ಸುಲಿಗೆಗೆ ಸಿದ್ದರಾಗಿದ್ದ 7 ದರೋಡೆಕೋರರ ಸೆರೆ
Team Udayavani, May 13, 2022, 2:31 PM IST
ಬೆಂಗಳೂರು: ಕುರುಬರಹಳ್ಳಿ ಸೇತುವೆ ಬಳಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರ ಸುಲಿಗೆಗೆ ಸಿದ್ಧತೆ ನಡೆಸಿದ್ದ ಏಳು ಮಂದಿ ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಒಕ್ಕಲಿಗ ಮಾರಮ್ಮ ಟೆಂಪಲ್ ಸಮೀಪದ ನಿವಾಸಿ ಚೇತನ್ ಅಲಿಯಾಸ್ ಹಂದಿ ಚೇತು (28), ಬಸವೇಶ್ವರ ನಗರದ ಕಿರ್ಲೋಸ್ಕರ್ ಕಾಲೋನಿಯ ನಿರಂಜನ (23), ಕಮಲನಗರದ ರಾಜು (34), ಉಮೇಶ್ (32), ಸಿ. ಜಗದೀಶ್ (28), ಚೇತನ್ (29), ಹೆಸರಘಟ್ಟದ ವೆಂಕಟೇಶ್ (28) ಬಂಧಿತರು. ಆರೋಪಿಗಳಿಂದ ಕಬ್ಬಿಣದ ರಾಡ್ಗಳು, ಹಾಕಿ ಸ್ಟಿಕ್ಗಳು, ಕಬ್ಬಿಣದ ಪೈಪ್ಗ್ಳು, ಕಾರದಪುಡಿ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಒಂಟಿಯಾಗಿ ಓಡಾಡುವವರು ಹಾಗೂ ಮಹಿಳೆ ಯರ ಜತೆ ಬರುವವರನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಿದ್ಧತೆ ನಡೆಸಿದ್ದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು, ಮೊಬೈಲ್ ದರೋಡೆ ಮಾಡುವುದು ಉದ್ದೇಶವಾಗಿತ್ತು. ಈ ಮಾಹಿತಿ ಆಧರಿಸಿ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ