ಮದ್ಯ ಸೇವಿಸಿದರೆ ವಾಹನ ಸ್ಟಾರ್ಟೇ ಆಗಲ್ಲ!


Team Udayavani, Nov 12, 2019, 3:07 AM IST

madya-sevisi

ಬೆಂಗಳೂರು: ನೀವು ಮದ್ಯ ಸೇವಿಸಿ ವಾಹನ ಚಾಲನೆ ಮಾಡಲು ಮುಂದಾದರೆ ಈ ಸಾಧನ ಅವಕಾಶ ನೀಡುವುದಿಲ್ಲ! ಅಷ್ಟೇ ಅಲ್ಲ, ಈ ಸಾಧನದ ಕಣ್ತಪ್ಪಿಸಿ ವಾಹನ ಚಾಲನೆ ಮಾಡುವುದು ಅಸಾಧ್ಯ. ಇಂಥದ್ದೊಂದು ಸಾಧನವನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ ಖಾಸಗಿ ಸಂಸ್ಥೆಯ ಸಿಇಒ ರಾಮನಾಥ್‌ ಮಂದಲಿ ಎಂಬವರು ಆವಿಷ್ಕಾರ ಮಾಡಿದ್ದಾರೆ ಇದರ ಹೆಸರು “ಆಲ್ಕೋಲಾಕ್‌’.

ರಾಮನಾಥ ಮಂದಲಿ ಎಂಬ ಸಂಶೋಧಕರು ಹದಿನೈದು ವರ್ಷಗಳ ನಿರಂತರ ಪ್ರಯತ್ನದಿಂದ ಈ ಸಾಧನ ಅಭಿವೃದ್ಧಿ ಪಡಿಸಿದ್ದಾರೆ. ಚಾಲಕರು ವಾಹನ ಚಾಲು ಮಾಡುವ ಮುನ್ನ ಆಲ್ಕೊಲಾಕ್‌ ಸಾಧನಕ್ಕೆ ಒಮ್ಮೆ ಊದಬೇಕು. ಒಂದು ವೇಳೆ ಚಾಲಕ ಮದ್ಯ ಸೇವನೆ ಮಾಡಿದ್ದರೆ, ಕೂಡಲೇ ಆ್ಯಪ್‌ ಮುಖಾಂತರ ಮಾಲೀಕ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದು. ಒಂದು ವೇಳೆ ಚಾಲನೆ ವೇಳೆ ಚಾಲಕ ಮದ್ಯ ಸೇವಿಸಿದರೂ, ಅದು ಮಾಲೀಕನಿಗೆ ತಿಳಿಯುತ್ತದೆ.

ತಮ್ಮ ವಾಹನದ ಭದ್ರತಾ ದೃಷ್ಟಿಯಿಂದ ಈ ಸಾಧನ ಮಾಲೀಕರಿಗೆ ನೆರವಾಗಲಿದೆ. ಚಾಲಕನ ಸ್ಥಿತಿಗತಿಗಳ ಇಂಚಿಂಚೂ ಮಾಹಿತಿ ಮಾಲೀಕನ ಮೊಬೈಲ್‌ಗೆ ರವಾನೆಯಾಗುತ್ತದೆ. ಈ ಸಂಬಂಧ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮನಾಥ್‌, ಇದು ವಾಹನಕ್ಕೆ ಭದ್ರತೆ ನೀಡುವ ಜತೆಗೆ ಚಾಲಕನ ಪ್ರಾಣವನ್ನೂ ರಕ್ಷಿಸುತ್ತದೆ. ಈ ಸಾಧನದಲ್ಲಿ ಸ್ಪೈ ಕ್ಯಾಮೆರಾ ಇದ್ದು, ಅದು ಚಾಲಕನ ಗಮನಕ್ಕೆ ಬರುವುದಿಲ್ಲ. ಚಾಲಕನ ಚಲನವಲನಗಳ ಮೇಲೂ ಇದು ನಿಗಾ ಇಡುವುದರ ಜತೆಗೆ ಮದ್ಯ ಸೇವನೆಯಿಂದ ಚಾಲಕರನ್ನು ಅಪಘಾತದಿಂದ ತಡೆಯಲಿದೆ ಎಂದರು.

ಮಾಲೀಕರು ಪಾನಮತ್ತ ಚಾಲಕರಿಂದ ತಮ್ಮ ವಾಹನವನ್ನು ರಕ್ಷಿಸಿಕೊಳ್ಳಬಹುದು. ಮೊಬೈಲ್‌ ಮೂಲಕವೇ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದಾಗಿದೆ. ಈ ಸಾಧನದ ಬೆಲೆ 9 ಸಾವಿರ ರೂ. ನಿಗದಿ ಮಾಡಲಾಗಿದ್ದು, ಇದನ್ನು ಕಾರು, ಟ್ರಕ್‌, ಲಾರಿಗಳಲ್ಲಿ ಬಳಸಬಹುದು. ಆಂಧ್ರಪ್ರದೇಶ ಸಾರ್ವಜನಿಕ ಬಸ್‌ಗಳಲ್ಲಿ ಈಗಾಗಲೇ ಈ ಸಾಧನ ಅಳವಡಿಸಲಾಗಿದೆ. ಸರಕು ಸಾಗಣೆ ವಾಹನಗಳಿಗೂ ಈ ಸಾಧನ ಹೆಚ್ಚು ಉಪಯುಕ್ತ ಎಂದರು.

ರಾಜ್ಯದ ಖಾಸಗಿ ಬಸ್‌ಗಳಲ್ಲೂ ಆಲ್ಕೋಲಾಕ್‌ ಬಳಕೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲೂ ಈ ಸಾಧನ ಅಳವಡಿಸಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಾಹಿತಿಗೆ 9916686615 ಸಂಪರ್ಕಿಸಬಹುದು.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.