ಅರಸಯ್ಯ ಕೊಲೆ ಆರೋಪಿಗಳ ಬಂಧನ


Team Udayavani, Aug 16, 2018, 12:58 PM IST

arasayya.jpg

ಬೆಂಗಳೂರು: ಇತ್ತೀಚೆಗಷ್ಟೇ ಮಂಡ್ಯದ ಶ್ರೀರಂಗಪಟ್ಟಣದ ಬಳಿ ರೌಡಿಶೀಟರ್‌ ಅರಸಯ್ಯನನ್ನು ಹತ್ಯೆಗೈದ ಮತ್ತೂಬ್ಬ ರೌಡಿಶೀಟರ್‌ ಪಳನಿಯ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ.ಅಗ್ರಹಾರದ ಸತೀಶ್‌ ಅಲಿಯಾಸ್‌ ಮಚ್ಚಿ (33), ಶೇಖರ್‌ ಅಲಿಯಾಸ್‌ ಕುಳ್ಳ (27) ಮತ್ತು ಉದಯ್‌ಕುಮಾರ್‌ ಅಲಿಯಾಸ್‌ ಉದಿ(34) ಬಂಧಿತರು.

ಆರೋಪಿಗಳ ವಿರುದ್ಧ ನಾಗಮಂಗಲ ಠಾಣೆ, ಕೆ.ಪಿ.ಅಗ್ರಹಾರ, ವೈಯಾಲಿಕಾವಲ್‌ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್‌ ಪಳನಿ ತನ್ನ ಸಹಚರಾರದ ಮೋನಿ, ಚಂದ್ರು ಸೇರಿ 8 ಮಂದಿ ಜತೆ ಶ್ರೀರಂಗಪಟ್ಟಣದ ಸಾತನೂರು ಪೊಲೀಸರಿಗೆ ಶರಣಾಗಿದ್ದಾನೆ.

2013ರಲ್ಲಿ ರೌಡಿಶೀಟರ್‌ ಪಳನಿ ಸಹೋದರ ರಂಗನಾಥ್‌ನನ್ನು ಅರಸಯ್ಯ ಮತ್ತು ಸಹಚರರು ಹತ್ಯೆಗೈದಿದ್ದರು. ಬಳಿಕ 2016ರಲ್ಲಿ ಪಳನಿಯ ಸಹಚರ ಜಲ್ಲಿ ವೆಂಕಟೇಶ್‌ನನ್ನು ಬನಶಂಕರಿ ವೃತ್ತದಲ್ಲಿ ಸೈಕಲ್‌ ರವಿ ಜತೆ ಸೇರಿಕೊಂಡು ಅರಸಯ್ಯ ಹತ್ಯೆಗೈದಿದ್ದ.

ಈ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅರಸಯ್ಯನ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ.11ರಂದು ಶ್ರೀರಂಗಪಟ್ಟಣ ಸಾತನೂರಿನ ಮಾರಿಯಮ್ಮ ದೇವಾಲಯದಿಂದ ವಾಪಸ್‌ ಬರುವಾಗ ನಡುರಸ್ತೆಯಲ್ಲೇ ದಾರುಣವಾಗಿ ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದಿಂದ ಸಂಚು: ಪ್ರಭಾವಿ ರಾಜಕಾರಣಿಗಳ ಜತೆ ಗುರುತಿಸಿಕೊಂಡಿದ್ದ ರೌಡಿ ಅರಸಯ್ಯ ಪ್ರಾಣ ಭಯದಿಂದ ಐದಾರು ಮಂದಿ ಅಂಗರಕ್ಷಕರ  ಜತೆ ಓಡಾಡುತ್ತಿದ್ದ. ಆದರೆ, ಪ್ರತಿ ಅಮವಾಸ್ಯೆಯಂದು ಶ್ರೀರಂಗಪಟ್ಟಣದ ಸಾತನೂರಿನ ಮಹಾಕಾಳಿ ದೇವಾಲಯಕ್ಕೆ ಹೋಗುವಾಗ ಒಬ್ಬನೇ ಹೋಗುತ್ತಿದ್ದ. ಜತೆಗೆ ಇದೇ ದೇವಾಲಯದ ಟ್ರಸ್ಟ್‌ನ ಅಧ್ಯಕ್ಷನಾಗಿದ್ದರಿಂದ ತನ್ನ ಬೆಂಬಲಿಗರನ್ನು ಕರೆದೊಯ್ಯುತ್ತಿರಲಿಲ್ಲ.  ಈ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು ಕಳೆದೊಂದು ವರ್ಷದಿಂದ ಸಂಚು ರೂಪಿಸಿದ್ದು, ನಾಲ್ಕೈದು ಬಾರಿ ವಿಫ‌ಲ ಯತ್ನ ನಡೆಸಿದ್ದರು.

ಭೀಮಾನ ಅಮವಾಸ್ಯೆಯಂದು ಕೊಲೆ: ಪ್ರತಿ ಅಮವಾಸ್ಯೆಗೆ ಯಾವುದೇ ಭದ್ರತೆ ಇಲ್ಲದೆ ಒಬ್ಬನೇ ಹೋಗುವ ಅರಸಯ್ಯ ಈ ಬಾರಿಯ ಭೀಮನ ಅಮವಾಸ್ಯೆಯ ವಿಶೇಷ ಪೂಜೆಗೂ ಏಕಾಂಗಿಯಾಗಿ ಹೋಗುತ್ತಿದ್ದ. ಈ ಮಾಹಿತಿ ತಿಳಿದ ಪಳನಿ ಮತ್ತು ತಂಡ ಬೆಂಗಳೂರಿನಿಂದಲೇ ಹಿಂಬಾಲಿಸಿದೆ.

ಬಳಿಕ ಅರಸಯ್ಯ ಪೂಜೆ ಮುಗಿಸುವವರೆಗೂ ಕಾದು ಒಬ್ಬನೇ ಕಾರಿನಲ್ಲಿ ಹಿಂದಿರುಗುವಾಗ ಶ್ರೀರಂಗಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್‌ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ಪಳನಿ ಸೇರಿ ಸುಮಾರು 15 ಮಂದಿ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ತಮ್ಮ ವಿರುದ್ಧ ಬೆಂಗಳೂರಿನ ಸಿಸಿಬಿ ಹಾಗೂ ಮಂಡ್ಯ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಬುಧವಾರ ಬೆಳಗ್ಗೆಯೇ ಪಳನಿ ತನ್ನ 8 ಮಂದಿ ಸಹಚರರ ಜತೆ ಸೇರಿ ಸಾತನೂರು ಠಾಣೆಯಲ್ಲಿ ಶರಣಾಗಿದ್ದು, ಸತೀಶ್‌, ಶೇಖರ್‌ ಮತ್ತು ಉದಯ್‌ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಬಿನ್ನಿಸ್ಟೋನ್‌ ಗಾರ್ಡ್‌ನ್‌ ಬಳಿ ತಲೆಮರೆಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.