ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ
Team Udayavani, Jan 21, 2018, 6:30 AM IST
ಪಣಜಿ: ಮಹದಾಯಿ ನದಿ ನೀರಿನ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕರ್ನಾಟಕವು
ಕಳಸಾ - ಬಂಡೂರಿ ನಾಲೆ ನಿರ್ಮಾಣ ನಡೆಸಿದೆ ಎಂದು ನ್ಯಾಯಾಧಿಕರಣದಲ್ಲಿ ಗೋವಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.6ರಿಂದ ನ್ಯಾಯಾಧಿಕರಣದಲ್ಲಿ ವಿಚಾರಣೆ ಆರಂಭಗೊಳ್ಳಲಿದೆ. ಆದರೆ ಗೋವಾಕ್ಕೆ ಹರಿದುಬರುವ ಮಹದಾಯಿ ನದಿ ನೀರಿನ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಗೋವಾ ಸರ್ಕಾರವು ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ದಾಖಲಿಸಿದೆ.
ಮಾಂಡವಿ ನದಿಯ ಉಪನದಿಯಲ್ಲಿ ಖಾಂಡೆಪಾರ್ದಲ್ಲಿ ಒಪ್ ಜಲಶುದಿಟಛೀಕರಣ ಘಟಕವಿದೆ. ಈ ಘಟಕಕ್ಕೆ ವರ್ಷವಿಡೀ ನೀರು ಲಭಿಸಬೇಕೆಂಬ ಉದ್ದೇಶದಿಂದ ಗಾಂಜೆ ಎಂಬ ಊರಿನಿಂದ ನದಿಯ ನೀರನ್ನು ಪಂಪ್ ಮೂಲಕವಾಗಿ ಖಾಂಡೆಪಾರ್ ಜಲಶುದಿಟಛೀಕರಣ ಘಟಕಕ್ಕೆ ತರಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಈ ಘಟಕಕ್ಕೆ ನೀರಿನ ಕೊರತೆಯಾಗಿದೆ.
ಕರ್ನಾಟಕವು ಕಳಸಾ- ಬಂಡೂರಿ ನಾಲೆಯಲ್ಲಿ ಮಹದಾಯಿ ನದಿ ನೀರನ್ನು ಕೆಲ ಪ್ರಮಾಣದಲ್ಲಿ ತಿರುಗಿಸಿಕೊಳ್ಳಲಾಗಿದೆ ಎಂಬ ಪರೋಕ್ಷ ಆರೋಪದೊಂದಿಗೆ ನ್ಯಾಯಾಲಯವು ಕೂಡಲೇ ಈ ಮಧ್ಯಂತರ ಅರ್ಜಿ ವಿಚಾರಣೆ ನಡೆಸಬೇಕೆಂದು ಗೋವಾ ಸರ್ಕಾರ ಮನವಿ ಮಾಡಿದೆ.
ಮಹದಾಯಿ ಪ್ರಕರಣವು ಇತ್ಯರ್ಥಗೊಳ್ಳುವವರೆಗೂ ಕಳಸಾ- ಬಂಡೂರಿ ನಾಲೆ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಸವೊìಚ್ಚ ನ್ಯಾಯಾಲಯ ಆದೇಶ ನೀಡಿದ್ದರೂ ಕರ್ನಾಟಕವು ಈ ಆದೇಶ ಉಲ್ಲಂಘಿಸಿದೆ ಎಂದು ಗೋವಾ ನಿಂದನೆ ಅರ್ಜಿಯಲ್ಲಿ ಉಲ್ಲೇಖೀಸಿದೆ. ಕಳೆದ ವಾರವಷ್ಟೇ ಗೋವಾದಿಂದ ಬಂದ ತಂಡ ನಾಲೆಯ ಪರಿಶೀಲನೆ ನಡೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ