ಸಹಾಯ ಪಡೆದವನಿಂದಲೇ ಭೈರತಿ ಸುರೇಶ್‌ ಕೊಲೆ ಯತ್ನ


Team Udayavani, Oct 19, 2019, 9:51 AM IST

huballi-tdy-1

ಬೆಂಗಳೂರು: ಶಾಸಕ ಸುರೇಶ್‌ ಕೊಲೆಯತ್ನ ನಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಬೈರತಿ ಗ್ರಾಮದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು.

ಅದರಲ್ಲೂ ಸಹಾಯ ಪಡೆದ ಸ್ಥಳೀಯ ಯುವಕನೇ ಇಂತಹ ಕೃತ್ಯಕ್ಕೆ ಮುಂದಾದ ಬಗ್ಗೆ ಗ್ರಾಮಸ್ಥರಲ್ಲಿ ನಾನಾ ಪ್ರಶ್ನೆಗಳು ಮೂಡಿದವು. ವಿಷಯ ತಿಳಿಯುತ್ತಿದ್ದಂತೆ ಬೈರತಿಯಲ್ಲಿರುವ ಸುರೇಶ್‌ ನಿವಾಸಕ್ಕೆ ಸ್ಥಳೀಯರು, ಹೆಬ್ಟಾಳ, ಹೊಸಕೋಟೆಯ ಕಾಂಗ್ರೆಸ್‌ ಕಾರ್ಯಕರ್ತರು ದೌಡಾಯಿಸಿದರು. ಯಾವುದೇ ಅಪಾಯ ಆಗದ ಕಾರಣ ಸಮಾಧಾನಪಟ್ಟುಕೊಂಡರು. ತಮ್ಮ ನಿವಾಸಕ್ಕೆ ಆಗಮಿಸಿದವರನ್ನು ಸಮಾಧಾನ ಹೇಳಿದ ಶಾಸಕ ಬೈರತಿ ಸುರೇಶ್‌, ಆವೇಶಕ್ಕೆ ಒಳಗಾಗುವುದು ಬೇಡ. ಪೊಲೀಸರ ತನಿಖೆ ನಿಸ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.

ಶಾಸಕರ ರಾಜಕೀಯ ಏಳಿಗೆ ಸಹಿಸರ ಕೆಲವು ಈ ಕೃತ್ಯ ನಡೆಸಲು ಕುಮ್ಮಕ್ಕು, ಷಡ್ಯಂತ್ರ ನಡೆಸಿದ್ದಾರೆ ಎಂದು ನೆರೆದಿದ್ದ ಬೆಂಬಲಿಗರು ಆರೋಪಿಸಿದರು. ಮನೆ ಕಟ್ಟಿಕೊಟ್ಟ ಶಾಸಕರಿಗೆ ಆರೋಪಿ ಇಂತಹ ಕೆಲಸ ಮಾಡಿಬಿಟ್ಟನಲ್ಲ ಇದರ ಹಿಂದೆ ಬೇರೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

ಶಿವು ತಾಯಿ ಕಣ್ಣೀರು: ಮತ್ತೂಂದೆಡೆ ಆರೋಪಿ ಶಿವು ತಾಯಿ, ಮಗ ಎಂತಹ ಕೆಲಸ ಮಾಡಿಬಿಟ್ಟ’ ಎಂದು ದಿಗ್ಭ್ರಾಂತ ರಾಗಿದ್ದರು. ಅಪ್ಪನನ್ನು ಪೊಲೀಸರು ಕರೆದು ಕೊಂಡು ಹೋಗಿದ್ದಾರೆ’ ಎಂದು 10 ವರ್ಷದ ಮಗಳು ಅಳುತ್ತಿದ್ದಳು. ಉದಯ ವಾಣಿ ಜತೆ ಮಾತನಾಡಿದ ಶಿವು ತಾಯಿ ಕಮಲಮ್ಮ, ಏನಾಗಿದೆ ಎಂಬುದೇ ಗೊತ್ತಾಗಿಲ್ಲ ಎಂದು ಕಣ್ಣೀರು ಹಾಕಿದರು. “ಶಾಸಕರು ನಮಗೆ ಆಶ್ರಯ ನೀಡಿದ್ದಾರೆ. ಮನೆ ಕಟ್ಟಲು ಸಹಾಯ ಮಾಡಿದ್ದು, ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಅಂತಹ ವ್ಯಕ್ತಿಗೆ ನನ್ನ ಮಗ ಹೀಗೆ ಮಾಡಿದ್ದಾನೆ ಎಂದು ನಂಬಲು ಆಗು ತ್ತಿಲ್ಲ’ ಎಂದರು.

ಕಳೆದ ಒಂದೂವರೆ ವರ್ಷದ ಹಿಂದೆ ಮಗ ರಾತ್ರಿ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಎಲ್ಲೆಂದ ರಲ್ಲಿ ಓಡಿ ಗಲಾಟೆ ಮಾಡುತ್ತಿದ್ದ. ಆಗ ಪೊಲೀಸರೇ ಬಂಧಿಸಿ ಬಳಿಕ ಆತನಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆತನಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಆ ನಂತರ ಆ ರೀತಿ ವರ್ತನೆ ತೋರಿರಲಿಲ್ಲ ಎಂದು ವಿವರಿಸಿದರು. ಶಾಸಕರಲ್ಲಿ ಕ್ಷಮೆ ಕೇಳುತ್ತೇನೆ. ಪೊಲೀಸರು ತನಿಖೆ ನಡೆಸಲಿ ಅವರಿಗೆ ಸಹಕಾರ ನೀಡುತ್ತೇವೆ. ಘಟನೆ ಏನು ಯಾಕೆ ನಡೆದಿದೆ ಎಂಬುದು ಆಮೇಲೆ ಶಾಸಕ ಬೈರತಿ ಸುರೇಶ್‌ ನಿವಾಸದ ಬಳಿ ಪೊಲೀಸರ ಭದ್ರತೆ. ಗೊತ್ತಾಗಲಿದೆ ಎಂದರು.

ನಮ್ಮ ಶಾಸಕರು ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಅವರ ಒಳ್ಳೆಯತನ ದುರುಪಯೋಗ ಆಗಿದೆ ಅನ್ನಿಸುತ್ತದೆ. ಶಿವು ಕೊಲೆ ಯತ್ನ ಮಾಡಿರುವ ಉದ್ದೇಶ ಗೊತ್ತಾಗಲೇಬೇಕು.ಹೇಮಂತ್‌, ಸ್ಥಳೀಯ ಯುವಕ

 ಬೈಕ್‌ನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆಸಿದ ಕೂಡಲೇ ಕಾರು ನಿಲ್ಲಿಸಿ ಡ್ರೈವರ್‌ ಹಾಗೂ ನಾನು ಕೆಳಗೆ ಇಳಿದು ಆತನನ್ನು ಪ್ರಶ್ನಿಸಿದೆವು. ನಮ್ಮ ಮೇಲೆಯೇ ಜಗಳ ಆರಂಭಿಸಿದ. ಆತನನ್ನು ಹಿಡಿದುಕೊಂಡಾಗ ಆತನ ಬಳಿ ಚಾಕು ಇರುವುದು ಗೊತ್ತಾಯಿತು. –ಸತ್ಯ, ಶಾಸಕರ ಗನ್‌ಮ್ಯಾನ್‌

 

-ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.