇಳಿಕೆ :  ಕೋವಿಡ್‌ ಪೂರ್ವದಲ್ಲಿ ದಸರಾ ಸಮಯದಲ್ಲಿ 50-55 ಸಾವಿರ ಟಿಕೆಟ್‌ ಬುಕಿಂಗ್‌ ಆಗುತ್ತಿತ್ತು. ಈ ಬಾರಿ ಕೇವಲ 8,000-8,500 ಸೀಟುಗಳು ಬುಕಿಂಗ್‌ ಆಗಿವೆ. ಅಂದರೆ, ಹಿಂದಿನ ಸ್ಥಿತಿಗೆ ಹೋಲಿಸಿದರೆ ಶೇ. 10 ಕೂಡ ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ತಿಳಿಸುತ್ತಾರೆ. ಒಟ್ಟಾರೆ 8,250 ಬಸ್‌ಗಳ ಪೈಕಿ 5,300 ಶೆಡ್ನೂಲ್‌ಗ‌ಳು ಕಾರ್ಯಾಚರಣೆ ಮಾಡುತ್ತಿವೆ. ಹಬ್ಬದ ಹಿನ್ನೆಲೆಯಲ್ಲಿ 50 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದ್ದು, 200 ಬಸ್‌ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇವು ಕಾರ್ಯಾಚರಣೆ ಮಾಡಲಿವೆ.

ವಿಮಾನ ನಿಲ್ದಾಣ ತಲುಪುವುದೇ ತ್ರಾಸದಾಯಕ :  ವಿಮಾನ ನಿಲ್ದಾಣ ತಲುಪುವುದೇ ತ್ರಾಸದಾಯಕ ಎಂದು ಕೆಲ ಪ್ರಯಾಣಿಕರು ತಿಳಿಸುತ್ತಾರೆ. ನಿಲ್ದಾಣವು ನಗರದಿಂದ ಹೊರ ವಲಯದಲ್ಲಿದ್ದು, ಹೆಚ್ಚು ಪ್ರಯಾಣಿಕರ ದಟ್ಟಣೆ ಉಂಟಾದರೆ, ನಿಗದಿತ ಅವಧಿಯಲ್ಲಿ ತಲುಪುವುದು ಕಿರಿಕಿರಿ ಆಗುತ್ತದೆ. ಆ್ಯಪ್‌ ಆಧಾರಿತ ಕ್ಯಾಬ್‌ಗಳನ್ನು ಬುಕಿಂಗ್‌ ಮಾಡಿಕೊಂಡು ಹೋಗಬೇಕು. ಆದರೆ ಬೇಡಿಕೆ ಹೆಚ್ಚಿದರೆ, ಅದು ಕೂಡ ದುಬಾರಿ ಆಗಬಹುದು ಎಂದು ಪ್ರಯಾಣಿಕ ಮಹೇಶ್‌ ತಿಳಿಸುತ್ತಾರೆ.

 

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.